ಪಂಚಾಯತ್‌ ವಾಣಿಜ್ಯ ಸಂಕೀರ್ಣ ಏಲಂ ನಡೆಸಲು ಆಗ್ರಹ


Team Udayavani, Jul 11, 2017, 2:35 AM IST

107kbr-1.jpg

ಕುಂಬ್ರ: ಒಳಮೊಗ್ರು ಗ್ರಾಮ ಸಭೆ ಕುಂಬ್ರ ನವೋದಯ ಸಭಾ ಭವನದಲ್ಲಿ ಪಂಚಾಯತ್‌ ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಪೇಟೆಯ ಪಂಚಾ ಯತ್‌ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಅಂಗಡಿ ಕೋಣೆಗಳ ಏಲಂ ಅವಧಿ ಮುಗಿದರೂ ಮತ್ತೆ ಏಲಂ ಯಾಕೆ ನಡೆಸಿಲ್ಲ. ಇದರಿಂದ ಜನರಿಗೆ ನಷ್ಟವಾಗುತ್ತಿದೆ. ಗ್ರಾ.ಪಂ.  ಖಜಾನೆಗೆ ತುಂಬಬೇಕಾದ ಆದಾಯ ತುಂಬುತ್ತಿಲ್ಲ. ಪೇಟೆಯಲ್ಲಿ ಹೆಚ್ಚು ಬೇಡಿಕೆ ಇರುವ ವಾಣಿಜ್ಯ ಸಂಕೀರ್ಣ ಇದು ಎಂದು ಹರಿಪ್ರಸಾದ್‌ ರೈ ಹೇಳಿದರು.

ಅಂಗಡಿ ಏಲಂ ವಿಚಾರಕ್ಕೆ ಧ್ವನಿ ಗೂಡಿಸಿದ ಮಹಮ್ಮದ್‌ ಶೇಖಮಲೆ, ಪಂಚಾಯತ್‌ ಆಡಳಿತ ಅಭಿವೃದ್ಧಿಯ ಕಡೆ ಗಮನ ನೀಡದೇ ಕೇವಲ ಕೆಲವರ ಲಾಭಕ್ಕೆ ಸಹಕಾರ ನೀಡುತ್ತದೆ ಎಂದು ಗಂಭೀರ ಆರೋಪ ಮಾಡಿದರು. ಕಳೆದ  ವರ್ಷವೇ ಏಲಂ ಅವ ಧಿ ಮುಕ್ತಾಯವಾಗಿತ್ತು. ಪಂಚಾಯತ್‌ ಸಾರ್ವಜನಿಕ ಕೆಲಸಕ್ಕೆ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಪ್ರಶ್ನೆಗೆ ಉತ್ತರಿಸಿದ ಪಂಚಾಯತ್‌ ಅಧ್ಯಕ್ಷ ಯತಿರಾಜ್‌ ರೈ ಮತ್ತು ಪಿಡಿಓ ಗೀತಾ, ಪಂಚಾಯತ್‌ಗೆ ಒಳಪಟ್ಟ ವಾಣಿಜ್ಯ ಸಂಕೀರ್ಣದ ವ್ಯಾಜ್ಯವೊಂದು ಕೋರ್ಟ್‌ ನಲ್ಲಿ ಇದೆ. ಆದ್ದರಿಂದ ಎರಡನ್ನು ಒಂದೇ ಬಾರಿಗೆ ಏಲಂ ಮಾಡಲಾಗುವುದು ಎಂದರು. ಇದಕ್ಕೆ ಆಕ್ಷೇಪಿಸಿದ ಹಲವರು, ಕೋರ್ಟ್‌ ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗಲಿ. ಉಳಿದ ಅಂಗಡಿ ಕೋಣೆ ಏಲಂ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು, ಪಿಡಿಒ ಶೀಘ್ರ ಏಲಂನ ಭರವಸೆ ನೀಡಿದರು. ಚರ್ಚೆಯಲ್ಲಿ ಸಂತೋಷ್‌ ಭಂಡಾರಿ, ಮಹಮ್ಮದ್‌ ಕುಟ್ಟಿನೋಪಿನಡ್ಕ ಮತ್ತಿತರರು ಭಾಗವಹಿಸಿದ್ದರು.

