ಪಿಡಿಒ, ಕಾರ್ಯದರ್ಶಿ ವರ್ಗ-ನಿಯೋಜನೆಗೆ ಬ್ರೇಕ್‌


Team Udayavani, Dec 11, 2018, 10:36 AM IST

panchayath.jpg

ಮಂಗಳೂರು: ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಬೇರೆಡೆಗೆ ನಿಯೋಜನೆ ಯಾ ವರ್ಗಾವಣೆ ಆಗುವುದರಿಂದ ಗ್ರಾ.ಪಂ.ಗಳಲ್ಲಿ ಕೃತಕ ಸಿಬಂದಿ ಕೊರತೆ ಸೃಷ್ಟಿಯಾಗಿ ಜನರ ಕೆಲಸಗಳು ವಿಳಂಬವಾಗುವುದಕ್ಕೆ ಇನ್ನು ತಡೆ ಬೀಳಲಿದೆ.

ಗ್ರಾ.ಪಂ.ಗೆ ನೇಮಕವಾದ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕಸಹಾಯಕರನ್ನು ಇನ್ನು ಸ್ಥಳೀಯ ಮಟ್ಟದಲ್ಲಿ ವರ್ಗಾವಣೆ ಅಥವಾ ನಿಯೋಜನೆ ಮಾಡುವಂತಿಲ್ಲ. ಈಗಾಗಲೇ ವರ್ಗ  ಅಥವಾ ನಿಯೋಜನೆಗೊಂಡವರನ್ನು ತತ್‌ಕ್ಷಣವೇ ಮೂಲ ಸ್ಥಾನಗಳಿಗೆ ಹಿಂದಿರುಗಬೇಕೆಂದು ಸರಕಾರ ನೀಡಿರುವ ಆದೇಶ ಇದಕ್ಕೆ ಕಾರಣ. ಕಾರ್ಯದರ್ಶಿ ಯಾ ಪಿಡಿಒ ಇಲ್ಲ ಎಂಬ ಸಬೂಬಿಗೆ ಇನ್ನು ಮುಕ್ತಿ ದೊರೆಯಲಿದೆ. 

ಗ್ರಾ.ಪಂ.ಗೆ ನೇಮಕವಾದ ಸಿಬಂದಿಯನ್ನು ಜಿ.ಪಂ. ಅಥವಾ ತಾ.ಪಂ.ಗಳಲ್ಲಿ ಸಿಬಂದಿ ಕೊರತೆಯ ನೆಪ ಹೇಳಿ ಅಲ್ಲಿಗೆ ನೇಮಿಸಲಾದ ಪ್ರಕರಣಗಳು ಎಷ್ಟೋ ಇವೆ. ಸರಕಾರದ ಇತರ ಇಲಾಖೆಗಳಿಗೂ ನೇಮಕ ಮಾಡಿದ ಬಗ್ಗೆ ದೂರುಗಳಿದ್ದವು. ದ.ಕ. ಮತ್ತು ಉಡುಪಿ ಜಿಲ್ಲೆಯ ಸುಮಾರು 25ರಷ್ಟು ಗ್ರಾ.ಪಂ.ಗಳಲ್ಲಿ ಇಂತಹ ಸಮಸ್ಯೆ ಇದೆ. ರಾಜಕೀಯ ಒತ್ತಡ ಸಹಿತ ಹಲವು ಕಾರಣಗಳಿಂದ ಗ್ರಾ.ಪಂ. ಅಧಿಕಾರಿಗಳ ಸ್ಥಳೀಯ ವರ್ಗಾವಣೆಯೂ ಸ್ಥಳೀಯಾ ಡಳಿತಗಳಿಂದ ನಡೆಯುತ್ತಿದೆ. ಇದ ರಿಂದ ಗ್ರಾ.ಪಂ.ಗಳಲ್ಲಿ ಸಿಬಂದಿ ಕೊರತೆ ಉಂಟಾಗಿ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಇದನ್ನು ಮನಗಂಡಿ ರುವ ಸರಕಾರ ಈ ಆದೇಶ ಹೊರಡಿಸಿದೆ.

ಒಂದು ವೇಳೆ ಹುದ್ದೆಗಳು ಖಾಲಿ ಇದ್ದು, ಕಾರ್ಯನಿರ್ವಹಣೆಗೆ ತೊಂದರೆ ಯಾಗಿದ್ದಲ್ಲಿ ಸಮಾಂತರ ವೇತನ ಶ್ರೇಣಿ ಹೊಂದಿರುವ ಪಿಡಿಒಗಳು, ಗ್ರಾ.ಪಂ. ಕಾರ್ಯದರ್ಶಿಗಳು ಹಾಗೂ ದ್ವಿ. ದರ್ಜೆ ಲೆಕ್ಕಸಹಾಯಕರನ್ನು ಸೀಮಿತವಾಗಿ ನಿಯೋಜಿಸುವಂತೆ ಸೂಚಿಸಲಾಗಿದೆ.

