ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಕರ ಗೋಳು ಕೇಳುವವರಿಲ್ಲ


Team Udayavani, Sep 11, 2017, 8:00 AM IST

ksrtc.jpg

ಮಂಗಳೂರು: ಪುತ್ತೂರು-ಮಂಗಳೂರು(ಸ್ಟೇಟ್‌ಬ್ಯಾಂಕ್‌) ಮಾರ್ಗದ ಮಧ್ಯೆ ಬರೋಬ್ಬರಿ 216 ಟ್ರಿಪ್‌ಗ್ಳು ಕಾರ್ಯಾಚರಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದರೂ, ಎಲ್ಲ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ ಎಂಬ ಆರೋಪ ನಿತ್ಯ ಪ್ರಯಾಣಿಕರಿಂದ ಕೇಳಿಬರುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ನವರು ಖಾಸಗಿ ಬಸ್‌ ಮಾಲಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಚೇರಿ ವೇಳೆ ಟ್ರಿಪ್‌ ಕಟ್‌ ಮಾಡುತ್ತಿದ್ದಾರೆ ಎಂದು ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವವರು ಕೆಎಸ್‌ಆರ್‌ಟಿಸಿ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. 

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿರುವ ಮಾಹಿತಿ ಗಮನಿಸಿದರೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲು ಸಾಧ್ಯವಿಲ್ಲ. ಆದರೆ ಬೆಳಗ್ಗೆ ಹಾಗೂ ಸಂಜೆ ಕಚೇರಿ ವೇಳೆ ಈ ಈ ಮಾರ್ಗದ ಬಸ್‌ಗಳು ಎಲ್ಲಿ ಹೋಗುತ್ತವೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗುತ್ತಿಲ್ಲ. ಅಂದರೆ, ನಾಮಕಾವಸ್ಥೆಗಷ್ಟೇ ಕೆಎಸ್‌ಆರ್‌ಟಿಸಿಯ ಟ್ರಿಪ್‌ಶೀಟ್‌ನಲ್ಲಿ ಈ ಬಸ್‌ಗಳ ಸಂಚಾರದ ಅವಧಿ ಮತ್ತು ಟ್ರಿಪ್‌ಗ್ಳನ್ನು ನಮೂದಿಸಲಾಗಿದೆಯೇ ಹೊರತು, ಅವು ರಸ್ತೆಯಲ್ಲಿ ಓಡಾಡುವುದು ಕಾಣಿಸುತ್ತಿಲ್ಲ ಎನ್ನುವುದು ಪ್ರಯಾಣಿಕರ ಆರೋಪ. “ನಾವು ಕೆಎಸ್‌ಆರ್‌ಟಿಯವರ ಪಾಸ್‌ ಮಾಡಿಸಿಕೊಂಡು ಕೆಎಸ್‌ಆರ್‌ಟಿಸಿಗೆ ಕಾದು ಕಾಂಟ್ರಾÂಕ್ಟ್ ಕ್ಯಾರೇಜ್‌ ಬಸ್‌ನಲ್ಲಿ ಹೋಗಬೇಕಾದ ಸ್ಥಿತಿ ಬಂದಿದೆ ಇದೆ’ ಎನ್ನುವುದು ಪ್ರಯಾಣಿಕರ ನಿತ್ಯದ ಗೋಳಾಗಿದೆ. 

