104 ವರ್ಷಗಳ ಇತಿಹಾಸದ ಅನಂತಾಡಿ ಹಿರಿಯ ಪ್ರಾಥಮಿಕ ಶಾಲೆ

ನಲಿಕಲಿ ವಿಭಾಗದಲ್ಲಿ ರಾಜ್ಯಮಟ್ಟದ ಮಾದರಿ ಸಂಪನ್ಮೂಲ ಕೇಂದ್ರ

Team Udayavani, Nov 5, 2019, 8:43 PM IST

dd-3

1915 ಶಾಲೆ ಆರಂಭ
ಮುಳಿ ಹುಲ್ಲಿನ ಛಾವಣಿ ಹೊಂದಿದ್ದ ಶಾಲೆಯಲ್ಲೀಗ ಸಕಲ ಸೌಲಭ್ಯ

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕಲ್ಲಡ್ಕ: ನಲಿಕಲಿ ವಿಭಾಗದಲ್ಲಿ ರಾಜ್ಯಮಟ್ಟದ ಮಾದರಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿಕೊಂಡಿರುವ ಅನಂತಾಡಿಯ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ 1915ರಲ್ಲಿ ನೆಲೊ¤ಟ್ಟು ಎಂಬಲ್ಲಿ ಆರಂಭವಾಗಿದ್ದು ಇದೀಗ 104ರ ಹರೆಯದಲ್ಲಿದೆ.

ಪ್ರಸ್ತುತ ಶಾಲೆ ಆಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಹಳೆ ವಿದ್ಯಾರ್ಥಿ ಸಂಘಟನೆ, ಶಾಲಾಭಿವೃದ್ಧಿ ಸಮಿತಿ ಶಾಲೆಯ ಸಮಗ್ರಅಭಿವೃದ್ಧಿಗೆ ಕಾರಣವಾಗಿದೆ. ಆರಂಭದಲ್ಲಿ 1ರಿಂದ 4ನೇ ತನಕ ತರಗತಿಗಳು ಇದ್ದವು. 1985ರಲ್ಲಿ ಮುಂಭಡ್ತಿ ಪಡೆದು ಹಿ.ಪ್ರಾ. ಶಾಲೆಯಾಯಿತು. ಈಗ 187 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಶತಮಾನ ಪೂರೈಸಿದ ಶಾಲೆಗಳ ಪೈಕಿ ನಾಲ್ಕನೆಯ ಸ್ಥಾನದಲ್ಲಿದೆ.

ಮುಳಿ ಹುಲ್ಲಿನ ಶಾಲೆ
ರಸ್ತೆ ಸಂಪರ್ಕ ಇಲ್ಲದ ಕಾಲದಲ್ಲಿ ತೆಂಗಿನ ಗರಿ, ಮುಳಿ ಹುಲ್ಲಿನಿಂದ ಶಾಲೆ ನಿರ್ಮಿಸಲಾಗಿತ್ತು. 1979- 80 ಸಾಲಿನಲ್ಲಿ ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಹೆಂಚಿನ ಛಾವಣಿಯನ್ನು ನಿರ್ಮಿಸಲಾಯಿತು. ತೀರಾ ವಿರಳ ಜನಸಂಖ್ಯೆಯ ಕಾಲದಲ್ಲಿ ಅನಂತಾಡಿ – ನೆಟ್ಲಮುಟ್ನೂರು ಗ್ರಾ.ಪಂ. 6 ಮೈಲಿ ವ್ಯಾಪ್ತಿಯಲ್ಲಿ ಯಾವುದೇ ಶಾಲೆ ಇರಲಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರ ಸಾಮೂಹಿಕ ಬೇಡಿಕೆಯಂತೆ ಶಾಲೆಯನ್ನು ಊರ ಪಟೇಲರ ಅನುಮತಿಯಂತೆ ನಿರ್ಮಿಸಲಾಗಿತ್ತು. ಮೊದಲ ಮುಖ್ಯ ಶಿಕ್ಷಕರು ಮಾಂಕು ಗೌಡರು. ಉಳಿದಂತೆ ಆಗ ಸಹಶಿಕ್ಷರು ಇರಲಿಲ್ಲ. 1ರಿಂದ 4ನೇ ತರಗತಿ ತನಕ ಅನುಮತಿ ಇದ್ದುದರಿಂದ ಎಂಟು ವಿದ್ಯಾರ್ಥಿಗಳ ಸೇರ್ಪಡೆ ಆಗಿತ್ತು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು.

