ಅಪಘಾತ: ಪದ್ಯಾಣ ಗಣಪತಿ ಭಟ್ ದಂಪತಿಗೆ ಗಾಯ
Team Udayavani, May 20, 2019, 12:42 PM IST
ಪುತ್ತೂರು: ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ದಂಪತಿ ಸಂಚರಿಸುತ್ತಿದ್ದ ಕ್ವಿಡ್ ಕಾರು ಪಲ್ಟಿಯಾದ ಘಟನೆ ತಿಂಗಳಾಡಿ ಬಳಿಯ ತ್ಯಾಗರಾಜ ನಗರದ ತಿರುವಿನಲ್ಲಿ ರವಿವಾರ ನಡೆದಿದೆ.
ಕುಂಬ್ರ ಕಡೆಯಿಂದ ಬೆಳ್ಳಾರೆ ಕಡೆಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪದ್ಯಾಣ ಗಣಪತಿ ಭಟ್ ಅವರು ಚಲಾಯಿಸುತ್ತಿದ್ದ ಕಾರು ತ್ಯಾಗರಾಜನಗರ ಸಮೀಪ ನಿಯಂತ್ರಣ ತಪ್ಪಿ ರಸ್ತೆಯ ಇನ್ನೊಂದು ಬದಿಯ ಚರಂಡಿಗೆ ಪಲ್ಟಿ
ಯಾಗಿದೆ. ಘಟನೆಯಲ್ಲಿ ಪದ್ಯಾಣ ಗಣಪತಿ ಭಟ್ ಹಾಗೂ ಅವರ ಪತ್ನಿ ಶೀಲಶಂಕರಿ ಅವರ ತಲೆಗೆ ಗಾಯವಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಘಟನೆಯ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.