ಸಿಹಿ ನೀರು ಮೀನುಗಾರಿಕೆಯಿಂದ ಲಾಭವಿದೆ: ಡಾ.ರಮೇಶ್ ಟಿ.ಜೆ.
Team Udayavani, Jul 11, 2021, 9:29 AM IST
ಮೂಡುಬಿದಿರೆ: ಕರಾವಳಿ ಹಾಗೂ ಒಳನಾಡಿನ ರೈತರು ಭತ್ತ, ತೆಂಗು, ಅಡಿಕೆಗಷ್ಟೇ ಸೀಮಿತವಾಗದೆ ನದಿ, ಹೊಳೆ ಮತ್ತು ನಿರುಪಯುಕ್ತವಾದ ಪ್ರದೇಶದಲ್ಲಿ ನ ಸಿಹಿನೀರು ಮೀನು ಸಾಕಾಣಿಕೆಯನ್ನು ಲಾಭದಾಯಕ ಕೃಷಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್ ಟಿ.ಜೆ. ಹೇಳಿದರು.
ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ಪಶು ವೆ`ದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇವುಗಳ ವತಿಯಿಂದ ಪಣಪಿಲ ಶ್ರೀರಾಜ್ ಕೊಟ್ಟಾರಿಬೆಟ್ಟು ಆವರಣದಲ್ಲಿ ಶನಿವಾರ ನಡೆದ ಮೀನು ಕೃಷಿ ಕುರಿತು ತರಬೇತಿ ಹಾಗೂ ಕ್ಷೇತ್ರೋತ್ಸವ ಮತ್ತು ಮಾರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ` ಸಾಂಪ್ರದಾಯಿಕ ಕೃಷಿಗಿಂತ ಐದಾರು ಪಟ್ಟು ಹೆಚ್ಚು ಲಾಭ ಸಿಗುವ ಪ್ರಾಣಿಗಳ ಸಾಕಾಣಿಕೆ ಅದರಲ್ಲಿಯೂ ಸಮಗ್ರ ಮೀನು ಕೃಷಿ ಮಾಡಿ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೆ.ವಿ.ಕೆ.ಯ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್ ಮಾತನಾಡಿ ಜಿಲ್ಲೆಯ ವಾತಾವರಣಕ್ಕೆ ಲಾಭದಾಯಕವಾಗಬಲ್ಲ ಮೀನು ಕೃಷಿಯ ಬಗ್ಗೆ, ವಿಜ್ಞಾನಿ ಡಾ.ಕೇದಾರನಾಥ ಬೆಳೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಿಹಿನೀರ ಮೀನು ಕೃಷಿಯನ್ನು ಸುಮಾರು ಮೂರು ಸೆಂಟ್ಸ್ ಜಾಗದಲ್ಲಿ , ಪ್ಲಾಸ್ಟಿಕ್ ಅಚ್ಛಾದಿತ ಎಪ್ಪತ್ತೈದು ಅಡಿ ಉದ್ದ, 55 ಅಡಿ ಅಗಲ, 50 ಅಡಿ ಆಳದ ಹೊಂಡದಲ್ಲಿ ನೀರು ತುಂಬಿ ನಡೆಸಲಾಗುತ್ತಿದೆ. ಯೋಜನಾ ವೆಚ್ಚ ಸುಮಾರು ರೂ. ಎರಡೂವರೆ ಲಕ್ಷ.
ಶ್ರೀರಾಜ್ ಕೊಟ್ಟಾರಿಬೆಟ್ಟು ಮನೆಯ ದೇವರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಕೊಟ್ಟಾರಿಬೆಟ್ಟು ಹರಿಯಪ್ಪ ಕೋಟ್ಯಾನ್, ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ, ಬೆಳುವಾಯಿಯ ಚಂದನ ಬಯೊ ಲಿ. ಮುಖ್ಯಸ್ಥ ವಸಂತ್ ಉಪಸ್ಥಿತರಿದ್ದರು.
ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಗತಿಪರ ಕೃಷಿಕ ವಿಶ್ವನಾಥ ಕೋಟ್ಯಾನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