ಬಿಂಬಶುದ್ಧಿ, ಶಾಂತಿ ಹೋಮ, ಹೊರೆಕಾಣಿಕೆ ಸಮರ್ಪಣೆ


Team Udayavani, Mar 6, 2019, 6:05 AM IST

6-march-5.jpg

ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. 5ರಂದು ಹಲವು ವೈದಿಕ ಪೂಜಾ ವಿಧಿವಿಧಾನಗಳು ಜರಗಿದವು.

ಬೆಳಗ್ಗೆ 6ರಿಂದ ಪುಣ್ಯಾಹ ನಡೆಸಲಾಯಿತು. ಅಥರ್ವಶೀರ್ಷ ಗಣಯಾಗ, ಶ್ರೀ ದುರ್ಗಾ ಪರಮೇಶ್ವರಿ ಮತ್ತು ಸಹಪರಿವಾರ ರಾಜ ರಾಜೇಶ್ವರಿ ದೇವರುಗಳಿಗೆ ಬಿಂಬಶುದ್ಧಿ, ಶಾಂತಿ ಹೋಮಗಳು, ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ ನಡೆಸಿ ಮಧ್ಯಾಹ್ನ ಮಹಾ ಪೂಜೆ ನಡೆಸಲಾಯಿತು. ಸಂಜೆ 5ರಿಂದ ಅಂಕುರಾರೋಹಣ, ಭದ್ರಕಾಳಿಗೆ ಮಂಡಲಪೂಜೆ, ಮಹಾಪೂಜೆ ಹಾಗೂ ಕುಂಡ ಶುದ್ಧಾದಿ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಬೆಳಗ್ಗೆ ಉಮಾನಾಥ್‌ ಸಂಪಿಗೆ ಮತ್ತು ಬಳಗ ದವರಿಂದ ನಾದಸ್ವರ ವಾದನ ನಡೆಯಿತು. ಶ್ರೀದುರ್ಗಾ ಭಜನ ಮಂಡಳಿ ತೆಂಕುಳಿ ಪಾಡಿಯವರಿಂದ ಭಜನೆ, ಶ್ರೀ ಸೀತಾರಾಮ ಭಜನಮಂಡಳಿ ನಾರಳ ತಂಡದವರಿಂದ ಕುಣಿತ ಭಜನೆ, ಮಧುಸೂದನ್‌ ಭಟ್‌ ಮತ್ತು ಬಳಗ ಗುರುಪುರ ತಂಡದಿಂದ ಭಜನೆ ಜರಗಿತು.

ಶ್ರೀರಾಜರಾಜೇಶ್ವರಿ ವೇದಿಕೆಯಲ್ಲಿ ಬೆಳಗ್ಗೆ ಶೀಲದಿವಾಕರ್‌ ಮಂಗಳೂರು ಅವರಿಂದ ಸುಗಮ ಸಂಗೀತ, ತೋನ್ಸೆ ಪುಷ್ಕಲ್‌ ಕುಮಾರ್‌ ಅವರಿಂದ ಹರಿಕಥೆ, ಮಧ್ಯಾಹ್ನ ಸ್ವರಾಂಜಲಿ ಕಿನ್ನಿಗೋಳಿ ಯವರಿಂದ ಭಕ್ತಿ ಸಂಗೀತ, ಶೇಷಗಿರಿದಾಸ್‌ ರಾಯಚೂರು ಅವರಿಂದ ದಾಸ ಪದಗಳು, ಸಂಜೆ ಶಾಲಿನಿ ಆತ್ಮಭೂಷಣ್‌ ಅವರಿಂದ ಭರತನಾಟ್ಯ, ರಾತ್ರಿ 7ರಿಂದ 10ರ ವರೆಗೆ ರಮೇಶ್ಚಂದ್ರ ಬೆಂಗಳೂರು ಸಂಯೋಜನೆಯಿಂದ ಸಂಗೀತ ಸಂಭ್ರಮ ಸಹಿತ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಪುತ್ತಿಗೆ ದೇವಸ್ಥಾನ, ಚೌಟರಸರ ಅರಮನೆಯಿಂದ ಹೊರೆಕಾಣಿಕೆ
ಶ್ರೀ ಕ್ಷೇತ್ರ ಪೊಳಲಿಗೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ ಹೊರೆಕಾಣಿಕೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪುತ್ತಿಗೆ ಜೋತಿಷಿ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಮೆರವಣಿಗೆಯಲ್ಲಿ ಆಗಮಿಸಿದ್ದು ಅವರನ್ನು ಪೊಳಲಿಯ ಅರ್ಚಕ ವೃಂದದವರು ಸ್ವಾಗತಿಸಿದರು.

