‘ಹಿಂದುತ್ವ ಅಲೆಯೇ ಸೋಲಿಗೆ ಕಾರಣ’
Team Udayavani, May 17, 2018, 10:21 AM IST
ನಿಮ್ಮ ಸೋಲಿಗೆ ಕಾರಣವಾದ ಅಂಶಗಳು?
ಹಿಂದುತ್ವದ ಅಲೆಯಿಂದ ಸೋಲಾಯಿತು. ಜನ ಸಿದ್ದರಾಮಯ್ಯ ನವರ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಪಶು ಭಾಗ್ಯ ಮರೆತರು. 94 ಸಿ, 94ಸಿಸಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತಿದೆ. ನನ್ನ ಕ್ಷೇತ್ರದಲ್ಲಿ ಗರಿಷ್ಠ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ ಸಂತೃಪ್ತಿ ಉಂಟು. ಕರ್ತವ್ಯ ಮಾಡಿದ್ದೇನೆ.
ಮುಂದೇನು ರಾಜಕೀಯ ಜೀವನ?
‘ರಾಜಕೀಯ ನನಗೆ ಉದ್ಯೋಗವಲ್ಲ. ನನಗೆ ಉದ್ಯಮವಿದೆ. ಅದನ್ನು ಎಂದಿನಂತೆ ನಡೆಸಿಕೊಂಡು ಹೋಗುತ್ತೇನೆ. ನನ್ನ ಚಿಂತೆ ಏನೆಂದರೆ ನನ್ನನ್ನು ನಂಬಿಕೊಂಡು ಬಂದಿರುವ ನನ್ನ ಪಕ್ಷದ ಕಾರ್ಯಕರ್ತರಿದ್ದಾರಲ್ಲ, ಅವರನ್ನು ನೋಡಿಕೊಳ್ಳಬೇಕಲ್ಲ?’ ಎಂದ ಅವರು ಪಕ್ಷವನ್ನು ಸದೃಢವಾಗಿ ಕಟ್ಟುವುದೇ ತನ್ನ ಮುಂದಿನ ಕರ್ತವ್ಯ ಎಂದರು.
ಗೆದ್ದವರು ನಿಮ್ಮ ಕ್ಷೇತ್ರದ ಯಾವ ಸಮಸ್ಯೆ ಮೊದಲು ಬಗೆಹರಿಸಬೇಕೆಂದು ನಿರೀಕ್ಷಿಸುವಿರಿ?
‘ಈ ಕ್ಷೇತ್ರದಲ್ಲಿ ನೀರು ಪೂರೈಕೆಯ ವಿಷಯದಲ್ಲಿ ಇನ್ನಷ್ಟು ಕೆಲಸ ಆಗಬೇಕಾಗಿದೆ. ಮೂಡಬಿದಿರೆ, ಕಿನ್ನಿಗೋಳಿ, ಬಜಪೆ,
ಮೂಲ್ಕಿ, ಹಳೆಯಂಗಡಿಯಂಥ ಪ್ರದೇಶಗಳಲ್ಲಿ ಈಗಾಗಲೇ ಫ್ಲಾಟ್ಸಿಸ್ಟಂ ಬಂದಿರೋದ್ರಿಂದ ಒಳಚರಂಡಿ ಯೋಜನೆಯನ್ನು ಅಳವಡಿಸಿಕೊಳ್ಳಲೇಬೇಕಾಗಿದೆ. ಎಡಿಬಿ ಮಾತ್ರವಲ್ಲ ಇಲ್ಲಿನ ಕೈಗಾರಿಕೋದ್ಯಮಗಳಿಂದ ಸಹಾಯ ಸಹಕಾರ ಪಡೆದುಕೊಳ್ಳಬೇಕಾಗಿದೆ’.