ನಿತ್ಯ ಪ್ರಯಾಣಿಕರ ಆರೋಪ
ಉದಾಹರಣೆಗೆ ಪುತ್ತೂರಿನಿಂದ ಮಂಗಳೂರಿಗೆ ಬರುವ ಪಾಸ್‌ ಹೊಂದಿರುವ ನಿತ್ಯ ಪ್ರಯಾಣಿಕರೊಬ್ಬರು ಬುಧವಾರ(ಆ. 16ರಂದು) ಬೆಳಗ್ಗೆ 8.05ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾದು ಕೊನೆಗೆ ಉಪಾಯವಿಲ್ಲದೆ 8.30ಕ್ಕೆ ಖಾಸಗಿ ಬಸ್‌ ಮೂಲಕ ಮಂಗಳೂರಿಗೆ ಬಂದಿಳಿಯಬೇಕಾಯಿತು. ಆದರೆ, ಈ ಅವಧಿಯಲ್ಲಿ ಪುತ್ತೂರಿನಿಂದ ಮಂಗಳೂರು ಕಡೆಗೆ ಕೆಎಸ್‌ಆರ್‌ಟಿಸಿಯ ಕೇವಲ ಒಂದು ಷಟಲ್‌ ಬಸ್‌ ಬಿಟ್ಟರೆ ಬೇರೆ ಯಾವುದೇ ಸರಕಾರಿ ಬಸ್‌ ಸಂಚಾರ ನಡೆಸಿಲ್ಲ. ಇನ್ನೊಂದೆಡೆ, ಈ ಅವಧಿ ಮಧ್ಯೆ ಒಟ್ಟು ಮೂರು ಖಾಸಗಿ ಬಸ್‌ಗಳು ಸಂಚರಿಸಿವೆ ಎನ್ನುವುದು ನೊಂದ ಪ್ರಯಾಣಿಕರ ವಾದ. 

ಪ್ರತಿದಿನ ಪುತ್ತೂರಿನಿಂದ ಮಂಗಳೂರಿಗೆ ಸುಮಾರು 10 ಖಾಸಗಿ ಬಸ್‌ಗಳು ಒಂದರ ಹಿಂದೆ ಒಂದರಂತೆ ಸಂಚರಿಸುತ್ತಿರುತ್ತವೆ. ಬಹುತೇಕ ಎಲ್ಲ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿರುತ್ತದೆೆ. ವಿಶೇಷ ಅಂದರೆ, ಮಕ್ಕಳು ಶಾಲೆಗೆ ಹಾಗೂ ನೌಕರರು ಕಚೇರಿಗೆ ಹೋಗುವ ವೇಳೆಯಲ್ಲಿ ಸರಕಾರಿ ಬಸ್‌ಗಳು ನಾಪತ್ತೆಯಾಗಿರುತ್ತವೆ. ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿರುತ್ತವೆ. ಆದರೆ ಕಚೇರಿ ವೇಳೆ ಬಿಟ್ಟರೆ ಉಳಿದ ಸಮಯಗಳಲ್ಲಿ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಲಿಯಾಗಿಯೇ ಓಡುತ್ತವೆ. ಈ ರೀತಿ ಖಾಸಗಿ ಬಸ್‌ನವರ ಈ ರೀತಿಯ ಲಾಬಿಯಿಂದಾಗಿ ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಇದ್ದು ಕೂಡ ಇಲ್ಲದಂತಾಗಿವೆ. ಈ ಸಮಸ್ಯೆಯಿಂದಾಗಿ ಹೆಚ್ಚಿನ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಪಾಸ್‌ ಮಾಡುವುದನ್ನೇ ಬಿಟ್ಟಿದ್ದಾರೆ. ಕೆಲವರು ಪಾಸ್‌ ಇದ್ದರೂ ಖಾಸಗಿ ಬಸ್‌ನಲ್ಲಿ ಅನ್ಯಮಾರ್ಗವಿಲ್ಲದೆ ಹೋಗುತ್ತಿದ್ದಾರೆ !