ಸಾಧಕ ಹಳೆ ವಿದ್ಯಾರ್ಥಿಗಳು
ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಭವ್ಯರಾಣಿ ತುಮಕೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣದ ರಾಯಭಾರಿ ಆಗಿದ್ದು, ಬಯಲು ಮುಕ್ತ ಶೌಚಾಲಯದ ಕಾರಣಕರ್ತೆಯಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟರು. ಜೆಎಸ್‌ಡಬು ಸಿಮೆಂಟ್‌ ಕಂಪೆನಿಯ ಮ್ಯಾನೇಜರ್‌ ಜಯರಾಜ್‌ ಬಾಬನಕಟ್ಟೆ, ಯುಕ್ತಿಕಾ ಗಣೇಶ್‌ ಪೂಜಾರಿ ರಾಜ್ಯಮಟ್ಟದ ವೇಟ್‌ ಲಿಫ್ಟ‌ರ್‌ ಮಹಿಳಾ ಸಾಧಕಿ ಈ ಶಾಲೆಯ ಹಳೆ ವಿದ್ಯಾರ್ಥಿಗಳು.

ಸಮಗ್ರ ಪ್ರಗತಿ
ಶಾಲೆ 2.04 ಎಕ್ರೆ ಜಾಗವನ್ನು ಹೊಂದಿದ್ದು, ವಿಶಾಲ ರಂಗಮಂಟಪ, ಆಟದ ಮೈದಾನ, ಹೈಟೆಕ್‌ ಶೌಚಾಲಯ, ನೀರು ಇಂಗಿಸುವ ಘಟಕ, ಕುಡಿಯುವ ನೀರಿನ ಬಾವಿ, ಕೊಳವೆಬಾವಿ, ಬಾಲವನ, ಕೊಠಡಿಯಲ್ಲಿ ವರ್ಲಿ ಚಿತ್ರಕಲೆ, ಗರಿಕೆ ಹುಲ್ಲಿನ ಲಾನ್‌ ಇತ್ಯಾದಿ ಸೌಕರ್ಯಗಳನ್ನು ಹೊಂದಿದೆ. ಬಾಳೆ ತೋಟ, ತರಕಾರಿ, ಫಲಪುಷ್ಪ ತೋಟವನ್ನು ಹೊಂದಿದೆ. ಪ್ರಸ್ತುತ ಅನಂತಾಡಿ ನೆಟ್ಲಮುಟ್ನೂರು ಗ್ರಾಮ ವ್ಯಾಪ್ತಿಯಲ್ಲಿ ಬಂಟ್ರಿಂಜ ಕಿ.ಪ್ರಾ. ಶಾಲೆ, ಹೇಮಾಜೆ ಕಿ.ಪ್ರಾ. ಶಾಲೆ, ನೇರಳಕಟ್ಟೆ ಹಿ.ಪ್ರಾ. ಶಾಲೆಗಳು ಆರಂಭವಾಗಿದೆ.

ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕರು
ಮಾಂಕು ಗೌಡ, ಅಮ್ಮು ಶೆಟ್ಟಿ, ನಾರಾಯಣ ಆಳ್ವ, ರಾಮ್‌ ಭಟ್‌, ದೇರಣ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಶೀಲಾ, ಸರೋಜಿನಿ, ಮುತ್ತಣ್ಣ ರೈ, ಯಶೋದಾ, ಪದ್ಮಾವತಿ, ಶ್ಯಾಮಲಾ, ಅಮ್ಮತಾಯಿ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಹಲವಾರು ಕೊಡುಗೆ ನೀಡಿದ್ದಾರೆ. ಶಾಲೆಯ ಪ್ರಗತಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೇರಳಕಟ್ಟೆ ಗೋಪಾಲಕೃಷ್ಣ ಮತ್ತು ಪದಾಧಿಕಾರಿಗಳು ನೇತೃತ್ವ ವಹಿಸಿದ್ದಾರೆ.
-ದೊಡ್ಡ ಕೆಂಪಯ್ಯ, ಮುಖ್ಯೋಪಾಧ್ಯಾಯರು

ಶಾಲೆಯ ಅಭಿವೃದ್ಧಿ ಕೆಲಸದಲ್ಲಿ ಹಳೆ ವಿದ್ಯಾರ್ಥಿಗಳು ಕೊಡುಗೆ ನೀಡಲು ಬದ್ಧರಾಗಿದ್ದಾರೆ. ನಮ್ಮ ಊರಿನ ಶಾಲೆ ಎಲ್ಲರ ಶೈಕ್ಷಣಿಕ ಉದ್ದೇಶ ಪೂರೈಸಬೇಕು ಎಂಬುದು ನಮ್ಮ ಆಶಯವಾಗಿದೆ. ಊರಿನ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸ ಈ ಶಾಲೆಯ ಮೂಲಕ ಆಗುತ್ತಿದೆ.
-ಹಷೇದ್ರ ದೇರಣ್ಣ ಶೆಟ್ಟಿ ಬಾಳಿಕೆ,
ಅಧೀಕ್ಷಕರು, ಕ್ಷೇತ್ರ ಶಿಕ್ಷಣ ಇಲಾಖೆ ಬಂಟ್ವಾಳ, ಹಳೆ ವಿದ್ಯಾರ್ಥಿ.

 ರಾಜಾ ಬಂಟ್ವಾಳ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.