ಪ್ರಧಾನಿ ಮೋದಿ ರೋಡ್‌ ಶೋ: ಸನಿಹದಲ್ಲೇ ವೀಕ್ಷಿಸಿ ಜೈಕಾರ ಹಾಕಿದ ಜನತೆ


Team Udayavani, Sep 3, 2022, 11:17 AM IST

ಪ್ರಧಾನಿ ಮೋದಿ ರೋಡ್‌ ಶೋ: ಸನಿಹದಲ್ಲೇ ವೀಕ್ಷಿಸಿ ಜೈಕಾರ ಹಾಕಿದ ಜನತೆ

ಮಂಗಳೂರು: ಪ್ರಧಾನಿ ಮೋದಿ ಯವರನ್ನು ಸನಿಹದಿಂದ ವೀಕ್ಷಿಸಬೇಕೆಂಬ ಹಲವು ಮಂದಿಯ ಆಸೆ ಶುಕ್ರವಾರ ಈಡೇರಿತು. ಸಮಾವೇಶದಿಂದ ವಾಪಸ್‌ ತೆರಳುವಾಗ ಸಭಾಂಗಣದ ಮುಖ್ಯದ್ವಾರದಿಂದ ಕೂಳೂರು ಮೇಲ್ಸೇತುವೆಯ ವರೆಗಿನ ಹೆದ್ದಾರಿಯ ವರೆಗೆ ಸುಮಾರು 150 ಮೀಟರ್‌ವರೆಗೂ ಪ್ರಧಾನಿಯವರ ಕಾರು ತೀರಾ ನಿಧಾನವಾಗಿ ಸಂಚರಿ ಸಿತು. ಪ್ರಧಾನಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದವರ ಕಡೆಗೆ ಕಾರಿನೊಳಗಿಂದಲೇ ಕೈ ಬೀಸುತ್ತ ತೆರಳಿದರು. ಆಗ “ಮೋದಿ… ಮೋದಿ’ ಎಂಬ ಘೋಷಣೆ ಮೊಳಗಿತು. ಬಿಸಿಲಿನ ಧಗೆ ಇದ್ದರೂ ಕಾರ್ಯಕರ್ತರ ಉತ್ಸಾಹ ಕುಗ್ಗಿರಲಿಲ್ಲ. 2019ರಲ್ಲಿ ಪ್ರಧಾನಿ ಮಂಗಳೂರಿಗೆ ಭೇಟಿ ನೀಡಿದ್ದಾಗಲೂ ರೋಡ್‌ ಶೋ ಮಾಡಿದ್ದರು. ಅನಂತರ ಕೆಲವು ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಇಲ್ಲಿನ ಜನತೆಯ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನಿಯಂತ್ರಣಕ್ಕೆ ಹರಸಾಹಸ
ಉತ್ಸಾಹಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು, ಅರೆ ಸೇನಾ ಪಡೆಯವರು ಹರಸಾಹಸ ಪಟ್ಟರು.
ಬಹುತೇಕ ಕಾರ್ಯಕರ್ತರು ಸಭಾಂಗಣದೊಳಗೆ ತೆರಳಿದ್ದರೂ ಇನ್ನೂ ಸಾವಿರಾರು ಮಂದಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಜಮಾಯಿಸಿ ಮೋದಿಯವರನ್ನು ಸನಿಹದಿಂದ ನೋಡಲು ಕಾತರಿಸುತ್ತಿದ್ದರು. ರಸ್ತೆಯ ಎರಡು ಬದಿಗಳಲ್ಲಿ ಬಲವಾದ ತಡೆಬೇಲಿಗಳನ್ನು ಅಳವಡಿಸಲಾಗಿತ್ತು. ಆದರೂ ಕಾರ್ಯಕರ್ತರು ಪದೇ ಪದೆ ಬ್ಯಾರಿಕೇಡ್‌ ದಾಟಿ ಮುನ್ನು ಗ್ಗಲು ಯತ್ನಿಸುತ್ತಿದ್ದರು. ಪ್ರಧಾನಿ ಸಭಾಂಗಣ ದೊಳಗೆ ಆಗಮಿಸಿದ ಕೂಡಲೇ ಸಭಾಂಗಣದ ಎಡಭಾಗದ ದ್ವಾರದ ಕಡೆಯಲ್ಲಿದ್ದ ಬ್ಯಾರಿಕೇಡನ್ನು ದೂಡಿ ಕೆಲವು ಮಂದಿ ರಸ್ತೆಗೆ ಧಾವಿಸಿದರು. ಪೊಲೀಸರು ಕಾರ್ಯಕರ್ತರನ್ನು ತಡೆದು ವಾಪಸ್‌ ಕಳುಹಿಸಿದರು. ಪ್ರಧಾನಿ ಭೇಟಿಯ ಮೊದಲು ಒಂದೆರಡು ಬಾರಿ ಪೊಲೀಸರು ಲಘು ಲಾಠಿಚಾರ್ಜ್‌ ಮಾಡಿದರು.

