ಬಿಎಸ್‌ಎನ್‌ಎಲ್‌ನ ಶೇ. 60ರಷ್ಟು ಗ್ರಾಹಕರು 3ಜಿಯಿಂದ 4ಜಿಗೆ ಬದಲಾವಣೆ

ನಗರದಲ್ಲಿ 4ಜಿ ಸೇವೆಗೆ ಒಂದೂವರೆ ತಿಂಗಳು

Team Udayavani, Feb 28, 2020, 5:08 AM IST

ego-43

ಮಹಾನಗರ: ಬಿಎಸ್‌ಎನ್‌ಎಲ್‌ ತನ್ನ ನೆಟ್‌ವರ್ಕ್‌ ಅನ್ನು 3ಜಿಯಿಂದ 4ಜಿ ಸ್ಪೆಕ್ಟ್ರಂಗೆ ಬದಲಾವಣೆ ಮಾಡಿ ಒಂದೂವರೆ ತಿಂಗಳು ಕಳೆದಿದ್ದು, ಶೇ.60ರಷ್ಟು ಮಂದಿ ಮಾತ್ರ ತನ್ನ ನೆಟ್‌ವರ್ಕ್‌ ಸೇವೆಯನ್ನು 3ಜಿಯಿಂದ 4ಜಿಗೆ ಬದಲಾವಣೆ ಮಾಡಿಕೊಂಡಿದ್ದಾರೆ.

ಬಿಎಸ್‌ಎನ್‌ಎಲ್‌ ಕೆಲವು ತಿಂಗಳುಗಳಿಂದ 3ಜಿ ಸಿಮ್‌ ಅನ್ನು 4ಜಿಗೆ ಬದಲಾವಣೆ ಮಾಡಿ ಎಂದು ಅರಿವು ಮೂಡಿಸಿತ್ತು. ಆದರೂ ಇನ್ನೂ ಶೇ.40ರಷ್ಟು ಮಂದಿ ತಮ್ಮ ಸಿಮ್‌ ಅನ್ನು ಬದಲಾವಣೆ ಮಾಡಿಕೊಳ್ಳಲು ಬಾಕಿ ಇದ್ದಾರೆ. ಬಿಎಸ್‌ಎನ್‌ಎಲ್‌ ಸೇವಾ ಕೇಂದ್ರದಲ್ಲಿ ಮಾ. 31ರ ವರೆಗೆ ಉಚಿತವಾಗಿ 4ಜಿ ಸಿಮ್‌ಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿದೆ. ಬಳಿಕ ಸೇವಾ ಶುಲ್ಕ ನೀಡಬೇಕಾಗುತ್ತದೆ.

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಈಗಾಗಲೇ ನೀಡುತ್ತಿದ್ದ 3ಜಿ ತರಂಗಾಂತರದಿಂದ 4ಜಿಗೆ ಬದಲಾವಣೆ ಮಾಡಿ ನೆಟ್‌ವರ್ಕ್‌ ನೀಡಿದ್ದ ಬಳಿಕ ಕೆಲವು ಬಿಎಸ್‌ಎನ್‌ಎಲ್‌ ಗ್ರಾಹಕರು ಇಂಟರ್‌ನೆಟ್‌ ಸೇವೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹೇಳುವಂತೆ ಇನ್ನು ಕೆಲವು ತಿಂಗಳೊಳಗೆ ಪರಿಪೂರ್ಣವಾಗಿ 4ಜಿ ಸ್ಪೆಕ್ಟ್ರಂ ಸಂಪರ್ಕ ಜಿಲ್ಲೆಗೆ ಬರಲಿದ್ದು, ಬಳಿಕವಷ್ಟೇ ಸದ್ಯದ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಅಧಿಕಾರಿಗಳ ಕೊರತೆ
ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಇತ್ತೀಚೆಗೆ ಸ್ವಯಂ ನಿವೃತ್ತಿ (ವಿಆರ್‌ಎಸ್‌) ಆಯ್ಕೆಯನ್ನು ಘೋಷಣೆ ಮಾಡಿತ್ತು. ಇದೇ ಕಾರಣಕ್ಕೆ ಮಂಗಳೂರು ಕಚೇರಿಯಿಂದ 90ಕ್ಕೂ ಅಧಿಕ ಮಂದಿ ಸ್ವಯಂ ನಿವೃತ್ತಿ ಘೋಷಿಸಿದ್ದರು.

