ಮೀನುಗಾರಿಕೆ ಆರಂಭಕ್ಕೆ ತಯಾರಿ; ದಕ್ಕೆಯಲ್ಲಿ ಗರಿಗೆದರಿದ ಚಟುವಟಿಕೆ!


Team Udayavani, Jul 29, 2021, 4:40 AM IST

ಮೀನುಗಾರಿಕೆ ಆರಂಭಕ್ಕೆ ತಯಾರಿ; ದಕ್ಕೆಯಲ್ಲಿ ಗರಿಗೆದರಿದ ಚಟುವಟಿಕೆ!

ಮಹಾನಗರ: ಮೀನುಗಾರಿಕೆ ಋತು ಮತ್ತೆ ಆರಂಭಗೊಳ್ಳುತ್ತಿದ್ದು, ಆ. 1ರಿಂದ ಪಶ್ಚಿಮ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳು ಕಡಲಿಗಿಳಿಯಲು ಸಿದ್ಧತೆ ನಡೆಸಿವೆ. ಹೀಗಾಗಿ ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಬಿರುಸಿನ ಚಟುವಟಿಕೆ ಕೂಡ ಶುರುವಾಗಿದೆ.

ಆ. 1ರಿಂದಲೇ ಬೋಟ್‌ಗಳು ಕಡ ಲಿಗಿಳಿಯುವುದು ಸದ್ಯದ ಪ್ರಕಾರ ಅನುಮಾನವಾದರೂ ಆಗಸ್ಟ್‌ ಮೊದಲ ವಾರದ ಬಳಿಕ ಹಂತ ಹಂತವಾಗಿ ಬೋಟ್‌ಗಳು ಮೀನುಗಾರಿಕೆ ಆರಂಭಿಸುವ ಲಕ್ಷಣ ಕಂಡುಬಂದಿದೆ. ಇದಕ್ಕಾಗಿ ಎಲ್ಲ ಬೋಟ್‌ಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದ್ದು, ಅಂತಿಮ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಆಳ ಸಮುದ್ರ ಮೀನುಗಾರಿಕೆಯಲ್ಲಿ ಆದಾಯದ ಶೇ. 50ರಷ್ಟು ಭಾಗ ಬೋಟ್‌ಗಳಿಗೆ ಬಳಸುವ ಡೀಸೆಲ್‌ಗೆ ಖರ್ಚಾಗುವ ಹೊರೆ, ಹವಾಮಾನ ವೈಪರಿತ್ಯದ ಭಯ, ಸಮುದ್ರ ಮಾಲಿನ್ಯ ಸಹಿತ ವಿವಿಧ ಆತಂಕದಿಂದಾಗಿ ಕೆಲವು ವರ್ಷದಿಂದ ಮೀನುಗಾರಿಕೆ ಯಶಸ್ವಿಯಾಗಿ ನಡೆದಿರಲಿಲ್ಲ. ಜತೆಗೆ ಕಳೆದ ವರ್ಷದಿಂದ ಎದುರಾದ ಲಾಕ್‌ಡೌನ್‌ನಿಂದ ಮೀನುಗಾರಿಕೆಗೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇಂತಹ ಸಮಸ್ಯೆ- ಸವಾಲುಗಳನ್ನು ಎದುರಿಸುತ್ತ ಈ ಬಾರಿ ಹೊಸ ಆಶಾಭಾವದೊಂದಿಗೆ ಬೋಟ್‌ಗಳು ಕಡಲಿಗಿಳಿಯಲು ಸಿದ್ಧತೆ ನಡೆಸಲಾಗಿವೆ.

ಮಂಗಳೂರು ದಕ್ಕೆಯಿಂದ ಸಾವಿ ರಾರು ಮೀನುಗಾರಿಕೆ ಬೋಟ್‌ಗಳು ಕಾರ್ಯನಿರ್ವಹಿಸುತ್ತಿದ್ದು ಹೊರರಾಜ್ಯದ ಕಾರ್ಮಿಕರು ಅಧಿಕವಿರುತ್ತಾರೆ. ಮೀನು ಗಾರಿಕೆ ರಜೆ ಕಾರಣದಿಂದ ಮೇ ಅಂತ್ಯ ದಲ್ಲಿ ಊರಿಗೆ ತೆರಳಿದ ಅವರು ಇದೀಗ ತಂಡ ತಂಡವಾಗಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.

