ಆನ್‌ ಲೈನ್‌ ನೋಂದಣಿ ಎಡವಟ್ಟು


Team Udayavani, Nov 20, 2018, 2:10 AM IST

online-registration-600.jpg

ಬೆಳ್ತಂಗಡಿ: ಪ್ರತಿಯೊಂದು ಕುಟುಂಬವು ಸ್ವಂತ ಸೂರು ಹೊಂದಬೇಕು ಎಂಬ ಹಿನ್ನೆಲೆಯಲ್ಲಿ ಸರಕಾರವು ರಾಜೀವ ಗಾಂಧಿ ವಸತಿ ನಿಗಮದ ಮೂಲಕ ವಿವಿಧ ವಸತಿ ಯೋಜನೆಗಳಿಂದ ವಸತಿ ಭಾಗ್ಯ ಕಲ್ಪಿಸುತ್ತಿದ್ದು, ಆನ್‌ಲೈನ್‌ ನೋಂದಣಿಯ ಎಡವಟ್ಟು ಮನೆ ಮಂಜೂರಾದರೂ ಮಂಜೂರಾತಿ ಪತ್ರ ಹಾಗೂ ಅನುದಾನ ಬಾರದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ವಸತಿ ಯೋಜನೆಯಲ್ಲಿ ಪಾರದರ್ಶಕತೆಯನ್ನು ತರುವ ಹಿನ್ನೆಲೆಯಲ್ಲಿ ಮಂಜೂರಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗಿದ್ದು, ಇದೀಗ ಫಲಾನುಭವಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಗ್ರಾ.ಪಂ.ಗಳು ಫಲಾನುಭವಿಗೆ ಮನೆ ನೀಡಿದರೂ ಆನ್‌ಲೈನ್‌ ಪ್ರಕ್ರಿಯೆಯಲ್ಲಿನ ಎಡವಟ್ಟಿನಿಂದ ಮಂಜೂರಾತಿ ಪ್ರಕ್ರಿಯೆ ಗೊಂದಲದಲ್ಲಿದೆ.

ಮ್ಯಾಚ್‌ ಸ್ಕೋರ್‌ 50 ಶೇ.
ಫಲಾನುಭವಿಗಳಿಗೆ ವಸತಿ ಮಂಜೂರಾದ ತತ್‌ಕ್ಷಣ ಪ್ರಾರಂಭದಲ್ಲಿ ಕುಟುಂಬದ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡನ್ನು ಲಿಂಕ್‌ ಮಾಡಿಕೊಂಡು ನೋಂದಣಿ ಕಾರ್ಯ ನಡೆಸಬೇಕಾಗುತ್ತದೆ. ಈ ಸಂದರ್ಭ ಫಲಾನುಭವಿಗಳ ಕುಟುಂಬದ ಸದಸ್ಯರ ಹೆಸರಿನ ಮುಂದೆ ‘ಮ್ಯಾಚ್‌ ಸ್ಕೋರ್‌’ ಎಂಬ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ ಪ್ರತಿಯೊಬ್ಬರ ನೋಂದಣಿಯೂ 50 ಶೇ.ಕ್ಕಿಂತ ಕಡಿಮೆ ಇದ್ದರೆ ನೋಂದಣಿ ಪ್ರಕ್ರಿಯೆ ಮುಂದುವರಿಯುವುದೇ ಇಲ್ಲ. ಉದಾಹರಣೆಗೆ ಕುಟುಂಬದ ಒಬ್ಬ ಸದಸ್ಯನ ಆಧಾರ್‌ ಹಾಗೂ ರೇಷನ್‌ ಕಾರ್ಡ್‌ನಲ್ಲಿ ಆತನ ಹೆಸರಿನ ಅಕ್ಷರಗಳಲ್ಲಿ ಸ್ವಲ್ಪ ಬದಲಾವಣೆ ಇದ್ದರೂ, ‘ಮ್ಯಾಚ್‌ ಸ್ಕೋರ್‌’ 50 ಶೇ.ವನ್ನು ತಲುಪುವುದೇ ಇಲ್ಲ. ಹೀಗಿರುವಾಗ ಅವರ ನೋಂದಣಿ ಪ್ರಕ್ರಿಯೆ ಅರ್ಧದಲ್ಲಿಯೇ ಮೊಟಕುಗೊಳ್ಳುತ್ತಿದೆ.

ಫಲಾನುಭವಿಗಳ ಎಡವಟ್ಟು?
ವಸತಿ ಯೋಜನೆಗಳಿಗೆ ಸರಕಾರವು ಅನುದಾನ ನೀಡುವ ಸಂದರ್ಭ ಹಂತ ಹಂತವಾಗಿ ಹಣ ಬಿಡುಗಡೆಗೊಳಿಸುತ್ತಿದ್ದು, ಫಲಾನುಭವಿಗಳ ಎಡವಟ್ಟು ಕೂಡ ಅನುದಾನಕ್ಕೆ ಅಡ್ಡಿಯಾಗಿದೆ. ತಳಪಾಯ, ಗೋಡೆ, ಮೇಲ್ಛಾವಣಿ ಹಾಗೂ ಶೌಚಾಲಯ ನಿರ್ಮಾಣದ ಬಳಿಕ ಅಂತಿಮವಾಗಿ ಹಣ ಬಿಡುಗಡೆಯಾಗುತ್ತದೆ. ಫಲಾನುಭವಿಗಳು ಆರಂಭದ ಎರಡು ಹಂತಗಳಲ್ಲಿ ಸಮರ್ಪಕವಾಗಿ ಹಣ ಪಡೆದಿರುತ್ತಾರೆ. ಆದರೆ ಮನೆಗೆ ಮೇಲ್ಛಾವಣಿಯನ್ನು ನಿರ್ಮಿಸುವ ಸಂದರ್ಭ ಒಂದು ಅಥವಾ ಎರಡು ಕೋಣೆಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳುತ್ತಾರೆ. ಅದನ್ನು ಜಿಪಿಎಸ್‌ಗೆ ಅಪ್‌ಲೋಡ್‌ ಮಾಡಿದಾಗ ಮನೆಯ ಹಿಂದಿನ ಗಾತ್ರ ಹಾಗೂ ಈಗಿನ ಗಾತ್ರಕ್ಕೂ ವ್ಯತ್ಯಾಸ ಕಂಡುಬಂದು, ಅನುದಾನ ಪಡೆಯುವುದಕ್ಕೆ ತೊಂದರೆಯಾಗುತ್ತದೆ.

