ಪಯಸ್ವಿನಿಗೆ ಜೀವ ಕಳೆ: ನೀರಿನ ಹರಿವು ಹೆಚ್ಚಳ
Team Udayavani, May 10, 2018, 10:09 AM IST
ಸುಳ್ಯ: ಬಿಸಿಲ ಬೇಗೆಗೆ ಬತ್ತಿದ್ದ ಪಯಸ್ವಿನಿ ನದಿಗೆ ಜೀವಕಳೆ ಬಂದಿದ್ದು, ಮಂಗಳವಾರ ಕೊಡಗು ಭಾಗದ ವಿವಿಧೆಡೆ ಧಾರಕಾರ ಮಳೆಯಾದ ಕಾರಣ, ಪಯಸ್ವಿನಿ ನೀರಿನ ಮಟ್ಟ ಹೆಚ್ಚಿದ್ದು, ಕೆಂಬಣ್ಣದ ನೀರು ಹರಿದಿದೆ.
ಎರಡು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ಪಯಸ್ವಿನಿ ಸಂಪೂರ್ಣ ಬತ್ತಿ ನಗರದಲ್ಲಿ ಕುಡಿಯುವ ನೀರಿನ ತತ್ವಾರದ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿಯು ಕೊಡಗು ಭಾಗದಲ್ಲಿ ಸುರಿದ ಮಳೆ ನಗರ ವನ್ನು ಕಾಪಾಡಿತ್ತು. ಈ ಬಾರಿ ಮೇ ಮೊದಲ ವಾರದಲ್ಲಿ ಉರಿ ಬಿಸಿಲಿನ ತಾಪದಿಂದ ಪಯಸ್ವಿನಿ ಬತ್ತುವ ಆತಂಕ ಎದುರಾಗಿತ್ತು.
ಮಂಗಳವಾರ ಸಂಜೆ ಭಾಗಮಂಡಲ, ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಉತ್ತಮ ಮಳೆಯಾಗಿತ್ತು. ಪಯಸ್ವಿನಿ ಉಗಮ ಸ್ಥಳವಾದ ಭಾಗಮಂಡಲದಲ್ಲಿ ಮಳೆ ಪ್ರಮಾಣ ಅತ್ಯಧಿಕವಾಗಿದ್ದ ಕಾರಣ, ಪಯಸ್ವಿನಿ ಹರಿವು ಹೆಚ್ಚಿತ್ತು. ಬುಧವಾರ ಕೆಂಬಣ್ಣದ ನೀರು ನದಿಯಲ್ಲಿ ಹರಿದಿದೆ.
ಉಕ್ಕಿದ ಮರಳು ಕಟ್ಟ
ನಗರದ ಕುಡಿಯುವ ನೀರಿನ ವ್ಯವಸ್ಥೆಗಾಗಿ ನಾಗಪಟ್ಟಣದ ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಿಸಿದ ಮರಳು ಕಟ್ಟದಿಂದ ನೀರು ಉಕ್ಕಿ ಕೆಳಭಾಗಕ್ಕೆ ಹರಿದಿದೆ. ಕಳೆದ ಎರಡು ತಿಂಗಳಿನಲ್ಲಿ ಕೆಲ ದಿನಗಳಲ್ಲಿ ಅಲ್ಲಲ್ಲಿ ಮಳೆ ಸುರಿದ ಕಾರಣ, ಮರಳು ಕಟ್ಟದಲ್ಲಿ ನೀರಿನ ಕೊರತೆ ಉಂಟಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