ತಾಲೂಕಿಗೊಂದು ಕಸಾಯಿಖಾನೆಗೆ ವಿರೋಧ
Team Udayavani, Jun 13, 2019, 5:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ತಾಲೂಕಿಗೊಂದು ಕಸಾಯಿಖಾನೆ ತೆರೆಯ ಬೇಕು ಎಂಬ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಹೇಳಿಕೆಯನ್ನು ಮಂಗಳೂ ರಿನ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಖಂಡಿಸಿದ್ದು ತಾಲೂಕಿಗೊಂದು ಗೋಶಾಲೆಯನ್ನು ತೆರೆಯ ಬೇಕು ಎಂದು ಸರಕಾರವನ್ನು ಆಗ್ರಹಿಸಿವೆ.
ರಾಜ್ಯದಲ್ಲಿ 1964ರಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, 1975ರಿಂದ ಸರ್ವಧರ್ಮದವರಿಗೂ ಅನ್ವಯಿಸುವಂತೆ ಗೋ ಬಲಿ (ಪ್ರಾಣಿಬಲಿ – ಕುರ್ಬಾನಿ) ನಿಷೇಧ ವಿದೆ. ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಆದರೆ ಈ ನಡುವೆ ಮುಸ್ಲಿಂ ಒಕ್ಕೂಟವು ಕರ್ನಾಟಕದಲ್ಲಿ ಹೊಸತಾಗಿ ಗೋಹತ್ಯಾ ನಿಷೆೇಧ ಕಾನೂನು ಜಾರಿಗೆ ಬರ ಬೇಕೆಂದು ಒತ್ತಾಯಿಸುವುದು ಮತ್ತ್ತು ಅದಕ್ಕೆ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡುವುದಾಗಿ ಹೇಳಿಕೆೆ ನೀಡಿರುವುದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಯತ್ನವಾಗಿದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೇಳಿಕೆ ಖಂಡನೀಯ
ಒಂದು ಕಡೆ ಸಾಮಾಜಿಕ ಸಾಮ ರಸ್ಯಕ್ಕೆ ಗೋಹತ್ಯೆ ನಿಷೇಧ ಕಾನೂನನ್ನು ಬೆಂಬಲಿಸುವ ಹೇಳಿಕೆ, ಇನ್ನೊಂದು ಕಡೆ ತಾಲೂಕಿಗೊಂದು ಕಸಾಯಿಖಾನೆ ತೆರೆಯ ಬೇಕೆಂದು ಒತ್ತಾಯಿಸುತ್ತಿರುವ ಮುಸ್ಲಿಮ್ ಒಕ್ಕೂಟದ ಹೇಳಿಕೆ ಖಂಡನೀಯ. ಜಿಲ್ಲೆಯಲ್ಲಿ ನಿರಂತರವಾಗಿ ಗೋವು ಗಳ ಹತ್ಯೆ, ಗೋವುಗಳ ಕಳ್ಳತನ ಮತ್ತು ಅಕ್ರಮ ಕಸಾಯಿಖಾನೆಗಳು ನಡೆ ಯುತ್ತಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೊಸದಾಗಿ ಕಸಾಯಿಖಾನೆ ತೆರೆಯಲು ಬಿಡುವುದಿಲ್ಲ ಎಂದಿದ್ದಾರೆ.
ಜಾನುವಾರು ಅಕ್ರಮ ಸಾಗಾಟದ ಸಂದರ್ಭ ವಶ ಪಡಿಸಿಕೊಂಡ ಗೋವುಗಳ ಪಾಲನೆಯ ಸಂಪೂರ್ಣ ಜವಾಬ್ದಾರಿ ಸರಕಾರದ್ದಾಗಿದ್ದರೂ ಈ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ. 300ರಿಂದ 500 ಗೋವುಗಳನ್ನು ಸರಕಾರದ ಪರವಾಗಿ ಗೋಶಾಲೆಗಳು ಸಾಕು ತ್ತಿದ್ದರೂ ಕೇವಲ 200 ದನಗಳ ಶೇ. 25 ಖರ್ಚನ್ನು (17.5 ರೂಪಾಯಿ) ಮಾತ್ರ ಸರಕಾರ ಪಾವತಿಸುತ್ತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