ಹಿಂದೂ ನಾಯಕರ ಮೇಲಿನ ಕೇಸು ಹಿಂಪಡೆಯದಿದ್ದಲ್ಲಿ ಪ್ರತಿಭಟನೆ: ಹಿಂಜಾವೇ
Team Udayavani, Jul 11, 2017, 3:45 AM IST
ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆ ಸಂದರ್ಭ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ನಾಯಕರನ್ನು ಗುರಿಯಾಗಿಸಿ ಕೇಸು ದಾಖಲಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ನಡೆಸುತ್ತಿದೆ. ವಿನಾ ಕಾರಣ ಹಾಕಿರುವ ಇಂತಹ ಕೇಸನ್ನು ತತ್ಕ್ಷಣ ಹಿಂಪಡೆಯದಿದ್ದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ ವಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರು ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್ ಮುಂದಾಳತ್ವದಲ್ಲಿ ಶಾಂತಿಯುತವಾಗಿ ಶವಯಾತ್ರೆ ನಡೆಯುತ್ತಿತ್ತು. ಇದು ವೀಡಿಯೋದಲ್ಲಿ ಕೂಡ ದಾಖಲಾಗಿದೆ. ಆದರೆ ಗಲಭೆಯ ನೆಲೆಯಲ್ಲಿ ಅವರ ಮೇಲೆಯೇ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 307 ಸೆಕ್ಷನ್ನಡಿ ಕೇಸು ದಾಖಲಿಸಲಾಗಿದ್ದು, ರಾತೋ ರಾತ್ರಿ ಮನೆಗೆ ನುಗ್ಗಿ ಸತ್ಯಜಿತ್ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಹಿಂದೂಗಳನ್ನು ಸದೆ ಬಡಿಯುವ ಯತ್ನ ಮಾಡುತ್ತಿದೆ. ಗಲಭೆಗೆ ಕಾರಣರಾದವರನ್ನು ಬಂಧಿಸುವುದನ್ನು ಬಿಟ್ಟು ಆರ್ಎಸ್ಎಸ್ ಅನ್ನು ಗುರಿಯಾಗಿಸಿ ಹಿಂದೂ ಮುಖಂಡರ ಮೇಲೆ ಸುಳ್ಳುಕೇಸು ದಾಖಲಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂಜಾವೆ ಮುಖಂಡರಾದ ಸುಭಾಷ್ ಪಡೀಲ್, ರಾಧಾಕೃಷ್ಣ ಅಡ್ಯಂತಾಯ, ಅಮಿತ್ ಉಪಸ್ಥಿತರಿದ್ದರು.
ಮಹಿಳೆಯರಿದ್ದ ಮನೆಗೆ ನುಗ್ಗಿದ ಪುರುಷ ಪೊಲೀಸರು
ಸವಿತಾ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ರವಿವಾರ ರಾತ್ರಿ 2.40ರ ವೇಳೆಗೆ ಸುಮಾರು 50 ಮಂದಿ ಪೊಲೀಸರು ನಮ್ಮ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ಇದ್ದರೂಏಕಾಏಕಿ ನುಗ್ಗಿ ಮನೆಯನ್ನು ಜಾಲಾಡಿದ್ದಾರೆ. ಓರ್ವ ಮಹಿಳಾ ಪೊಲೀಸ್ಕೂಡ ಈ ಸಂದರ್ಭ ಜತೆಯಲ್ಲಿರಲಿಲ್ಲ. ನನ್ನ ಗಂಡ ಸತ್ಯಜಿತ್ ಸುರತ್ಕಲ್ಮನೆಯಲ್ಲಿ ಇಲ್ಲವೆಂದರೂ ಕೇಳದೆ ಮನೆಯ ಇಂಚಿಂಚನ್ನೂ ಜಾಲಾಡಿದ್ದಾರೆ. ಕೇವಲ ಮಹಿಳೆಯರೇ ಇರುವ ಮನೆಗೆ 50 ಮಂದಿ ಪೊಲೀಸರು ದಾಳಿ ನಡೆಸುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ. ಈ ಕುರಿತು ಸುರತ್ಕಲ್ ಠಾಣೆಗೆ ದೂರು ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