ಪುತ್ತೂರು: ಉದಯವಾಣಿ ನವರೂಪ ಬಹುಮಾನ ವಿತರಣಾ ಸಮಾರಂಭ

ಬದುಕಿನಲ್ಲಿ ಹೊಸತನ ಮೂಡಿಸಿದ ನವರೂಪ : ವಂದನಾ ಶಂಕರ್‌

Team Udayavani, Oct 10, 2022, 6:38 PM IST

1-a

ಪುತ್ತೂರು: ಬೆಳಕು ದೇಹಕ್ಕೆ ಖುಷಿ ಭಾವ ತುಂಬಿ ಜೀವನೋತ್ಸಾಹ ತುಂಬುವ ವಸ್ತು. ಇವೆರೆಡು ಪ್ರತಿ ವ್ಯಕ್ತಿಯ ಬದುಕಿನ ಆವಶ್ಯಕತೆಯೂ ಹೌದು ಎಂದು ವಿವೇಕಾನಂದ ಕಾಲೇಜು ಆಫ್‌ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸಂಸ್ಥೆಯ ಅಡ್ಮಿಷನ್‌ ಮತ್ತು ಪ್ಲೇಸ್‌ಮೆಂಟ್‌ ವಿಭಾಗದ ಮುಖ್ಯಸ್ಥೆ ವಂದನಾ ಶಂಕರ್‌ ಹೇಳಿದರು.

ಪುತ್ತೂರು ಟೌನ್‌ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಉದಯವಾಣಿಯ ವತಿಯಿಂದ ಹಮ್ಮಿಕೊಂಡಿದ್ದ ‘ನವರೂಪ’ದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಎಳೆಯ ಮಗುವಿನಿಂದ ಇಳಿ ವಯಸ್ಸಿನವರ ತನಕ ಬಣ್ಣ, ಬೆಳಕು ಬೀರುವ ಪರಿಣಾಮ ಆಗಾಧವಾದದು. ವೈಜ್ಞಾನಿಕ ದೃಷ್ಟಿಯಿಂದಲೂ ಬಣ್ಣ, ಬೆಳಕಿನ ಕಡೆಗೆ ಕಣ್ಣಿನ ದೃಷ್ಟಿ ಹರಿದಾಗ ಖುಷಿ ಮೂಡಿ ದೇಹದಲ್ಲಿ ನವೋಲ್ಲಾಸದ ಭಾವ ಮೂಡುತ್ತದೆ ಎನ್ನುವುದು ದೃಢಪಟ್ಟಿದೆ ಎಂದರು.

ಉದಯವಾಣಿಯ ನವರೂಪ ಮನಸ್ಸು ಮನಸ್ಸನ್ನು ಬೆಸೆಯಲು ದೊರೆತ ಒಂದು ಅವಕಾಶ. ಎಲ್ಲರೂ ಒಂದುಗೂಡಿ ಹೊಸತನಕ್ಕೆ ಒಗ್ಗಿಕೊಳ್ಳುವ ವೇದಿಕೆ. ನಾವು ಜತೆ ಜತೆಗಿದ್ದರೆ ಬದುಕು ಬಣ್ಣದಂತೆ ಹೊಳಪಿನಿಂದ ಕೂಡಿರುತ್ತದೆ ಎನ್ನುವ ಸಂದೇಶ ನೀಡುವ ಈ ನವರೂಪ ಅತ್ಯುತ್ತಮ ಚಟುವಟಿಕೆ ಎಂದವರು ಪ್ರಶಂಸಿದರು.

ಬಣ್ಣ ಬೆಳಕು ಎರಡು ಜತೆಗಿದ್ದರೆ ಬದುಕು ಬಂಗಾರ ಆಗುತ್ತದೆ. ನವರೂಪ ಪ್ರತಿ ದಿನವು ಪ್ರತಿಯೊಬ್ಬರ ಮುಖದಲ್ಲಿಯು ಉಲ್ಲಾಸ ತುಂಬಿದ ದಿನ. ಆಯಾ ದಿನ ಬಣ್ಣದ ಆಯ್ಕೆ, ಪೋಟೋ ತೆಗೆಯುವ ಉತ್ಸಾಹ ