ಪಯಸ್ವಿನಿ ನದಿ ಹರಿವು ವೃದ್ಧಿ
Team Udayavani, Jun 17, 2019, 5:13 AM IST
ಸುಳ್ಯ : ಬಿಸಿಲ ಬೇಗೆಗೆ ಬತ್ತಿದ್ದ ಪಯಸ್ವಿನಿ ನದಿಗೆ ಜೀವಕಳೆ ಬಂದಿದೆ. ಪಯಸ್ವಿನಿ ಒಡಲಲ್ಲಿ ನೀರಿನ ಮಟ್ಟ ಹೆಚ್ಚಿದೆ. ಹರಿವಿನ ಪ್ರಮಾಣ ವೃದ್ಧಿಸಿದೆ. ಕೆಂಬಣ್ಣದ ನೀರು ಹರಿಯುತ್ತಿದೆ.
ಪಯಸ್ವಿನಿ ಉಗಮ ಸ್ಥಳದಲ್ಲಿ ಅಧಿಕ ಮಳೆ ಸುರಿಯುತ್ತಿರುವುದು ಪಯಸ್ವಿನಿ ಹರಿವು ಹೆಚ್ಚಳಕ್ಕೆ ಕಾರಣವಾಗಿತ್ತು.
ಮರಳು ಕಟ್ಟದಿಂದ ಉಕ್ಕಿದ ನೀರು
ನಗರದ ಕುಡಿಯುವ ನೀರಿಗಾಗಿ ನಾಗಪಟ್ಟಣದ ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಿಸಿದ ಮರಳು ಕಟ್ಟದಿಂದ ಹೆಚ್ಚುವರಿ ನೀರು ಕೆಳಭಾಗಕ್ಕೆ ಹರಿದಿದೆ. ಮೇ ತಿಂಗಳಲ್ಲಿ ನಗರಕ್ಕೆ ನೀರಿನ ಅಭಾವ ಕಾಡಿತ್ತು. 2 ದಿನ ಗಳಿಗೊಮ್ಮೆ ನೀರು ಪೂರೈಸಲು ನಗರಾಡಳಿತ ಆದೇಶ ಹೊರಡಿಸಿತ್ತು. ಅಷ್ಟರಲ್ಲೇ ಮಳೆ ಸುರಿದು ಆತಂಕ ದೂರ ಮಾಡಿದೆ.
ಕೆಂಬಣ್ಣದ ನೀರು ಪೂರೈಕೆ!
ಪಯಸ್ವಿನಿಯಲ್ಲಿ ನೀರು ಹರಿದರೂ ನಗರದ ಜನರಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ನದಿಯಿಂದ ನೀರೆತ್ತಿ ಶುದ್ಧೀಕರಣಗೊಂಡು ಪೂರೈಕೆ ಆಗಬೇಕು. ಆದರೆ, ಕಲ್ಲುಮುಟ್ಲು ಶುದ್ಧೀಕರಣ ಘಟಕ ಸಮರ್ಪಕ ಸಾಮರ್ಥ್ಯ ಹೊಂದಿಲ್ಲದ ಕಾರಣ ಕೆಂಬಣ್ಣದ ನೀರು ಮನೆ-ಮನೆಗೆ ಹರಿಯುತ್ತಿದೆ. ಹೀಗಾಗಿ ಜನರಿಗೆ ಅನಾರೋಗ್ಯದ ಭೀತಿ ಎದುರಾಗಿದೆ.
ಶುದ್ಧೀಕರಣ ಘಟಕ ನವೀಕರಣಕ್ಕೆ ಪ್ರಸ್ತಾವನೆ