ಪುತ್ತೂರು ಸಂತೆಯಲ್ಲಿ ಈರುಳ್ಳಿ ದುಬಾರಿ: ಕೈ ಸುಡುವ ಭಯ!


Team Udayavani, Dec 10, 2019, 5:25 AM IST

ed-37

ಪುತ್ತೂರು: ಬೇಕಾದಷ್ಟು ಈರುಳ್ಳಿ ಶೇಖರಣೆ ಇದೆ. ಆದರೆ ಕೈ ಸುಡುವ ದರಕ್ಕೆ ಬೆದರಿರುವ ಗ್ರಾಹಕರು ಈರುಳ್ಳಿ ಖರೀದಿಯ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ!

ಕಿಲ್ಲೆ ಮೈದಾನದಲ್ಲಿ ನಡೆಯುವ ಐತಿಹಾಸಿಕ ಸೋಮವಾರದ ಪುತ್ತೂರು ಸಂತೆಯಲ್ಲಿ ಈ ವಾರವೂ ಗ್ರಾಹಕರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಈರುಳ್ಳಿ ರಾಶಿ ಕಡೆಗೆ ಆಗಮಿಸಿ ದರ ಕೇಳಿದ್ದರು. 140 ರೂ. ಎಂದೊಡನೆ ಖರೀದಿಗೆ ಹಿಂದೇಟು ಹಾಕಿದ್ದಾರೆ. ಒಂದಷ್ಟು ಮಂದಿ ಈರುಳ್ಳಿ ಖರೀದಿ ಪ್ರಮಾಣವನ್ನು ಗರಿಷ್ಠ ಅರ್ಧ ಕೆ.ಜಿ.ಗೆ ಸೀಮಿತಗೊಳಿಸಿದ್ದಾರೆ. ವಿಪರೀತ ದರ ಹೆಚ್ಚಳದ ಕಾರಣದಿಂದ ಈರುಳ್ಳಿ ಬೇಡಿಕೆ ಪ್ರಮಾಣವೂ ಕುಸಿದಿದೆ.

ಸೋಮವಾರದ ಪುತ್ತೂರು ಸಂತೆಯಲ್ಲಿ ಮಾಮೂಲಿಗಿಂತ ಈರುಳ್ಳಿ ರಾಶಿಯೂ ಕಿರಿದಾಗಿತ್ತು. ಜತೆಗೆ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಾಗಿತ್ತು.

ಶೇಖರಣೆ ಬೇಡ
ಈರುಳ್ಳಿ ಬೆಲೆ ಮಾಮೂಲಿಗಿಂತ ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ ದೈನಂದಿನ ಅಡುಗೆಯಲ್ಲಿ ಈರುಳ್ಳಿ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವತ್ತ ಗೃಹಿಣಿಯರು ಗಮನ ಹರಿಸುತ್ತಿದ್ದಾರೆ. ಅಂಗಡಿ, ಸಂತೆಗಳಲ್ಲಿ ಒಂದೆರಡು ದಿನಗಳ ಬಳಕೆಗೆ ಬೇಕಾದಷ್ಟು ಮಾತ್ರ ಖರೀದಿ ಮಾಡುತ್ತಿದ್ದಾರೆ. ದರ ಏರು-ಪೇರಿನತ್ತ ನಿಗಾ ವಹಿಸಿದ್ದಾರೆ. ಈ ಕಾರಣದಿಂದ ಈರುಳ್ಳಿ ಶೇಖರಣೆ ಮಾಡಿಡಲು ಮನಸ್ಸು ಮಾಡುತ್ತಿಲ್ಲ.

ಕೆ.ಜಿ.ಗೆ 140 ರೂ.
ಸೋಮವಾರ ಪುತ್ತೂರು ವಾರದ ಸಂತೆಯಲ್ಲಿ ಈರುಳ್ಳಿ ಕೆ.ಜಿ.ಯೊಂದಕ್ಕೆ 140 ರೂ.ಗೆ ಮಾರಾಟವಾಗಿದೆ. ಬೆಳಗ್ಗೆ ಆರಂಭದಲ್ಲಿ 100-120 ರೂ.ನ ಸಣ್ಣ ಗಾತ್ರದ ಈರುಳ್ಳಿ ಇತ್ತಾದರೂ ಸುಮಾರು 11 ಗಂಟೆಯಾಗುವಾಗ ಎಲ್ಲ ವ್ಯಾಪಾರಿಗಳಲ್ಲಿ ಸಣ್ಣ ಗಾತ್ರದ ಈರುಳ್ಳಿ ಮುಗಿದಿದೆ. ದೊಡ್ಡ ಮಟ್ಟದಲ್ಲಿ ಈರುಳ್ಳಿ ಆವಕ ಮಾಡಿಕೊಂಡು ಸಂತೆಗೆ ಬಂದ ವ್ಯಾಪಾರಿಗಳು ನಿರೀಕ್ಷಿತ ವ್ಯಾಪಾರವಿಲ್ಲದೆ ಸಪ್ಪೆ ಮೋರೆ ಹಾಕಿ ಕುಳಿತಿದ್ದರು.

