ಬಿಸಿಲಿನ ಬೇಗೆ ತಡೆಯಲಾಗದೆ ರಸ್ತೆಗೇ ಹಾಕಿದರು ಚಪ್ಪರ!

42 ಡಿಗ್ರಿ ಸೆಲ್ಸಿಯಸ್‌ಗೆ ಏರಿದ ತಾಪಮಾನ

Team Udayavani, Mar 27, 2019, 10:57 AM IST

27-March-4

ಪುತ್ತೂರು ಮುಖ್ಯರಸ್ತೆಯಲ್ಲಿ ಹಸಿರಿನ ಚಪ್ಪರ ಹಾಕಿರುವುದು.

ನಗರ : ಬಿಸಿಲಿನ ತಾಪಕ್ಕೆ ಇಬ್ಬರು ಮೃತಪಡುತ್ತಿದ್ದಂತೆ ಕೇರಳದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಸದ್ಯ ಪುತ್ತೂರಿನಲ್ಲಿಯೂ ಇದೇ ರೀತಿ ರೆಡ್‌ ಅಲರ್ಟ್‌ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೆಡ್‌ ಅಲರ್ಟ್‌ ಘೋಷಣೆಯಾದರೆ ಮಧ್ಯಾಹ್ನದ ಹೊತ್ತು ಇಂತಿಷ್ಟು ಸಮಯ ಬಿಸಿಲಿಗೆ ಹೊರ ಬರುವಂತೆಯೇ ಇಲ್ಲ. ಕೆಲ ದಿನ ಮಧ್ಯಾಹ್ನದ ಹೊತ್ತು ವಾತಾವರಣ 42 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದ ನಿದರ್ಶನವಿದೆ. ಈ ವರ್ಷ ಸುರಿದ ಭಾರೀ ಮಳೆಗೆ ದುರಂತಗಳು ಸಂಭವಿಸಿತ್ತು. ಬಳಿಕದ ಚಳಿಗಾಲದಲ್ಲಿ ವಿಪರೀತ ಥಂಡಿಯಾಗಿದ್ದು, ನೆನಪಿನಲ್ಲಿ ಉಳಿಯುವಂತಹದ್ದು. ಇದೀಗ ಬೇಸಗೆಯ ಸರದಿ. ಮಳೆ, ಚಳಿಗೆ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಬೇಸಗೆಯೂ ಪ್ರಖರತೆಯಿಂದಲೇ ಕೂಡಿದೆ.
ಪ್ರಖರತೆಯೂ ಹೆಚ್ಚುತ್ತಲಿದೆ
ಸುಡುವ ಬಿಸಿಲಿಗೆ ಹೊರಹೋಗಿ ಮೈಯೊಡ್ಡುವುದು ಸಾಧ್ಯವಿಲ್ಲದ ಮಾತು. ಹಾಗೆಂದು ದಿನನಿತ್ಯದ ಕರ್ಮಗಳನ್ನು ಮಾಡದೇ ಇರುವ ಹಾಗಿಲ್ಲ. ಆದ್ದರಿಂದ ಸುಡುವ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಬಳಿಕ ಒಂದಷ್ಟು ವಿಶ್ರಾಂತಿ ತೆಗೆದು ಕೊಳ್ಳುತ್ತಿರುವುದು ಸಾಮಾನ್ಯದ ದೃಶ್ಯವಾಗಿದೆ. ದಿನದಿಂದ ದಿನಕ್ಕೆ ಪ್ರಖರತೆ ಹೆಚ್ಚುತ್ತಾ ಸಾಗುತ್ತಿರುವ ಬೇಸಗೆ, ಹಲವು ರೋಗಗಳಿಗೂ ಕಾರಣವಾಗುತ್ತಿದೆ.
ಕೃಷಿಗೂ ಹಿನ್ನಡೆ
ಈಗಾಗಲೇ ಬಾವಿ, ಕೆರೆಗಳು ಬತ್ತಿ ಹೋಗಿವೆ. ಸಾಮಾನ್ಯವಾಗಿ ಮಾರ್ಚ್‌ವರೆಗೆ ಕೆರೆ, ಬಾವಿಗಳು ಬತ್ತುವುದಿಲ್ಲ. ಮೇ ಹೊತ್ತಿಗೆ ಬತ್ತಿ ಹೋಗುವುದು ಸಾಮಾನ್ಯ. ಒಂದು ತಿಂಗಳು ಹೇಗೋ ದಿನ ದೂಡಿದರೆ, ಬಳಿಕ ಮಳೆಗಾಲ ಎದುರಾಗುತ್ತದೆ. ಆದರೆ ಈ ವರ್ಷ ಪರಿಸ್ಥಿತಿ ಹಾಗಿಲ್ಲ. ಮಾರ್ಚ್‌ ತಿಂಗಳಲ್ಲೇ ಬಿಸಿಲಿನ ಹೊಡೆತ ಮಿತಿ ಮೀರಿದೆ. ಪರಿಣಾಮ ನೀರಿನ ಮೂಲಗಳು ಬತ್ತಿ ಹೋಗಿವೆ. ಇನ್ನು ಬೋರ್‌ವೆಲ್‌ಗ‌ಳ ಸ್ಥಿತಿ ಕೇಳಿದರೆ, ಅಲ್ಲೂ ಪರಿಸ್ಥಿತಿ ಹಾಗೇ ಇದೆ. ಬೋರ್‌ವೆಲ್‌ಗ‌ಳ ನೀರು ಕಡಿಮೆ ಆಗುತ್ತಿವೆ. ಕೃಷಿ ವಿಚಾರ ಬಿಡಿ, ಕನಿಷ್ಠ ಗ್ರಾಮ ಪಂಚಾಯತ್‌ನಿಂದ ನೀರು ಪೂರೈಕೆ ಮಾಡುವ ಬೋರ್‌ವೆಲ್‌ ಗಳು ಭಾರೀ ಪ್ರಯಾಸದಿಂದ ಕಾರ್ಯ ನಿರ್ವಹಿಸುವಂತಾಗಿದೆ.