ಆಳ್ವಾಸ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ರಾಜರಾಜೇಶ್ವರಿ ವೇದಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು ಜನಮನಸೂರೆಗೊಂಡವು. ಮಾ. 4ರ ಸಂಜೆ 7ರಿಂದ ಆಳ್ವಾಸ್‌ ಪ್ರತಿಷ್ಠಾನದ 350 ವಿದ್ಯಾರ್ಥಿ ಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ವಿಶೇಷ ಆಕರ್ಷಣೆ ಒದಗಿಸಿದ್ದವು. ದೇಶ-ವಿದೇಶಗಳ ವಿದ್ಯಾರ್ಥಿಗಳು ಭಾಗವಹಿಸಿ ಕಲೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲ್ಲಕಂಬ ಕಸರತ್ತು ಮೈನವಿರೇಳಿಸಿತ್ತು. ಇದರೊಂದಿಗೆ ಹಗ್ಗದೊಂದಿಗೆ ನಾನಾ ಕಸರತ್ತುಗಳನ್ನು ನಡೆಸಿಕೊಟ್ಟರು. ಡೋಲು ಕುಣಿತ, ಮಣಿಪುರ ಶೈಲಿ-ಪಂಜಾಬಿ ಶೈಲಿಯ ನೃತ್ಯಗಳು ವಿಶೇಷ ಆಕರ್ಷಣೆ ಒದಗಿಸಿದ್ದವು. ರಾತ್ರಿ 11 ಗಂಟೆ ಯವರೆಗೆ ಆಳ್ವಾಸ್‌ ಸಾಂಸ್ಕೃತಿಕ ವೈಭವ ಜರಗಿದವು. ಇದರ ಜತೆಗೆ ನಾನಾ ತಂಡಗಳಿಂದ ಚೆಂಡೆವಾದನವೂ ನಡೆಯಿತು.

ಹೊರೆಕಾಣಿಕೆ ಸಮರ್ಪಣೆ 
ಬ್ರಹ್ಮಕಲಶೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹೊರೆಕಾಣಿಕೆ ಆಗಮಿಸುತ್ತಿದ್ದು, ಉಗ್ರಾಣ ಬಹುತೇಕ ಭರ್ತಿಯಾಗಿದೆ. ಮೊನ್ನೆಯಿಂದ ದಿನಂಪ್ರತಿ ಹೊರೆಕಾಣಿಕೆ ಆಗಮಿಸುತ್ತಲೇ ಇರುವುದು ಹೊಸ ದಾಖಲೆ ಎನಿಸಿದೆ. ಸ್ವಯಂಸೇವಕರ ತಂಡದವರು ಹೊರೆಕಾಣಿಕೆಗಳನ್ನು ವಾಹನಗಳಿಂದ ಇಳಿಸಿ ಉಗ್ರಾಣದಲ್ಲಿ ತುಂಬಿಸುತ್ತಿದ್ದಾರೆ. ಹಲಸು, ಸೌತೆ, ಕುಂಬಳಕಾಯಿ. ಚೀನಿಕಾಯಿ, ಅಡಿಕೆ, ಸೀಯಾಳ, ಅಕ್ಕಿ, ಬಾಳೆ ಎಲೆ, ಪಾತ್ರೆಗಳಿಂದ ಉಗ್ರಾಣ ತುಂಬಿತುಳುಕುತ್ತಿದೆ. ಹೊರೆಕಾಣಿಗೆ ಅರ್ಪಿಸುವ ಭಕ್ತರಿಗೆ ಪ್ರಸಾದ ವಿತರಿಸಿ, ಕೃತಜ್ಞತೆ ಪತ್ರ ನೀಡಲಾಗುತ್ತಿದೆ. ಮೊನ್ನೆ ಒಟ್ಟು ಸುಮಾರು 8,000 ಪ್ರಸಾದ ವಿತರಿಸಲಾಗಿದ್ದು, ನಿನ್ನೆ ಸುಮಾರು 10,500 ರಷ್ಟು ಪ್ರಸಾದ ವಿತರಿಸಲಾಗಿದೆ. 

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.