ಖರೀದಿ ಕೇಂದ್ರ ಬಂದ್; ಅಡಿಕೆ ಬೆಳೆಗಾರರಿಗೂ ತಟ್ಟಿದ ಬಿಸಿ
ಸಹಕಾರ ಸಂಘಗಳ ನೆರವಿನ ನಿರೀಕ್ಷೆಯಲ್ಲಿ ಕೃಷಿಕ
Team Udayavani, Apr 4, 2020, 5:23 AM IST
ಸುಳ್ಯ/ಮಂಗಳೂರು: ಕೋವಿಡ್ 19 ಬಿಸಿ ಅಡಿಕೆ ಬೆಳೆಗಾರರಿಗೂ ತಟ್ಟಲಾರಂಭಿಸಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಗಳು ಬಾಗಿಲೆಳೆದಿರುವುದೇ ಇದಕ್ಕೆ ಕಾರಣ. ಧಾರಣೆ ಇದ್ದರೂ ಸುಲಿದ ಅಡಿಕೆಯ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಇಲ್ಲವಾಗಿದೆ. ಇದರಿಂದ ಕೃಷಿಕರು ದೈನಂದಿನ ಖರ್ಚಿಗೆ ಹಣವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.
ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಾಸರಗೋಡು ಸೇರಿ ದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅಡಿಕೆ ಕೃಷಿಯೇ ಪ್ರಧಾನ ವಾಣಿಜ್ಯ ಬೆಳೆ. ಈಗ ಕೊಯ್ಲ ಮುಗಿದು ಒಣಗಿ ಅಟ್ಟದಲ್ಲಿ ದಾಸ್ತಾನು ಇರಿಸಿ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡುವುದು ಪರಿಪಾಠ. ಕ್ಯಾಂಪ್ಕೋ, ಎಪಿಎಂಸಿ ಅಥವಾ ಇತರ ಅಡಿಕೆ ಖರೀದಿ ಅಂಗಡಿಗಳಿಗೆ ಮಾರಾಟ ಮಾಡಿ ದಿನ ನಿತ್ಯದ ವ್ಯವಹಾರ ಸರಿದೂಗಿಸಿಕೊಳ್ಳುವ ಬೆಳೆಗಾರರು ಪ್ರಮಾಣ ಶೇ. 65ಕ್ಕಿಂತಲೂ ಹೆಚ್ಚಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅಗತ್ಯ ವಸ್ತುಗಳ ಖರೀದಿಗೂ ತತ್ವಾರ ಪಡಬೇಕಿದೆ ಎನ್ನುವ ಆತಂಕ ಬೆಳೆ ಗಾರರದ್ದು.
ಈಗ ಬಹಳಷ್ಟು ಸಣ್ಣ ರೈತರ ಕೈಯಲ್ಲಿ ಹಣವಿಲ್ಲ. ಅಡಿಕೆ ಕೃಷಿ ಮತ್ತು ವ್ಯವಹಾರ ಸಂಬಂಧಿತ ಯಾವ ಕೆಲಸಗಳೂ ನಡೆಯುತ್ತಿಲ್ಲ ಎನ್ನುತ್ತಾರೆ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಪುಚ್ಚಪಾಡಿ.
ಧಾರಣೆ ತಗ್ಗಿಸಿ ವಂಚನೆ!
ಕೆಲವೆಡೆ ಮನೆ- ಮನೆಗೆ ಬಂದು ಅಡಿಕೆ ಖರೀದಿಸು ವವರು ಈ ಸಂದರ್ಭವನ್ನು ದುರ್ಬಳಕೆ ಮಾಡಿ ಕೊಂಡು ಕಡಿಮೆ ಧಾರಣೆಗೆ ಅಡಿಕೆ ಖರೀದಿ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. 300 ರೂ. ಗಡಿ ದಾಟಿರುವ ಸಿಂಗಲ್ ಚೋಲ್, 250 ರೂ. ಗಡಿಯಲ್ಲಿರುವ ಹೊಸ ಅಡಿಕೆಯ ಧಾರಣೆ ಕುಗ್ಗಲಿದೆ ಎಂದು ಹೆದರಿಸಿ ಕಡಿಮೆ ಮೊತ್ತಕ್ಕೆ ಖರೀದಿಸಲಾಗುತ್ತಿದೆ ಎಂದು ಕೆಲವು ಬೆಳೆಗಾರರು ದೂರಿದ್ದಾರೆ. ಅಂತಹ ಮೋಸದ ಬಲೆಗೆ ಯಾವುದೇ ಕೃಷಿಕರು ಬಲಿಯಾಗ ಬಾರದು ಎಂದು ಅಡಿಕೆ ಬೆಳೆ ಗಾರರ ಪರವಾದ ಸಂಘಟನೆಗಳು ಮನವಿ ಮಾಡಿವೆ.