ದೊಡ್ಡ ಮಟ್ಟದ ಈರುಳ್ಳಿ ವ್ಯಾಪಾರಿಗಳು ಹುಬ್ಬಳ್ಳಿ, ಪುಣೆಯಿಂದ ಈರುಳ್ಳಿಗಳನ್ನು ಸಗಟು ದರದಲ್ಲಿ ಖರೀದಿಸಿ ತರುತ್ತಾರೆ. ಈಗ ಹುಬ್ಬಳ್ಳಿಯಿಂದ ನಿರೀಕ್ಷಿತ ಪ್ರಮಾಣದ ಈರುಳ್ಳಿ ಲಭಿಸದೇ ಇರುವುದರಿಂದ ಪುಣೆ, ಭಾಗಗಳಿಗೆ ಕೇಂದ್ರೀಕರಿಸಿದ್ದಾರೆ. ಈರುಳ್ಳಿಯನ್ನು ಹೆಚ್ಚು ದಿನ ಇರಿಸಿಕೊಂಡರೆ ಹಾಳಾಗುವ, ತೂಕದಲ್ಲಿ ಇಳಿಕೆಯಾಗುವ ಭಯ ಇದೆ ಎನ್ನುತ್ತಾರೆ ವ್ಯಾಪಾರಿಗಳು.

 ಇಳಿಕೆಯ ಹಾದಿ ನಿರೀಕ್ಷೆ
ಸಾಮಾನ್ಯವಾಗಿ ಸೋಮವಾರ ಸಂತೆಗೆ ಬಂದರೆ ನಮ್ಮ ಖರೀದಿ ಖರ್ಚು 250 ರೂ.ಗೆ ಮುಗಿಯುತ್ತದೆ. ಆದರೆ ಈಗ ಈಗ ಈರುಳ್ಳಿ ಒಂದು ಕೆ.ಜಿ. ಖರೀದಿಸಿದರೆ ಉಳಿದ ತರಕಾರಿಗಳ ಖರೀದಿಗೆ ಸಾಕಾಗುವುದಿಲ್ಲ. ಈರುಳ್ಳಿ ದರ ಇಳಿಕೆಯ ಹಾದಿಯನ್ನು ನಿರೀಕ್ಷಿಸುತ್ತಿರುವುದರಿಂದ ಒಂದೆರಡು ದಿನದ ಅಗತ್ಯದಷ್ಟು ಮಾತ್ರ ಖರೀದಿಸಿದ್ದೇನೆ.
– ಸುಶೀಲಾ, ಸಂತೆಗೆ ಆಗಮಿಸಿದ ಗೃಹಿಣಿ

ಬೇಡಿಕೆ ಇಳಿಕೆ
ಸಂತೆಯಲ್ಲಿ ಈರುಳ್ಳಿ ಖರೀದಿಸುವವರ ಪ್ರಮಾಣ ವಿಪರೀತ ಇಳಿಕೆಯಾಗಿದೆ. ಸಾಮಾನ್ಯವಾಗಿ ನೀಡುವಂತೆ ಹೋಲ್‌ಸೇಲ್‌ ಅಂಗಡಿಗಳನ್ನು ಸಂಪರ್ಕಿಸಿದರೆ ಹಿಂದೆ 30-40 ಚೀಲ ಖರೀದಿಸುತ್ತಿದ್ದವರು ಈಗ 5-10 ಚೀಲಕ್ಕೆ ಇಳಿಸಿದ್ದಾರೆ. ನನ್ನಲ್ಲಿ 1 ಟನ್‌ನಷ್ಟು ಈರುಳ್ಳಿ ಇದೆ. ದರವಿದ್ದರೂ ಬೇಡಿಕೆ ಇಳಿಕೆಯಾಗಿರುವುದರಿಂದ ಸಮಸ್ಯೆಯಾಗಿದೆ.
– ರೋಶನ್‌, ಈರುಳ್ಳಿ ವ್ಯಾಪಾರಿ

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.