ಮಾರುಕಟ್ಟೆಗೆ ಲಗ್ಗೆ ಇಟ್ಟ ಮರಕೆಸು
Team Udayavani, Jul 21, 2019, 5:37 AM IST
ಸುಳ್ಯ : ಆಷಾಢ ಮಾಸದ ತಿಂಗಳ ವಿಶೇಷ ತಿನಿಸು ಪತ್ರೊಡೆಯ ರುಚಿ ಸವಿಯದವರೇ ಇಲ್ಲ. ಆಟಿ ತಿಂಗಳು ಆರಂಭದ ಹೊತ್ತಲ್ಲೇ ಘಟ್ಟದ ಮರಕೆಸು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಮೂರು ದಿನಗಳ ಹಿಂದೆ ಸುಳ್ಯ ಮಾರುಕಟ್ಟೆಗೆ ಮರಕೆಸು ಬಂದಿದ್ದು, ಕೊಡಗಿನಿಂದ ಪೂರೈಕೆಯಾಗಿದೆ. ಇವೆಲ್ಲವೂ ನಾಟಿ ಆಧರಿತ ಮರ ಕೆಸುವಾಗಿದೆ. ಕಾಡಿನಲ್ಲಿ ಪ್ರಕೃತಿದತ್ತವಾಗಿ ಮರದ ಕೊಂಬೆ, ಪೊಟರೆಗಳಲ್ಲಿ ಹುಟ್ಟುವ ಮರ ಕೆಸುವಿಗಾಗಿ ಹುಡುಕಾಟ ಆರಂಭವಾಗಿದೆ.
ಕಾಡು ಕೆಸುವಿಗೆ ಬೇಡಿಕೆ
ನಾಟಿ ಮಾಡಿದ ಮರ ಕೆಸುವಿಗಿಂತಲೂ, ಕಾಡು ಮೇಡಿನಲ್ಲಿ ಸಿಗುವ ಮರಕೆಸುವಿಗೆ ಬೇಡಿಕೆ ಹೆಚ್ಚು. ರುಚಿಯೂ ಜಾಸ್ತಿ. ಹಾಗಾಗಿ ಮಾರುಕಟ್ಟೆಗಳಲ್ಲಿ ಮರಕೆಸು ಊರಿಧ್ದೋ, ಘಟ್ಟದ್ದೂ ಎಂದು ಮೊದಲಾಗಿ ವಿಚಾರಿಸುತ್ತಾರೆ.
ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ 20ರಿಂದ 30 ರೂ. ದರ ಇತ್ತು. ಕೆಲವೆಡೆ ಎರಡು ಕಟ್ಟಿಗೆ 50 ರೂ. ಇತ್ತು. ದಿನಂಪ್ರತಿ ಇದಕ್ಕೆ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಪತ್ರೊಡೆ ಮಳೆಗಾಲದಲ್ಲಿ ಬರುವ ಸಣ್ಣಪುಟ್ಟ ರೋಗಗಳನ್ನು ದೂರ ಮಾಡುತ್ತದೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಬಡತನದ ತಿಂಗಳು ಎನ್ನುವ ಕಾರಣಕ್ಕೆ ಮರದ ಕೆಸು ಬಳಸಿದ ತಿಂಡಿಯಿಂದ ಉದರ ತುಂಬಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಪತ್ರೊಡೆಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್