ಮೀನುಗಾರರಿಗೆ ಕರ ರಹಿತ ದರದ ಡೀಸೆಲ್‌:

2015-16ರಿಂದ ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋ ಲೀಟರ್‌ ಡೀಸೆಲ್‌ ಮೇಲಿನ ಮಾರಾಟ ಕರವನ್ನು ಮರುಪಾವತಿಸಲಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿ ಯನ್ನಾಗಿಸಲು 2021-22ನೇ ಸಾಲಿನಿಂದ “ಡೀಸೆಲ್‌ ಡೆಲಿವರಿ ಪಾಯಿಂಟ್‌’ನಲ್ಲೇ ಕರ ರಹಿತ ದರದಲ್ಲಿ ಡೀಸೆಲ್‌ ಅನ್ನು ವಿತರಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಹೀಗಾಗಿ ಸಬ್ಸಿಡಿ ಪಡೆಯಲು ಸಮಸ್ಯೆ ಅನುಭವಿಸುತ್ತಿರುವ ಮೀನುಗಾರರಿಗೆ ನೆಮ್ಮದಿಯ ಸುದ್ದಿ ಸರಕಾರ ನೀಡಿದೆ. ಇದು ಆಗಸ್ಟ್‌ನಿಂದಲೇ ಜಾರಿಯಾಗುತ್ತಿರುವುದು ಮೀನುಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ತೈಲ ಕಂಪೆನಿಗೆ “ಕರ’ ನೀಡಲಿದೆ ಸರಕಾರ! :

ಒಂದು ಬೋಟ್‌ ಒಮ್ಮೆ ಮೀನುಗಾರಿಕೆಗೆ ತೆರಳಲು 6,500 ಲೀ. ಡೀಸೆಲ್‌ ಬೇಕು. 1 ಲೀಟರ್‌ ಡೀಸೆಲ್‌ ದರದಲ್ಲಿ ಒಳಗೊಂ ಡಿರುವ “ಮಾರಾಟ ಕರ’ವನ್ನು ಸಬ್ಸಿಡಿ ರೂಪ ದಲ್ಲಿ ಸರಕಾರ ಮೀನುಗಾರರಿಗೆ ನೀಡುತ್ತಾ ಬಂದಿದೆ. ಪ್ರತೀ ತಿಂಗಳಿಗೆ ಒಂದು ದೊಡ್ಡ ಬೋಟ್‌ಗೆ ಗರಿಷ್ಠ 9,000 ಲೀಟರ್‌ ಡೀಸೆಲ್‌ವರೆಗೆ ಸಬ್ಸಿಡಿ ದೊರೆಯುತ್ತದೆ.

ಆ. 1ರಿಂದ ಮೀನುಗಾರಿಕೆ ಅನುಮಾನ! :

