ಎಂಆರ್ಪಿಎಲ್ಗೆ ಒಎನ್ಜಿಸಿ ಅಧ್ಯಕ್ಷರ ಭೇಟಿ
Team Udayavani, Oct 20, 2021, 5:44 AM IST
ಮಂಗಳೂರು: ಒಎನ್ಜಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಕುಮಾರ್ ಅವರು ಎಂಆರ್ಪಿಎಲ್ ಹಾಗೂ ಘಟಕ ಕಂಪೆನಿಗಳಿಗೆ ಭೇಟಿ ನೀಡಿದರು.
ಅ. 16ರಂದು ಆಗಮಿಸಿದ್ದ ಅವರು ಅ. 18ರ ವರೆಗೆ ಉಪಸ್ಥಿತರಿದ್ದು ಕಂಪೆನಿಯ ಪ್ರಗತಿ ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಆಡಳಿತ ಮಂಡಳಿಯ ನಿರ್ದೇಶಕರು, ಜಂಟಿ ಕಾರ್ಯದರ್ಶಿ ರೋಹಿತ್ ಮಾಥುರ್, ಸ್ವತಂತ್ರ ನಿರ್ದೇಶಕ ಆರ್.ಟಿ. ಅಗರ್ವಾಲ್ ಉಪಸ್ಥಿತರಿದ್ದರು.
ಎಂಆರ್ಪಿಎಲ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸುಭಾಷ್ ಕುಮಾರ್ ಎಂಆರ್ಪಿಎಲ್ ವತಿಯಿಂದ ತಣ್ಣೀರುಬಾವಿಯಲ್ಲಿ ನಿರ್ಮಿಸಲಾಗುತ್ತಿರುವ ಉಪ್ಪುನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಂಆರ್ಪಿಎಲ್ನೊಳಗೆ ಇರುವ ಎಫ್ಜಿಟಿಯು, ಒಎಂಪಿಎಲ್ ಹಾಗೂ ಐಎಸ್ಪಿಆರ್ಎಲ್ ಘಟಕಗಳಿಗೆ ಭೇಟಿ ನೀಡಿದರು. ಅ. 17ರಂದು ಜರಗಿದ ಸಭೆಯಲ್ಲಿ ಎಂಆರ್ಪಿಎಲ್ನ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.
ಇದನ್ನೂ ಓದಿ:ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು
ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್, ಸಿವಿಒ ರಾಜೇಶ್ ಕುಶ್ವಾ, ನಿರ್ದೇಶಕ (ರೆಫೈನರಿ) ಸಂಜಯ್ ವರ್ಮಾ, ಇಲಾಂಗೋ (ಇಡಿ ರಿಫೈನರಿ), ಬಿಎಚ್ವಿ ಪ್ರಸಾದ್ (ಇಡಿ ಪ್ರಾಜೆಕ್ಟ್ ), ಜಿಜಿಎಂಗಳು, ಹಿರಿಯ ಅಧಿಕಾರಿಗಳು ಹಾಗೂ ಒಎನ್ಜಿಸಿಯ ವಿಶಾಲ್ ಶರ್ಮಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