ಪಣಂಬೂರು: ಸಮುದ್ರ ಮಾಲಿನ್ಯ ತಡೆ ಪ್ರಾತ್ಯಕ್ಷಿಕೆ
Team Udayavani, Nov 16, 2019, 12:25 AM IST
ಪಣಂಬೂರು: ಸಮುದ್ರದಲ್ಲಿ ಮಾಲಿನ್ಯವಾಗದಂತೆ ಕೋಸ್ಟ್ಗಾರ್ಡ್ ಎಚ್ಚರ ವಹಿಸುವ ನಿಟ್ಟಿನಲ್ಲಿ ಕೋಸ್ಟ್ಗಾರ್ಡ್, ಎನ್ಎಂಪಿಟಿ, ಎಂಆರ್ಪಿಎಲ್ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಜಂಟಿಯಾಗಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆದವು.
ಹಡಗುಗಳಿಂದ ತೈಲ, ಆಯಿಲ್ ಜಿಡ್ಡು ಸೋರಿಕೆಯಾಗದಂತೆ ನಿಗಾ ವಹಿಸಿ ಸಮುದ್ರ ಮಾಲಿನ್ಯವಾಗದಂತೆ ತಡೆಯುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ. ತೈಲದುಂಡೆಗಳು ಮಂಗಳೂರು, ಉಡುಪಿ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದ್ದು ಇದರ ನಿಯಂತ್ರಣಕ್ಕೆ ವಿಶೇಷ ನಿಗಾ ವಹಿಸಲಾಗುತ್ತಿದೆ.
ತೈಲದುಂಡೆ ಕಂಡುಬಂದಾಗ ಅದನ್ನು ವಿಲೇವಾರಿ ಮಾಡುವ ವಿಧಾನ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಕಾರ್ಯಾಚರಣೆ ಸಂದರ್ಭ ವಿವಿಧ ಇಲಾಖೆಗಳೊಂದಿಗೆ ತುರ್ತು ಸಂವಹನ ಮತ್ತಿತರ ವಿಚಾರಗಳ ಕುರಿತ ಪ್ರಾತ್ಯಕ್ಷಿಕೆ ಜರಗಿತು. ಇದರಲ್ಲಿ ಕೋಸ್ಟ್ಗಾರ್ಡ್ ಹಡಗು ವಿಕ್ರಮ್, ಸಾವಿತ್ರಿ ಪುಲೆ, ಸ್ಪೀಡ್ ನೌಕೆಗಳು, ಎನ್ಎಂಪಿಟಿಯ ಟಗ್ಗಳು ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