ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡರೆ ಗೆಲುವು ಬಹಳ ಹತ್ತಿರ


Team Udayavani, Oct 26, 2018, 10:08 AM IST

2000.jpg

ಜೀವನದಲ್ಲಿ ಸೋಲು- ಗೆಲುವು ಇದ್ದದ್ದೇ. ಗೆಲುವಿನ ಹಾದಿಯಲ್ಲಿ ಸೋಲಿನ ಸ್ವಾಗತ ಇದ್ದೇ ಇರುತ್ತದೆ. ಹಾಗಂತ ಅಷ್ಟಕ್ಕೆ ಕೊನೆ ಎಂದುಕೊಳ್ಳಬಾರದು, ಮುನ್ನಡೆಯಬೇಕು. ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಬೇಕು. ಮುಂದಿನ ಹೆಜ್ಜೆಯ ಸಂದರ್ಭ ಹಳೆಯ ತಪ್ಪು ಮರುಕಳಿಸದಂತೆ ನೋಡಿಕೊಂಡಾಗ ಯಶಸ್ಸು ನಮ್ಮದೇ. ದುಡುಕು,  ಜುಗುಪ್ಸೆ , ಅಸಹಾಯಕತೆ, ಕೋಪತಾಪ ಬಿಟ್ಟು  ತಾಳ್ಮೆಯಿಂದಿದ್ದರಷ್ಟೇ ಸಾಧ‌ಕರ  ಪಟ್ಟಿಯಲ್ಲಿ ಗುರುತಿಸಿಕೊಳ್ಳಲು  ಸಾಧ್ಯ ಎನ್ನುತ್ತಾರೆ ಲೇಖಕ,  ವಾಗ್ಮಿ  ರಾಬಿನ್‌ ಶರ್ಮಾ.

ಯುವಜನರನ್ನು ಕಾಡುವ ಪ್ರಶ್ನೆಯೆಂದರೆ ಸಾಧಿಸುವುದು ಹೇಗೆ? ಎಂಬುದು. ನಮ್ಮಲ್ಲಿ ಸಾಧನೆಯ ತುಡಿತ ಇದ್ದೇ ಇರುತ್ತದೆ. ಹಾಗೆಂದು ಪಡಬೇಕಾದ ಪರಿಶ್ರಮದ ಪ್ರಮಾಣ, ನಡೆಯಬೇಕಾದ ಹಾದಿ ಬಗ್ಗೆ ಸ್ಪಷ್ಟತೆ ಇರದು. ಅಂಕ ಕಡಿಮೆಯಾಯಿತು, ನನ್ನ ಮನೆಯಲ್ಲಿ ಕೇಳಿದ್ದನ್ನು ಕೊಡಿಸುವುದಿಲ್ಲ, ಅವರೆಲ್ಲಾ ಹಾಗಿ ದ್ದಾರೆ, ನಾನು ಮಾತ್ರ ಹೀಗೆ..ಇಂಥ ಕೆಲವು ನೇತ್ಯಾತ್ಮಕ ಅಂಶಗಳು ನಮ್ಮ ಸುತ್ತಲೂ ಗಿರಕಿ ಹೊಡೆ ಯು ತ್ತಲೇ ಇರುತ್ತವೆ. ಮನಸ್ಸು ಗೊಂದಲಕ್ಕೆ ಒಳ ಗಾಗುತ್ತದೆ. ಆದರೆ ಲಕ್ಷಾಂತರ ಮಂದಿ ಇವು ಗಳನ್ನೇ ಮೆಟ್ಟಿಲಾಗಿಸಿಕೊಂಡು ಏರಿ ಇಂದು ನೆಮ್ಮದಿ ಯಿಂದ ಬದುಕುತ್ತಿದ್ದಾರೆ. ಇದು ಅಕ್ಷರಶಃ ಸತ್ಯ.