ಅನುಮತಿ ಅಗತ್ಯ
ಅನ್ಯ ಇಲಾಖೆಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಗ್ರಾ.ಪಂ. ಸಿಬಂದಿಯ ನಿಯೋಜನೆಯೂ ರದ್ದಾಗಿ ಅವರು
ಮೂಲಸ್ಥಾನಗಳಲ್ಲಿ ವರದಿ ಮಾಡಿಕೊಳ್ಳ ಬೇಕಿದೆ. ಹೊರಜಿಲ್ಲೆಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಸರಕಾರಿ ಆದೇಶದ ಅನ್ವಯ ನಿಯೋಜನೆ ಮೇಲೆ ಕಾರ್ಯನಿರ್ವಹಿ ಸುವ ಹಾಗೂ ಜಿಲ್ಲೆಯ ಒಳಗೆ ತಾಲೂಕು ಹಾಗೂ ಇತರ ಗ್ರಾ.ಪಂ.ನಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಸಿಬಂದಿಗೂ ಈ ಆದೇಶ ಅನ್ವಯವಾಗು
ತ್ತದೆ. ಇನ್ನು ಮುಂದೆ ಸರಕಾರದ ಪೂರ್ವ ಅನುಮೋದನೆ ಇಲ್ಲದೆ ಜಿ.ಪಂ./ತಾ. ಪಂ. ಮಟ್ಟದಲ್ಲಿ ಯಾವುದೇ ರೀತಿಯ ವರ್ಗಾವಣೆ ಯಾ ನಿಯೋಜನೆ ಮಾಡಬಾರದು ಎಂದೂ ಸೂಚನೆ ನೀಡಲಾಗಿದೆ.

ಯಾರಿಗೆಲ್ಲ  ರಿಯಾಯಿತಿ? 
ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ಸಚಿವರು, ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಮಂಜೂರಾದ ಹುದ್ದೆಯಡಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪಿಡಿಒ/ಕಾರ್ಯದರ್ಶಿ ಹಾಗೂ ದ್ವಿ.ದ. ಲೆಕ್ಕ ಸಹಾಯಕರಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ.

ಪಿಡಿಒ “ಪ್ರಭಾರ’ ಕಾರ್ಯಕ್ಕೆ ಸಮ್ಮತಿ 
ಸರಕಾರದ ಹೊಸ ಆದೇಶದಂತೆ, ಪಿಡಿಒ ಹುದ್ದೆ ನಿವೃತ್ತಿ, ಅಮಾನತು ಹಾಗೂ ಇತರ ಕಾರಣಗಳಿಗೆ ತೆರವಾದಲ್ಲಿ, ಆ ಗ್ರಾ.ಪಂ.ನಲ್ಲಿ  ಗ್ರೇಡ್‌-1 ಕಾರ್ಯದರ್ಶಿ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಪ್ರಭಾರವಾಗಿ ಪಿಡಿಒ ಹುದ್ದೆಯನ್ನು ವಹಿಸಬಹುದು. ಪೂರ್ಣಕಾಲಿಕ ಗ್ರೇಡ್‌-1 ಕಾರ್ಯದರ್ಶಿ ಇಲ್ಲದಿದ್ದಲ್ಲಿ ಹತ್ತಿರದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಹೆಚ್ಚುವರಿ ಪ್ರಭಾರ ವಹಿಸಬಹುದು. ಆದರೆ ಗ್ರೇಡ್‌-2 ಕಾರ್ಯದರ್ಶಿ ಹಾಗೂ ದ್ವಿ. ದರ್ಜೆ ಲೆಕ್ಕ ಸಹಾಯಕರಿಗೆ ಪಿಡಿಒ ಹುದ್ದೆ ಪ್ರಭಾರ ವಹಿಸುವಂತಿಲ್ಲ. 

ಒಂದೆರಡು ತಿಂಗಳಲ್ಲಿ  ಪರಿಹಾರ
ಪಿಡಿಒ, ಕಾರ್ಯದರ್ಶಿ ಗಳನ್ನು ಸ್ಥಳೀಯ ಮಟ್ಟ ದಲ್ಲಿ ವರ್ಗಾವಣೆ, ನಿಯೋಜನೆ ಮಾಡುವಂತಿಲ್ಲ   ಎಂದು ಸರಕಾರದ ಆದೇಶ ಬಂದಿದೆ. ಹೀಗಾಗಿ ಜಿ.ಪಂ., ತಾ.ಪಂ.ನಲ್ಲಿ ನಿಯೋಜನೆಗೊಂಡ ಪಂಚಾಯತ್‌ ಅಧಿಕಾರಿಗಳ ವಿವರವನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲಿಗೆ ಪರ್ಯಾಯವಾಗಿ ಇತರರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದೆರಡು ತಿಂಗಳಿನಲ್ಲಿ ಈ ವಿಚಾರ ಪರಿಹಾರವಾಗಲಿದೆ. 
ಡಾ| ಸೆಲ್ವಮಣಿ, ಜಿ.ಪಂ. ಸಿಇಒ, ದ.ಕ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.