ಶಾಲೆಯಲ್ಲಿ ಶಿಕ್ಷಕರ ಕೊರತೆ
ಗ್ರಾಮದ ಕುಟ್ಟಿನೋಪಿನಡ್ಕ ಮತ್ತು ಪಪುìಂಜ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಮಹಮ್ಮದ್‌ ಮತ್ತು ರಾಜೇಶ್‌ ರೈ ಪಪುìಂಜ ಹೇಳಿದರು. ಕುಟ್ಟಿನೋಪಿನಡ್ಕ ಸರಕಾರಿ ಶಾಲೆಯ ಅಡುಗೆ ಕೋಣೆ ಸಂಪೂರ್ಣ ಶಿಥಿಲಗೊಂಡು ಸೋರುತ್ತಿದೆ ಎಂದು ದೂರು ನೀಡಿದರು. ಇದಕ್ಕೆ ಶಿಕ್ಷಣ ಇಲಾಖಾ ಧಿಕಾರಿ ಉತ್ತರಿಸಿ, ಸ್ಥಳೀಯ ದಾನಿಗಳ ಸಹಕಾರದಿಂದ ಅಭಿವೃದ್ಧಿ ಪಡಿಸಲು ಸೂಚಿಸಿದರು.

ರಸ್ತೆ ಸುರಕ್ಷತಾ ನಿಯಮವಿಲ್ಲ
ಶೇಕಮಲೆ ದಬೇìತ್ತಡ್ಕ ಸಂಪರ್ಕ ರಸ್ತೆಯ ಶೇಖಮಲೆಯಲ್ಲಿ ಜಿ.ಪಂ.ನ ರಸ್ತೆ ಸುರಕ್ಷತಾ ನಿಯಮದ ಪ್ರಕಾರ ರಸ್ತೆ ನಿರ್ಮಾಣವಾಗಿಲ್ಲ. ಅಧಿಕಾರಿಗಳು ಸುರಕ್ಷತಾ ನಿಯಮದ ಕುರಿತು ಕಾಳಜಿ ವಹಿಸಿಲ್ಲ ಎಂದು ಮಹಮ್ಮದ್‌ ಶೇಖಮಲೆ ಆರೋಪಿಸಿದರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೀದಿ ದೀಪವನ್ನು ಜಿ.ಪಂ. ರಸ್ತೆ ಬಿಟ್ಟು ರಾಜ್ಯ ಹೆದ್ದಾರಿಗೆ ಹಾಕಲಾಗಿದೆ ಎಂದು ಗ್ರಾಮಸ್ಥರು ಆರೋಪಿದರು. ಚರ್ಚೆಯಲ್ಲಿ ರಾಜೇಶ್‌ ಪಲ್ಲತ್ತಾರು, ವಿನೋದ್‌ ಶೆಟ್ಟಿ ಮುಡಾಲ, ಮಹಮ್ಮದ್‌ ಪಾಲ್ಗೊಂಡಿದ್ದರು.

ಸಭೆಯ ಮಾರ್ಗದರ್ಶಿ ಅಧಿ ಕಾರಿಯಾಗಿ ಡಾ| ಸುರೇಶ್‌ ಭಟ್‌ ಮಾಹಿತಿ ನೀಡಿದರು. ಪಂಚಾಯತ್‌ ಉಪಾಧ್ಯಕ್ಷೆ ಸುನಂದಾ, ತಾ.ಪಂ. ಸದಸ್ಯ ಹರೀಶ್‌ ಬಿಜತ್ರೆ, ಸದಸ್ಯರಾದ ಮಹೇಶ್‌ ರೈ ಕೇರಿ, ಶೀನಪ್ಪ ನಾಯ್ಕ, ಶಶಿಕಿರಣ್‌ ರೈ ನೂಜಿಬೆ„ಲು, ಸುಂದರಿ, ತ್ರಿವೇಣಿ, ಚಂದ್ರಕಲಾ, ವಸಂತಿ ಆರ್‌ ಶೆಟ್ಟಿ, ಉಷಾ ನಾರಾಯಣ, ಬಾಗೀರಥಿ ಸೇರಿದಂತೆ ವಿವಿಧ ಇಲಾಖಾ ಅಧಿ ಕಾರಿಗಳು ಮಾಹಿತಿ ನೀಡಿದರು. ಪಿಡಿಒ ಗೀತಾ ವಿವಿಧ ಮಾಹಿತಿ ನೀಡಿದರು.

ದಬೇìತ್ತಡ್ಕಕ್ಕೆ ಬಸ್‌ ಬರುತ್ತಿಲ್ಲ
ದಬೇìತ್ತಡ್ಕಕ್ಕೆ ಉಪ್ಪಳಿಗೆಯಾಗಿ ನಿತ್ಯ ಬರುತ್ತಿದ್ದ ಸರಕಾರಿ ಬಸ್‌ ಅರ್ಧದಲ್ಲೆ ತಿರುಗಿ ಹೋಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಸ್‌ ಎಂದಿನಂತೆ ಸಂಚರಿಸಬೇಕು. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ರಮೇಶ್‌ ಸುವರ್ಣ ಹೇಳಿದರು.

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.