ದ.ಕ. ಜಿಲ್ಲೆಗೆ ಬಂತು 21.5 ಟನ್ ಆಕ್ಸಿಜನ್
Team Udayavani, May 5, 2021, 7:02 AM IST
ಮಂಗಳೂರು: ದ.ಕ. ಜಿಲ್ಲೆಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಆಗದಂತೆ ಒಟ್ಟು 21.5 ಟನ್ ಆಕ್ಸಿಜನ್ ಅನ್ನು ಜಿಲ್ಲೆಗೆ ತರಿಸಲಾಗಿದೆ.
“ಉದಯವಾಣಿ’ ಜತೆಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು, “ಮಂಗಳವಾರ ಸಂಜೆ 5.5 ಟನ್ ಆಕ್ಸಿಜನ್ ಬಂದಿದೆ. ಬುಧವಾರ ಮುಂಜಾನೆಯೊಳಗೆ ಮತ್ತೆ 7 ಟನ್ ಹಾಗೂ 9 ಟನ್ ಪ್ರತ್ಯೇಕವಾಗಿ ಬರಲಿದೆ. ಇದನ್ನು 26 ಖಾಸಗಿ ಆಸ್ಪತ್ರೆ ಹಾಗೂ 5 ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗುತ್ತದೆ’ ಎಂದರು.
ಆಕ್ಸಿಜನ್ ತರಿಸುವ ಪ್ರಕ್ರಿಯೆ ಸಾಮಾನ್ಯ ವಾಗಿ ಎರಡು ದಿನಕ್ಕೊಮ್ಮೆ ನಿಯಮಿತವಾಗಿ ನಡೆಯುತ್ತದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಕೊರತೆ ಇಲ್ಲ ಎಂದರು.
ಪಾಲಕ್ಕಾಡ್ನಿಂದ ಕಚ್ಚಾ ವಸ್ತು ಲಭ್ಯತೆಯಲ್ಲಿ ವ್ಯತ್ಯಯವಾದ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಪರ್ಯಾಯವಾಗಿ ಬಳ್ಳಾರಿಯಿಂದಲೇ ತರಿಸುವ ಬಗ್ಗೆ ಗಮನಸೆಳೆಯಲಾಗಿದೆ ಎಂದರು.
ಹೆಚ್ಚುವರಿ ಆಕ್ಸಿಜನ್ಗೆ ಕ್ರಮ :
ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪೈಕಿ ಶೇ. 15ರಷ್ಟು ಮಂದಿಗಷ್ಟೇ ಮೆಡಿಕಲ್ ಆಕ್ಸಿಜನ್ ಅಗತ್ಯ ಬಿದ್ದಿದೆ. ಹೊಸದಾಗಿ ಬಳ್ಳಾರಿಯಿಂದ ಆಕ್ಸಿಜನ್ ತರಿಸಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಅವರು ಆಕ್ಸಿಜನ್ ಸಂಬಂಧಿತ ವಿಚಾರದ ಉಸ್ತುವಾರಿ ಆಗಿರುವ ಕಾರಣದಿಂದ ಹೆಚ್ಚುವರಿಯಾಗಿ ಆಕ್ಸಿಜನ್ ನೀಡುವ ಬಗ್ಗೆ ಅವರ ಗಮನಸೆಳೆಯಲಾಗುವುದು. – ಕೋಟ ಶ್ರೀನಿವಾಸ ಪೂಜಾರಿ, ದ.ಕ. ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