ಜೀವನ ಎಂದರೇನು?
“ಇಂದು ಹುಟ್ಟಿ, ನಾಳೆ ಸತ್ತರೆ ಬದುಕಿಗೆ ಅರ್ಥ ಸಿಗದು. ಕಡಿಮೆ ಅವಧಿಯ ಈ ಜೀವನದಲ್ಲಿ ಏನಾದರೂ ಸಾಧನೆ ಮಾಡಿದಾಗ ಮಾತ್ರ ಸಾರ್ಥಕ್ಯ. ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕಾದರೆ ಹುಟ್ಟು ಮತ್ತು ಸಾವಿನ ಮಧ್ಯೆ ಸಾಧನೆಯ ಆ ಘಳಿಗೆಗೂ ಮೊದಲು ಕಾಡುವ ಆಲೋಚನೆಗಳು, ಸೋಲುಗಳನ್ನು ಸವಾಲಾಗಿ ಸ್ವೀಕರಿಸಬೇಕು’ ಎನ್ನುತ್ತಾರೆ ರಾಬಿನ್‌ ಶರ್ಮಾ.

ಸವಾಲು ಎದುರಿಸಿ
ಯಾವುದೇ ಕೆಲಸವಾಗಲಿ, ಅದರಲ್ಲಿ ದಶಕಗಳ ಅನುಭವವೇ ನಿಮಗಿರಲಿ; ಹೊಸತನ ಅನುಭವಿಸಿ. ಸದಾ ಅಪ್‌ಡೇಟ್‌ ಆಗಿದ್ದಾಗ ಮಾತ್ರ ವಿಭಿನ್ನ ಸಾಧ‌ನೆ ಮಾಡಬಹುದು. ಸೋಲು ಗೆಲುವಿನ ಲೆಕ್ಕಾಚಾರಕ್ಕಾಗಿ ನಿಮ್ಮ ಹತ್ತಿರ ಸದಾ ಒಂದು ಪುಟ್ಟ ಡೈರಿ ಇಟ್ಟುಕೊಂಡಿರಿ. ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಬರೆದಿಟ್ಟುಕೊಳ್ಳಿ. ಮುಂದೊಂದು ದಿನ ಇವುಗಳ ಮೇಲೆ ಬೆಳಕು ಚೆಲ್ಲಿದಾಗ ನಿಮ್ಮ ಬೆಳವಣಿಗೆಯ ಬಗ್ಗೆ ಆತ್ಮ ವಿಮರ್ಶೆ ಸಾಧ್ಯ.

“ಐ ಕ್ಯಾನ್‌’, “ಐಕ್ಯೂ’ಗಿಂತ ಹಿರಿದು
ಗುಣಾತ್ಮಕ ಚಿಂತನೆಯೊಂದಿದ್ದರೆ ಎಂಥದೇ ಕಠಿನ ಸವಾಲನ್ನು ಕೂಡ ಸುಲಲಿತವಾಗಿ ಬಗೆಹರಿಸಬಹುದು. ನಾನು ಮಾಡಬಲ್ಲೆ ಎಂಬ ಒಂದು ಪುಟ್ಟ ಆತ್ಮ ವಿಶ್ವಾಸವೇ ನಿಮ್ಮನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುತ್ತಾರೆ ರಾಬಿನ್‌ ಶರ್ಮಾ.

ನಿಮ್ಮ ದಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆಯೇ?
ನೀವು ಸರಿಯಾದ ಮಾರ್ಗದಲ್ಲಿದ್ದರೆ ಅಳುಕೇತಕ್ಕೆ? ಜನ ನಿಮ್ಮತ್ತ ಕಲ್ಲು ತೂರಿದರೆ, ಅದನ್ನು ಹಿಂದಿರುಗಿ ಎಸೆಯಬೇಡಿ. ಬದಲಾಗಿ ಅವನ್ನೇ ಬಳಸಿ ಸ್ಮಾರಕ ನಿರ್ಮಿಸಿ. ಅದೇ ಎಲ್ಲದಕ್ಕೂ ಉತ್ತರ. “ದ ಬೆಸ್ಟ್‌ ಲೀಡರ್ì ಆರ್‌ ದ ಮೋಸ್ಟ್‌ ಎಜುಕೇಟೆಡ್‌ ಲರ್ನರ್’ ಎಂಬುದು ರಾಬಿನ್‌ ಶರ್ಮಾರ ಮಾತು.

ಮಕ್ಕಳು ಗೀಳಿನಿಂದ ಹೊರಬರಲು ಹೆತ್ತವರು ಹೇಗೆ ಸಹಕರಿಸಬೇಕು?