ಸಹಕಾರ ಸಂಘಗಳ ನೆರವು ಅಗತ್ಯ
ಬಿಳಿ ಚೀಟಿ ವ್ಯಾಪಾರಿಗಳು ಈಗ ಅಡಿಕೆ ಖರೀದಿಗೆ ಆರ್ಥಿಕ ಸಮಸ್ಯೆ ಹಾಗೂ ಖರೀದಿಸಿದ ಅಡಿಕೆಯನ್ನು ಬೇರೆ ರಾಜ್ಯಕ್ಕೆ ಕೊಂಡುಹೋಗಲು ವ್ಯವಸ್ಥೆ ಇಲ್ಲ ಎಂಬ ನೆಪ ಒಡ್ಡುತ್ತಿದ್ದಾರೆ. ಆದ್ದರಿಂದ ಅಡಿಕೆ ಖರೀದಿ ಸಹಕಾರ ಸಂಸ್ಥೆಗಳು ರೈತರ ನೆರವಿಗೆ ಧಾವಿಸಬೇಕಿದೆ. ಕ್ಯಾಂಪ್ಕೋ, ಎಪಿಎಂಸಿ, ಮೊದಲಾದ ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ 15 ದಿನಗಳಿಗೊಮ್ಮೆ ನಿಗದಿತ ಪ್ರಮಾಣದಲ್ಲಿ ಅಡಿಕೆ ಖರೀದಿಸಿ ಬೆಳೆಗಾರರಿಗೆ ನೆರವಾಗಬೇಕಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಬೆಳೆಗಾರರಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎನ್ನುತ್ತಾರೆ ಸಣ್ಣ ಅಡಿಕೆ ಕೃಷಿಕ ಚಂದ್ರಶೇಖರ ಸುಳ್ಯ.
ಕ್ಯಾಂಪ್ಕೋ, ಮಾಸ್ ಮೂಲಕ ಖರೀದಿ
ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೃಷಿಕರಿಗೆ ತೊಂದರೆಯಾಗಿರುವುದ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಯಾಂಪ್ಕೋ ಮತ್ತು ಮಾಸ್ ಜತೆಗೆ ಚರ್ಚಿಸಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು.
–ಕೋಟ ಶ್ರೀನಿವಾಸ ಪೂಜಾರಿ,
ದ.ಕ. ಜಿಲ್ಲಾ ಉಸ್ತುವಾರಿ ಸಚಿವ
ಆತಂಕ ಬೇಡ
ನಗದು ಆವಶ್ಯಕತೆ ಇರುವ ಅಡಿಕೆ ಬೆಳೆಗಾರರಿಗೆ ಅಡಿಕೆಯನ್ನು ಗಿರವಿ ಇಟ್ಟು ಹಣ ಒದಗಿಸುವಂತೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಬೆಳೆಗಾರರಲ್ಲಿ ಆತಂಕ ಬೇಡ. ಅಲ್ಲದೆ ಕಳೆದ ವರ್ಷ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದರಿಂದ ದಾಸ್ತಾನು ಶೇ. 30ರಷ್ಟು ಕಡಿಮೆ ಇದೆ. ಹಾಗಾಗಿ ಮುಂದೆ ಅಡಿಕೆಗೆ ಉತ್ತಮ ಬೆಲೆಯನ್ನು ನಿರೀಕ್ಷಿಸಲಾಗಿದೆ.
-ಎಸ್. ಆರ್. ಸತೀಶ್ಚಂದ್ರ,
ಕ್ಯಾಂಪ್ಕೊ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