ಸಮಸ್ಯೆಗೆ ಸ್ಪಂದಿಸದ್ದಿದರೆ ಉಗ್ರ ಹೋರಾಟ: ಎಚ್ಚರಿಕೆ
Team Udayavani, Jun 6, 2018, 10:13 AM IST
ಮಹಾನಗರ: ಕಮಲೇಶ್ಚಂದ್ರ ವರದಿ ಜಾರಿಯಾಗಬೇಕು. ಈ ಮೂಲಕ ನಮ್ಮನ್ನು ಕೂಡ ಅಂಚೆ ಇಲಾಖಾ ನೌಕರರೆಂದೇ ಸರಕಾರ ಪರಿಗಣಿಸಬೇಕು. 14 ದಿನಗಳಿಂದ ದೇಶಾದ್ಯಂತ ಅಂಚೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ನಮ್ಮ ಸಮಸ್ಯೆಗೆ ಶೀಘ್ರ ಸ್ಪಂದಿಸದೆ ಇದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಗಂಗಾಧರ್ ಪಚ್ಚನಾಡಿ ಹೇಳಿದರು.
ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ಅನುಷ್ಠಾನಗೊಂಡು, ಒಂದು ವರ್ಷ ಕಳೆದಿದ್ದರೂ ಗ್ರಾಮೀಣ ಅಂಚೆ ನೌಕರರಿಗೆ ಇನ್ನೂ ಅದರ ಲಾಭ ಸಿಕ್ಕಿಲ್ಲ ಎಂದು ದೇಶಾದ್ಯಂತ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ 15ನೇ ದಿನಕ್ಕೆ ಕಾಲಿಟ್ಟಿದೆ.
ಸಂಘದ ಅಧ್ಯಕ್ಷ ಹರೀಶ್ವರ್ ರಾವ್, ಕಾರ್ಯದರ್ಶಿ ಗೋಪಿನಾಥ್ ಶೆಟ್ಟಿ ಕಾವೂ ರು, ಧನಂಜಯ್, ರಾಧಾಕೃಷ್ಣ
ಪಡೀಲ್, ವಿಲಿಯಂ ಲೋಬೋ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.