ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
Team Udayavani, Feb 9, 2018, 3:20 PM IST
ಸುರತ್ಕಲ್ : ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು ಶಾಂತಿ ಸಭೆಯಂತಹ ಪ್ರಮುಖ ಸಭೆಗಳಿಗೆ ಅವರನ್ನು ಕರೆ ತರುವ ಕೆಲಸ ಆಗಬೇಕಾಗಿದೆ ಎಂದು ಪಣಂಬೂರು ವಿಭಾಗೀಯ ಎಸಿಪಿ ರಾಜೇಂದ್ರ ಹೇಳಿದರು. ಸುರತ್ಕಲ್ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೀಟ್ ಪೊಲೀಸ್ ಬಲಪಡಿಸಲು ಕ್ರಮ
ಸಂಘ-ಸಂಸ್ಥೆಗಳು ಹಲವು ಇದ್ದು ಅದರ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಬೇಕು. ವಿವಿಧ ಸಮಾಜದ ಧಾರ್ಮಿಕ ಮುಖಂಡರು ಶಾಂತಿ ಸಾಮರಸ್ಯ ಕಾಪಾಡಲು ನೀಡುವ ಕೊಡುಗೆ ಶ್ಲಾಘನೀಯ. ಬೀಟ್ ಪೊಲೀಸ್ ಪದ್ಧತಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭ ಟ್ರಾಕ್ ಸಂಚಾರ ನಿರ್ವಹಣೆ ಕುರಿತಾಗಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.
ಸುರತ್ಕಲ್ ಠಾಣೆಯ ಪ್ರಭಾರ ಇನ್ ಸ್ಪೆಕ್ಟರ್ ಮಂಜುನಾಥ್, ಎಸ್ಐ ಪೂವಪ್ಪ, ಮಹಾಬಲ ಪೂಜಾರಿ ಕಡಂಬೋಡಿ,
ಯೋಗೀಶ್ ಸನಿಲ್, ಧಾರ್ಮಿಕ ಸಂಘದ ಮುಖಂಡರು, ಆಟೋ ರಿಕ್ಷಾ , ಕಾರು ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