ಗೀಳಿಗೆ ತುತ್ತಾದ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಅವರ ಆಸಕ್ತಿ, ಭಯ, ನಿರಾಶೆ, ಒತ್ತಡಗಳನ್ನು ತಿಳಿದುಕೊಳ್ಳಲು  ಸ್ನೇಹಿತರ ರೀತಿ ವರ್ತಿಸಬೇಕು. ಆಗ ಮಾತ್ರ ಅವರ ಸಮಸ್ಯೆ, ಮನಸ್ಸಿನೊಳಗಿನ ತುಮುಲವನ್ನು ತಿಳಿಯಲು ಸಾಧ್ಯ. 

 ಮಕ್ಕಳ ಎಲ್ಲ ಆಗು-ಹೋಗುಗಳ ಕುರಿತು ಹೆತ್ತವರು ತಿಳಿದುಕೊಳ್ಳಬೇಕು. ದಿನದಲ್ಲಿ ಒಂದು ಬಾರಿಯಾದರೂ ಅವರಿಗೆ ಸಮಯವನ್ನು ಮೀಸಲಿಟ್ಟು, ಮುಕ್ತವಾಗಿ ಮಾತನಾಡಲು ಹೆತ್ತವರು ಪ್ರಯತ್ನಿಸಬೇಕು. 

ಗೀಳು ಸಂತ್ರಸ್ತರಾದ ಮಕ್ಕಳ ಹೆತ್ತವರಿಗೆ ಶಾಲಾ- ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. 

 ಆದಷ್ಟು ಮೊಬೈಲ್‌, ವೀಡಿಯೋ ಗೇಮ್‌, ಟಿವಿಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಅವರ ಆಸಕ್ತಿಯನ್ನು ಕ್ರೀಡೆ, ನೃತ್ಯ, ಹಾಡು, ಪುಸ್ತಕ ಓದುವಿಕೆ ಕಡೆಗೆ ತಿರುಗಿಸಬೇಕು. ಅದಕ್ಕೆ ಸೂಕ್ತ ವಾತಾವರಣ ನಿರ್ಮಿಸಿ ಪ್ರೇರೇಪಿಸಬೇಕು.

ಮಕ್ಕಳು ಹೆತ್ತವರನ್ನೇ ನೋಡಿ ಬೆಳೆಯುವುದರಿಂದ ಅವರೆದುರು ಮನೆಯ ಸಮಸ್ಯೆಗಳನ್ನೆಲ್ಲ ತೋರ್ಪಡಿಸಬಾರದು. 

 ಆ ಗೀಳಿಗೆ ಕಾರಣವೇನೆಂದು ಮೊದಲು ಪತ್ತೆ ಹಚ್ಚಿದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಕ್ಕಂತೆ. 

ಸ್ಫೂರ್ತಿಗಾಗಿ ಈ ವೀಡಿಯೋ ನೋಡಿ

ರಾಬಿನ್‌ ಶರ್ಮಾ ಅವರು  ಜೀವನ ಹಾಗೂ ಸವಾಲುಗಳ ಕುರಿತಾಗಿ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಉಪನ್ಯಾಸ 
ನೀಡಿದ್ದಾರೆ.  ಅವರ ಮಾತುಗಳಲ್ಲಿನ ಜೀವನೋತ್ಸಾಹ ತುಂಬುವಂಥ ಒಂದಷ್ಟು ಅಂಶಗಳು ನಮ್ಮ ಬದುಕಿಗೂ ಹೊಸ ಚೈತನ್ಯ, ಸ್ಫೂರ್ತಿ ತುಂಬಬಲ್ಲವು.ಸಾಧನೆಗೆ ಪೂರಕವಾಗಬಲ್ಲ ಐದು ಕಾರ್ಯಗಳನ್ನು ಬಹಳ ಚೆನ್ನಾಗಿ ವೀಡಿಯೋ ಒಂದರಲ್ಲಿ ವಿವರಿಸಿದ್ದಾರೆ. ಅದನ್ನು ನೋಡಲು ಈ ಲಿಂಕ್‌ ಕ್ಲಿಕ್ಕಿಸಿ.  

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ  ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ.
9964169554

 *ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.