ನಗರಕ್ಕೆ ಬಂತು ಈಜಿಪ್ಟ್ ಈರುಳ್ಳಿ !


Team Udayavani, Nov 21, 2019, 5:34 AM IST

gg-12

ಮಹಾನಗರ: ಈರುಳ್ಳಿಯ ಬೆಳೆ ಕುಸಿತ ಮತ್ತು ಬೆಲೆ ಏರಿಕೆಯ ಕುರಿತಂತೆ ಚರ್ಚೆಗಳು ನಡೆಯುತ್ತಿರುವಾಗಲೇ ಮಂಗಳೂರಿನ ಮಾರುಕಟ್ಟೆಗೆ ಈಜಿಪ್ಟ್ ದೇಶದ ಈರುಳ್ಳಿ ಆವಕವಾಗಿದೆ.

ಬುಧವಾರ ಬೆಳಗ್ಗೆ ಲಾರಿಯಲ್ಲಿ ಪುಣೆಯಿಂದ 30 ಗೋಣಿ ಚೀಲ (1,400 ಕೆ.ಜಿ.) ಈರುಳ್ಳಿ ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ಗೆ ಬಂದಿದೆ. ನಗರದ ಪ್ರಮುಖ ಈರುಳ್ಳಿ ವ್ಯಾಪಾರ ಸಂಸ್ಥೆ ಸಾಯಿ ಟ್ರೇಡರ್ ಗೆ ಈ ವಿದೇಶಿ ಈರುಳ್ಳಿ ಬಂದಿದ್ದು, ಅನ್‌ಲೋಡ್‌ ಆದ ಕೂಡಲೇ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಇದು ವಿತರಣೆಯಾಗಿದೆ. ಮಧ್ಯಾಹ್ನದ ವೇಳೆಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಂದ ಈಜಿಪ್ಟ್ ಈರುಳ್ಳಿ ಗ್ರಾಹಕರ ಕೈಸೇರಿದೆ.

1 ಈರುಳ್ಳಿಯ ತೂಕ 250 ಗ್ರಾಂ!
ಮಂಗಳೂರಿಗೆ ವಿದೇಶಿ ಈರುಳ್ಳಿ ಇದೇ ಮೊದಲ ಬಾರಿಗೆ ಪೂರೈಕೆಯಾಗಿದೆ. ಈಜಿಪ್ಟಿಯನ್‌ ಈರುಳ್ಳಿ ದೊಡ್ಡ ಗಾತ್ರದಲ್ಲಿದ್ದು, ಸಾಮಾನ್ಯವಾಗಿ ಒಂದು ಈರುಳ್ಳಿ 250 ಗ್ರಾಂ (ಕಾಲು ಕೆ.ಜಿ.) ತೂಕವಿದೆ. ಇದರ ಬಣ್ಣ ಸ್ವಲ್ಪ ಜಾಸ್ತಿ ಕೆಂಪು ಇದ್ದು, ನೋಡಲು ಹೆಚ್ಚು ಅಂದವಾಗಿದೆ.

ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಬುಧವಾರ ಈಜಿಪಿÏಯನ್‌ ಈರುಳ್ಳಿಯ ದರ ಸಗಟು ಮಾರಾಟ ಬೆಲೆ ಕೆ.ಜಿ.ಗೆ 62 ರೂ. ಹಾಗೂ ಚಿಲ್ಲರೆ ಮಾರಾಟ ಬೆಲೆ 65 ರೂ. ಇತ್ತು. ಪೂನಾದಿಂದ ಇದು ಕೆ.ಜಿ. ಒಂದರ 50 ರೂ.ನಂತೆ ಸಾಯಿ ಟ್ರೇಡರ್ ಗೆ ತಲುಪಿದ್ದು, ಅಲ್ಲಿಂದ 57 ರೂಪಾಯಿಗೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಕೈಸೇರಿದೆ. ದೇಶೀಯ ಈರುಳ್ಳಿ ದರ ಹಳೆಯ ಈರುಳ್ಳಿಗೆ 75 ರೂ. ಹಾಗೂ ಹೊಸ ಈರುಳ್ಳಿಗೆ 70 ರೂ. ಇದೆ. ಹೊಸ ಈರುಳ್ಳಿಯಲ್ಲಿ ಸಣ್ಣ ಈರುಳ್ಳಿ ಎಂಬ ಇನ್ನೊಂದು ವೆರೈಟಿ ಇದ್ದು, ಅದರ ಬೆಲೆ 50 ರೂ. ಇದೆ.

ಬೇಡಿಕೆ ಇನ್ನೂ ತಿಳಿದಿಲ್ಲ
ಇದೇ ಮೊದಲ ಬಾರಿ ಈಜಿಪ್ಟ್ ನ ಈರುಳ್ಳಿನಗರದ ಮಾರುಕಟ್ಟೆಗೆ ಬಂದಿದೆ. ಇದರ ರುಚಿ, ಗುಣ ಮಟ್ಟ ಮತ್ತು ಗ್ರಾಹಕರ ಸ್ಪಂದನೆಯ ಬಗ್ಗೆ ಈಗ ಏನನ್ನೂ ಹೇಳಲಾಗದು. ಬೇಡಿಕೆಯ ಬಗ್ಗೆಯೂ ಇನ್ನಷ್ಟೇ ತಿಳಿದು ಬರ ಬೇಕಾಗಿದೆ. ಗ್ರಾಹಕರ ನಾಡಿ ಮಿಡಿತವನ್ನು ಗಮನಿಸಿ ಮುಂದೆ ಈ ಈರುಳ್ಳಿಯನ್ನು ಇನ್ನೂ ತರಿಸಿಕೊಳ್ಳ ಬೇಕೇ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
 - ಜೆ. ಶೇಖರ್‌, ಸಗಟು ತರಕಾರಿ ವ್ಯಾಪಾರಿ, ಸೆಂಟ್ರಲ್‌ ಮಾರ್ಕೆಟ್‌

ಟಾಪ್ ನ್ಯೂಸ್

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.