ಸರಕಾರದ ಅನುಮತಿಯ ಪ್ರಕಾರ ಆ. 1ರಿಂದ ಮೀನುಗಾರಿಕೆ ಆರಂಭ ವಾಗಲಿದೆ. ಆದರೆ ಮೀನುಗಾರಿಕೆ ಬೋಟ್‌ಗಳ ಮಾಲಕರ ಡೀಸೆಲ್‌ ಪಾಸ್‌ಬುಕ್‌ ಸಂಬಂಧಿತ ಕೆಲವು ಸಮಸ್ಯೆ, ಕರ ರಹಿತ ದರದ ಡೀಸೆಲ್‌ ವಿಚಾರದಲ್ಲಿ ಮೀನುಗಾರರಿಗೆ ಕೆಲವು ಗೊಂದಲದ ಕಾರಣದಿಂದ ಬಹುತೇಕ ಬೊಟ್‌ಗಳು ಆ. 1ರಿಂದಲೇ ಕಡಲಿಗಿಳಿಯುವುದು ಬಹುತೇಕ ಅನುಮಾನ. ಈ ಬಗ್ಗೆ ಟ್ರಾಲ್‌ಬೋಟ್‌ ಮೀನುಗಾರರ ಸಂಘದ ಮಹತ್ವದ ಸಭೆ ಜು. 31ರಂದು ಮಂಗಳೂರಿ ನಲ್ಲಿ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಮಧ್ಯೆ ಪರ್ಸಿನ್‌ ಮೀನುಗಾರರ ಸಂಘದ ಮಹತ್ವದ ಸಭೆ ಆ. 4ರಂದು ನಡೆಯಲಿದ್ದು, ಆ. 6ರಂದು ವಿಶೇಷ ಪೂಜೆ ಆಗಿ ಆ. 8ರ ಬಳಿಕ ಮೀನುಗಾರಿಕೆ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.  ಕಳೆದ ವರ್ಷ ಆಗಸ್ಟ್ ನಲ್ಲಿ  ಪ್ರಾರಂಭವಾಗಬೇಕಾದ ಮೀನು ಗಾರಿಕೆ ಕೊರೊನಾದಿಂದ ಸೆಪ್ಟಂಬರ್‌ನಲ್ಲಿ ಆರಂಭವಾಗಿತ್ತು.

ಈ ಹಿಂದೆ ಮಾರಾಟ ಕರ 1 ಲೀ.ಗೆ 8 ಸುಮಾರು ರೂ. ಇದ್ದರೆ, ಈಗ ಈ ಮೊತ್ತ 14 ರೂ.ಗೆ ಏರಿಕೆಯಾಗಿದೆ. ಈ ಮೊತ್ತ ಸಬ್ಸಿಡಿ ರೂಪದಲ್ಲಿ ಸಿಗು ತ್ತಿತ್ತು. ಮುಂದಿನ ದಿನದಲ್ಲಿ ಇದು ಬದಲಾಗಲಿದೆ. ಇದರಂತೆ ಜಿಲ್ಲೆಯ 5 ಅನುಮೋದಿತ ಡೀಸೆಲ್‌ ಬಂಕುಗಳಲ್ಲಿ ಮಾರಾಟ ಕರವನ್ನು ಕಡಿತ ಮಾಡಿಯೇ ಮೀನುಗಾರರಿಗೆ ಡೀಸೆಲ್‌ ನೀಡಲಾಗುತ್ತದೆ. ಈ ಕರವನ್ನು ಸರಕಾರವು ಸಂಬಂಧಿತ ತೈಲ ಕಂಪೆನಿಯವರಿಗೆ ನೀಡಲಿದೆ. 2020-21ರ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ 1,924 ಕೋ.ರೂ. ಮೌಲ್ಯದ 1,39,714 ಟನ್‌ ಮೀನು ಲಭ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ (2,031 ಕೋ.ರೂ. ಮೌಲ್ಯದ 1,79,944 ಟನ್‌)ಇದು ಕುಸಿತ ಆಗಿತ್ತು.

ಆ. 1ರಿಂದ ಮೀನುಗಾರಿಕೆ ಆರಂಭಿಸಲು ಅನುಮತಿ ಯಿದೆ. ಈ ಬಾರಿ ಮೀನುಗಾರರಿಗೆ ಡೀಸೆಲ್‌ ಡೆಲಿವರಿ ಪಾಯಿಂಟ್‌ನಲ್ಲೇ ಕರರಹಿತ ದರದಲ್ಲಿ ಡೀಸೆಲ್‌ ಅನ್ನು ವಿತರಿಸಲಾಗುತ್ತದೆ. ಆಗಸ್ಟ್‌ ತಿಂಗಳಿಗೆ 1975 ಕೆಎಲ್‌ ತೆರಿಗೆ ರಹಿತ ಡೀಸೆಲ್‌ ಕೂಡ ಮಂಜೂರಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. -ಹರೀಶ್‌, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ-ಮಂಗಳೂರು

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.