6 ತಾಸು ಹೆದ್ದಾರಿ ಸ್ತಬ್ಧ
ಎಸ್‌ಪಿಜಿ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿಯ ಬೈಕಂಪಾಡಿ ಯಿಂದ ಕೆಪಿಟಿಯ ವರೆಗೆ 10 ಕಿಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಯಾವುದೇ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಕೂಳೂರು ಪರಿಸರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಪೊಲೀಸರ ಸೂಚನೆಯಂತೆ ಮುಚ್ಚಲಾಗಿತ್ತು.

ರಸ್ತೆ ಮೂಲಕ ನಿರ್ಗಮನ
ಹವಾಮಾನ ವೈಪರೀತ್ಯದಿಂದಾಗಿ ಮೋದಿಯವರು ಹೆಲಿಕಾಪ್ಟರ್‌ ಬದಲಾಗಿ ರಸ್ತೆ ಮಾರ್ಗದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದರು. ಬದಲಿ ಮಾರ್ಗವನ್ನು ಹಿಂದೆಯೇ ನಿಗದಿಗೊಳಿಸಲಾಗಿತ್ತು. ಸುಮಾರು 4 ಗಂಟೆಯ ವೇಳೆಗೆ ಮೋಡ ಆವರಿಸತೊಡಗಿದ್ದು, ಸಂಜೆಯ ವೇಳೆಗೆ ಪ್ರತಿಕೂಲ ಹವಾಮಾನ ಉಂಟಾಯಿತು. ಇದರಿಂದಾಗಿ ಪ್ರಧಾನಿ ಹೆಲಿಕಾಪ್ಟರ್‌ ಬದಲಿಗೆ ಕಾರಿನ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು.

ನಾಪತ್ತೆಯಾಗಿದ್ದ ಬಾಲಕಿಯನ್ನು ಮನೆಗೆ ತಲುಪಿಸಿದ ಪೊಲೀಸರು
ಸಮಾವೇಶಕ್ಕೆ ಬಂದು ಜನಜಂಗುಳಿಯ ನಡುವೆ ಹೆತ್ತವರ ಕೈತಪ್ಪಿ ನಾಪತ್ತೆಯಾಗಿದ್ದ ಕಾವೂರು ಜ್ಯೋತಿನಗರದ ನಾಲ್ಕನೇ ತರಗತಿಯ ಬಾಲಕಿಯೋರ್ವಳನ್ನು ಪೊಲೀಸರು ಆಕೆಯ ಮನೆಗೆ ತಲುಪಿಸಿದ್ದಾರೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿಸಿದ್ದಾರೆ.
– ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

ಟಾಪ್ ನ್ಯೂಸ್

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

ಅಧಿಕಾರಕ್ಕಾಗಿ ಪಿಎಫ್‌ಐಯ ರಾಜಕೀಯ ಮುಖವಾದ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಹೊಂದಾಣಿಕೆ: ನಳಿನ್‌

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.