ಇದೀಗ ಗ್ರಾಹಕರು ಸಮಸ್ಯೆ ಹೇಳುವ ನಿಟ್ಟಿನಲ್ಲಿ ನಗರದ ಬಿಎಸ್‌ಎನ್‌ಎಲ್‌ ಪ್ರಧಾನ ಕಚೇರಿಗೆ ತೆರಳಿದಾಗ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಗಡಿಭಾಗದವರಿಗೆ ಸೇವೆಯಲ್ಲಿ ತೊಡಕು ಸದ್ಯ, ಬಿಎಸ್‌ಎನ್‌ಎಲ್‌ 4ಜಿ ಸೇವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 168 ಟವರ್‌ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಉಳ್ಳಾಲ ನೇತ್ರಾವತಿ ಸೇತುವೆಯಿಂದ ಸುರತ್ಕಲ್‌, ಮೂಲ್ಕಿ, ಪಡುಬಿದ್ರಿ, ಉಚ್ಚಿಲ ತನಕ ಮತ್ತು ಫರಂಗಿಪೇಟೆಯಿಂದ ಕಿನ್ನಿಗೋಳಿ, ಕಟೀಲು ವರೆಗೆ ಸಂಪರ್ಕ ಸಿಗುತ್ತಿದೆ. ಆದರೆ ಗಡಿಭಾಗದ ಆಸುಪಾಸಿನಲ್ಲಿರುವ ಗ್ರಾಹಕರಿಗೆ ಅತ್ತ 4ಜಿ, ಇತ್ತ 3ಜಿ ಸೇವೆಯಲ್ಲಿ ತೊಡಕು ಉಂಟಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕರು.

ಬಿಎಸ್‌ಎನ್‌ಎಲ್‌ 3ಜಿಯಿಂದ 4ಜಿಗೆ ಅಪ್‌ಗ್ರೇಡ್‌ ಆದ ಬಳಿಕ ಕೆಲವು ದಿನಗಳ ಕಾಲ ನೆಟ್‌ವರ್ಕ್‌ ಸಮಸ್ಯೆ ಉಂಟಾಗಿದ್ದು, ಕರೆಗಳು ಅರ್ಧದಲ್ಲಿ ಮೊಟಕು ಗೊಳ್ಳುತ್ತಿದ್ದವು. ಆದಾಗಿ ಸದ್ಯ ಕೆಲವೊಂದು ಮೊಬೈಲ್‌ ಟವರ್‌ಗಳಲ್ಲಿ ಈ ಸಮಸ್ಯೆ ಇನ್ನೂ ಮುಂದುವರಿದಿದೆ.

ಆ್ಯಪ್‌ ಮುಖೇನ ಮಾಹಿತಿ
“4ಜಿ ಸೇವೆ ಲಭ್ಯವಿರದ ಕೆಲವೊಂದು ಮೊಬೈಲ್‌ಗ‌ಳಲ್ಲಿ 3ಜಿ ಸೇವೆಯ ಸಮಸ್ಯೆ ಉಂಟಾಗುತ್ತಿದೆ. ತಾವು ಉಪಯೋಗಿಸುತ್ತಿರುವ ಮೊಬೈಲ್‌ 4ಜಿ ಸೇವೆಗೆ ಸಹಾಯ ಮಾಡುತ್ತದೆಯೋ ಎಂಬುವುದನ್ನು ತಿಳಿಯಲು ಗೂಗಲ್‌ ಪ್ಲೇಸ್ಟೋರ್‌ಗೆ ತೆರಳಿ “ನೋ ಯುವರ್‌ ಮೊಬೈಲ್‌’ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಅಲ್ಲಿ ಮೊಬೈಲ್‌ನ ಐಎಂಇಐ ಸಂಖ್ಯೆಯನ್ನು ದಾಖಲು ಮಾಡಿದರೆ ಮೊಬೈಲ್‌ಗೆ ಯಾವೆಲ್ಲ ನೆಟ್‌ವರ್ಕ್‌ ಸೇವೆ ಪಡೆಯಬಹುದು ಎಂಬುವುದನ್ನು ತಿಳಿಯಬಹುದು ಎನ್ನುತ್ತಾರೆ’ ಬಿಎಸ್‌ಎನ್‌ಎಲ್‌ನ ಅಧಿಕಾರಿಗಳು.