ಗುರಿ ಮುಟ್ಟಲು ಅಡಚಣೆ
ನಿಗಮದ ಮೂಲಕ ವಿವಿಧ ಯೋಜನೆಗಳ ಮನೆ ನೀಡುವ ವೇಳೆ ಬಸವ ವಸತಿ ಯೋಜನೆಯಲ್ಲಿ ಹೆಚ್ಚಿನ ಮನೆಗಳನ್ನು ನೀಡುತ್ತದೆ. ತಾಲೂಕಿನಲ್ಲಿ ಬಸವ ವಸತಿ ಯೋಜನೆಗೆ ಈ ಸಾಲಿನಲ್ಲಿ 2,537 ಗುರಿ ನೀಡಿ, 2,348 ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್‌ ವಸತಿ ಯೋಜನೆಯಲ್ಲಿ 480ರ ಗುರಿ ನೀಡಿದರೂ, ಪ್ರಸ್ತುತ ಅಲ್ಲಿ ಅನುದಾನವಿಲ್ಲದೆ ತೊಂದರೆಯಾಗಿದೆ.

ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯ ಸಮೀಕ್ಷೆಯ ಪ್ರಕಾರ ತಾಲೂಕಿನಲ್ಲಿ 8,643 ಕುಟುಂಬಗಳನ್ನು ವಸತಿ/ನಿವೇಶನ ರಹಿತರು ಎಂದು ಗುರುತಿಸಲಾಗಿದೆ. ಅರ್ಜಿ ಸ್ವೀಕಾರ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಎಲ್ಲ ಯೋಜನೆಯಲ್ಲಿ ತಾಲೂಕಿಗೆ ವರ್ಷದಲ್ಲಿ 1,502 ಮನೆಗಳ ಗುರಿಯಿದ್ದು, ಪ್ರಸ್ತುತ 54.59 ಶೇ.ಪ್ರಗತಿ ಸಾಧಿಸಲಾಗಿದೆ. ಆದರೆ ತಾಂತ್ರಿಕ ದೋಷಗಳು ಗುರಿಮುಟ್ಟುವುದಕ್ಕೆ ಅಡಚಣೆಯನ್ನು ತಂದಿವೆ.

ಹೊಂದಾಣಿಕೆ ಅಗತ್ಯ
ವಸತಿ ನಿರ್ಮಾಣಕ್ಕಾಗಿ ಸರಕಾರ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತದೆ. ಜತೆಗೆ ಅದನ್ನು ಸಮತಟ್ಟು ಮಾಡುವುದಕ್ಕೆ 3 ಸಾವಿರ ರೂ.ಗಳ ಅನುದಾನ ಲಭಿಸುತ್ತದೆ. ಇಲ್ಲಿ ಎಲ್ಲೋ ಒಂದು ಗುಡ್ಡಗಾಡು ಪ್ರದೇಶದಲ್ಲಿ ನಿವೇಶನ ಲಭಿಸಿದರೆ ಅದನ್ನು 3 ಸಾವಿರ ರೂ.ಗಳಲ್ಲಿ ಸಮತಟ್ಟು ಮಾಡುವುದು ಅಸಾಧ್ಯದ ಮಾತು. ಹೀಗಾಗಿ ನಿವೇಶನದ ವಿಚಾರದಲ್ಲಿ ಕಂದಾಯ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಗಳು ಕೇಳಿಬರುತ್ತಿವೆ.

ದಾಖಲೆ ಸಮರ್ಪಕ ಅಗತ್ಯ
ನ. 5ರಿಂದ ಬಸವ ವಸತಿ ಯೋಜನೆಯಲ್ಲಿ ಬಾಕಿ ಉಳಿದಿದ್ದ ಅನುದಾನ ಬರುತ್ತಿದೆ. ಆದರೆ ಪ್ರಾರಂಭದ ನೋಂದಣಿಯ ಸಂದರ್ಭ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭ ದಾಖಲೆ ಸರಿಯಿಲ್ಲದೇ ಇದ್ದರೆ ನೋಂದಣಿ ಪ್ರಕ್ರಿಯೆ ಮುಂದುವರಿಯುತ್ತಿಲ್ಲ. ಈ ಹಿಂದೆ ಮನೆ ಪಡೆದು ಮತ್ತೆ ಅದೇ ಫಲಾನುಭವಿಗೆ ಮನೆ ನೀಡಿದರೂ, ನೋಂದಣಿಯ ಸಂದರ್ಭ ತಿಳಿಯುತ್ತದೆ.
– ಕುಸುಮಾಧರ್‌ ಬಿ. ಕಾರ್ಯನಿರ್ವಹಣಾಧಿಕಾರಿ, ತಾ.ಪಂ.ಬೆಳ್ತಂಗಡಿ

— ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.