ಸೀಮಿತ ನಿಲುಗಡೆ: 216 ಟ್ರಿಪ್‌ಗ್ಳು
ಪುತ್ತೂರು-ಮಂಗಳೂರು(ಸ್ಟೇಟ್‌ಬ್ಯಾಂಕ್‌) ಮಧ್ಯೆ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ಒಟ್ಟು 33 ಸೀಮಿತ ನಿಲುಗಡೆ ಬಸ್‌ಗಳು ಹಾಗೂ 8 ಸಾಮಾನ್ಯ ಬಸ್‌ಗಳು ಸಂಚರಿಸುತ್ತಿವೆ. ಅಂದರೆ, ತಲಾ 108 ಟ್ರಿಪ್‌ಗ್ಳು ಪುತ್ತೂರಿನಿಂದ ಸ್ಟೇಟ್‌ಬ್ಯಾಂಕ್‌ಗೆ ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ಕಾರ್ಯಾಚರಿಸುತ್ತಿವೆ. ಅಂದರೆ ಒಟ್ಟು 216 ಟ್ರಿಪ್‌ಗ್ಳು ಈ ಮಾರ್ಗಮಧ್ಯೆ ಓಡುತ್ತಿದ್ದು, ಇವುಗಳಲ್ಲಿ ಕೆಲವೊಂದು ಬಸ್‌ಗಳು ಮಾತ್ರ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಚಲಿಸುತ್ತಿವೆ. ಪುತ್ತೂರು-ಮಂಗಳೂರು ಮಧ್ಯೆ ಪುತ್ತೂರು ವಿಭಾಗದಿಂದ ಮಾತ್ರ ಬಸ್‌ಗಳು ಓಡಾಡುತ್ತಿದ್ದರೆ, ಮಂಗಳೂರು ಧರ್ಮಸ್ಥಳ ಮಧ್ಯೆ ಬಹುತೇಕ ಬಸ್‌ಗಳು ಮಂಗಳೂರು ವಿಭಾಗದ ಬಸ್‌ಗಳೇ ಆಗಿವೆ. 

ಸುಳ್ಯ-ಸ್ಟೇಟ್‌ಬ್ಯಾಂಕ್‌ ಎಕ್ಸ್‌ಪ್ರೆಸ್‌
ಕಳೆದ ಒಂದು ತಿಂಗಳ ಹಿಂದೆ ಸುಳ್ಯ-ಸ್ಟೇಟ್‌ಬ್ಯಾಂಕ್‌ ಮಧ್ಯೆ ಹೊಸದಾಗಿ ಎಕ್ಸ್‌ಪ್ರೆಸ್‌ ಬಸ್‌ ಸಂಚಾರ ಆರಂಭಗೊಂಡಿದೆ. ಪ್ರಸ್ತುತ ನಾಲ್ಕು ಬಸ್‌ಗಳು ಓಡಾಡುತ್ತಿದ್ದು, ಪ್ರತಿ ಬಸ್‌ಗಳು ಎರಡು ಟ್ರಿಪ್‌ನಂತೆ ದಿನಕ್ಕೆ ತಲಾ ಎಂಟು ಟ್ರಿಪ್‌ನಂತೆ  ಒಟ್ಟು 16 ಟ್ರಿಪ್‌ಗ್ಳು ಓಡಾಡುತ್ತವೆ. ಈ ಬಸ್‌ ಸಮಯಕ್ಕೆ ಸರಿಯಾಗಿ ಓಡುವುದಿಲ್ಲ ಎಂದು ಪ್ರಯಾಣಿಕರು ಆರೋಪಿಸಿದರೆ, ಅದರ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎನ್ನುವುದು  ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಾದ. 
ಪ್ರಸ್ತುತ ನಿಗದಿ ಪಡಿಸಿರುವ ಅದರ ಸಂಚಾರದ ವೇಳಾಪಟ್ಟಿ ಹೀಗಿದೆ. ಸ್ಟೇಟ್‌ಬ್ಯಾಂಕಿನಿಂದ ಬೆಳಗ್ಗೆ 8.30, 9.00, 10.00, 10.45, ಮಧ್ಯಾಹ್ನ 2.00, ಸಂಜೆ 4.45, 5.45, 6.30, ಸುಳ್ಯದಿಂದ ಬೆಳಗ್ಗೆ 5.45, 6.15, 6.50, 8.00, 11.00, ಮಧ್ಯಾಹ್ನ 2.00, 3.00, 3.30ಕ್ಕೆ ಹೊರಡುತ್ತಿದೆ. 

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.