ಗ್ರಾಹಕ ಸೇವಾ ಕೇಂದ್ರದಲ್ಲಿ ಸಂಕಷ್ಟ
ನಗರದ ಸಹಿತ ಕೆಲವು ಕಡೆಗಳಲ್ಲಿ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕ ಸೇವಾ ಕೇಂದ್ರವನ್ನು ತೆರೆದಿದೆ. ಇಲ್ಲಿ ಗ್ರಾಹಕರು ತಮ್ಮ ದೂರವಾಣಿ ಕರೆಗಳ ಶುಲ್ಕ ಪಾವತಿ ಮಾಡಬಹುದು. ಸಾಮಾನ್ಯ ಗ್ರಾಹಕರ ಶುಲ್ಕ ಪಾವತಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳು ಸೇರಿದಂತೆ ವಿವಿಧ ಕಂಪೆನಿಗಳ ದೂರವಾಣಿ ಶುಲ್ಕ ಸಾವಿರಾರು ರೂ. ಇದ್ದರೆ, ಅವರು ಚೆಕ್‌ ನೀಡುತ್ತಾರೆ.
ಆದರೆ, ಗ್ರಾಹಕ ಸೇವಾ ಕೇಂದ್ರದಲ್ಲಿ ಗ್ರಾಹಕರು ಚೆಕ್‌ ಮುಖೇನ ಹಣ ಪಾವತಿಸಲು ಅವಕಾಶವಿಲ್ಲ. ಏಕೆಂದರೆ, ಗ್ರಾಹಕ ಸೇವಾ ಕೇಂದ್ರದಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಇಲ್ಲದ ಕಾರಣ ಚೆಕ್‌ ಮುಖೇನ ಹಣ ಪಾವತಿ ಮಾಡಬೇಕಾದರೆ ಮಂಗಳೂರಿನ ಕೇಂದ್ರ ಕಚೇರಿಗೆ ತೆರಳಬೇಕಾದ ಅನಿವಾರ್ಯವಿದೆ.

ಕೆಲವು ತಿಂಗಳಿನಲ್ಲಿ 4ಜಿ ಸ್ಪೆಕ್ಟ್ರಂ
ಬಿಎಸ್‌ಎನ್‌ಎಲ್‌ನ ಪರಿಪೂರ್ಣವಾದ 4ಜಿ ಸ್ಪೆಕ್ಟ್ರಂ ಸಂಪರ್ಕ ಪ್ರಕ್ರಿಯೆ ಹಂತದಲ್ಲಿದೆ. ಯಾವ ತಿಂಗಳಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಇನ್ನೂ, ಯಾವುದೇ ದಿನಾಂಕ ಪ್ರಕಟಿಸಲಿಲ್ಲ. ಮಂಗಳೂರಿನಲ್ಲಿ 3ಜಿ ಸೇವೆಯಿಂದ 4ಜಿ ಸ್ಪೆಕ್ಟ್ರಂಗೆ ಬದಲಾಯಿಸಿ ನೆಟ್‌ವರ್ಕ್‌ ನೀಡಲಾಗಿದ್ದು, ಈಗಾಗಲೇ ಶೇ.60ರಷ್ಟು ಮಂದಿ ಸಿಮ್‌ ಬದಲಾವಣೆ ಮಾಡಿಕೊಂಡಿದ್ದಾರೆ.
-ಯು.ಎಲ್‌. ಹೆಗ್ಡೆ, ಬಿಎಸ್‌ಎನ್‌ಎಲ್‌ ಮಂಗಳೂರು ನಗರ ಡಿಜಿಎಂ

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.