ರಸ್ತೆಗೆ ಚಪ್ಪರ
ಪುತ್ತೂರು ಪೇಟೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ರಸ್ತೆಗೆ ಚಪ್ಪರ ಹಾಕಲಾಗಿದೆ. ಪುತ್ತೂರು ಬಸ್‌ನಿಲ್ದಾಣ ಸಮೀಪವೇ ಮುಖ್ಯರಸ್ತೆಗೆ ಹಸಿರು ಚಪ್ಪರ ಹಾಕಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಸ್ಥಳೀಯ ಅಂಗಡಿ ಮಾಲಕರು ಮಾಡಿದ ಉಪಾಯವಿದು. ತಮ್ಮ ಅಂಗಡಿಗೂ ನೆರಳಾಯಿತು. ಅಂಗಡಿಗೆ ಬರುವವರಿಗೂ ಬಿಸಿಲಿನ ರಕ್ಷಣೆ ಸಿಗಬೇಕು ಎನ್ನುವ ನೆಲೆಯಲ್ಲಿ ಇದನ್ನು ಹಾಕಲಾಯಿತು. ಇದೀಗ ಸಂಚಾರಿ ಠಾಣೆಯ ಪೊಲೀಸರಿಗೂ ಇದು ನೆರವಾದಂತಿದೆ.
ವೈಜ್ಞಾನಿಕ ಕಾರಣ
ಪುತ್ತೂರಿನಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಸಮುದ್ರ ತೀರ ಸುಮಾರು 50-55 ಕಿ.ಮೀ. ದೂರದಲ್ಲಿ ಇರುವುದೇ ತಾಪಮಾನ ಹೆಚ್ಚಾಗಲು ಕಾರಣ. ಸಮುದ್ರದ ನಡುವಿನ ತಂಪು ಗಾಳಿ, ತೀರದಲ್ಲಿರುವ ಬಿಸಿ ಗಾಳಿಯನ್ನು ಸುಮಾರು 50 ಕಿಲೋ ಮೀಟರ್‌ನಷ್ಟು ದೂರ ತಳ್ಳಿ ಬಿಡುತ್ತದೆ. ಇಂತಹ ಸಂದರ್ಭ ಪುತ್ತೂರಿನ ಆಸುಪಾಸಿನ ಪ್ರದೇಶಗಳಿಗೆ ಬಿಸಿ ಗಾಳಿಯ ಉಡುಗೊರೆ ಸಿಗುತ್ತದೆ. ಒಂದೆಡೆ ವಾತಾವರಣ, ಇನ್ನೊಂದೆಡೆ ಸಮುದ್ರದ ಬಿಸಿ ಗಾಳಿ ಒಟ್ಟಾಗಿ ಉಷ್ಣಾಂಶವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಲವಣಾಂಶಗಳ ಕೊರತೆ ಕಾಡುತ್ತದೆ
ಬಿಸಿಲಿಗೆ ಬಹುಮುಖ್ಯವಾಗಿ ಕಾಡುವ ಸಮಸ್ಯೆ ನಿರ್ಜಲೀಕರಣ. ದೇಹದಲ್ಲಿ ಲವಣಾಂಶಗಳ ಕೊರತೆ ಕಾಡುವುದು. ಈಗ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಆದಷ್ಟು ಬಿಸಿಲಿನಿಂದ ದೂರ ಇರುವುದೇ ಉತ್ತಮ. ದೇಹದ ಪ್ರಕ್ರಿಯೆಗಳಿಗೆ ತಾಪಮಾನ ಬೇಕು. ಆದರೆ ಹೆಚ್ಚು ಅಥವಾ ಕಡಿಮೆ ಆದರೂ ಸಮಸ್ಯೆ. ಹೆಚ್ಚು ಉಷ್ಣಾಂಶ ದಾಖಲಾದರೆ ಅದರಿಂದ ಹೀಟ್‌ ಸ್ಟ್ರೋಕ್‌ ಉಂಟಾಗಬಹುದು. ಪ್ರಮುಖ ಅಂಗಗಳಾದ ಹೃದಯ, ಕಿಡ್ನಿ, ಮೆದುಳಿಗೆ ಸಮಸ್ಯೆ ಆಗುವುದು.
– ಡಾ| ಸುಬ್ರಾಯ ಭಟ್‌,
     ಪುತ್ತೂರು
ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.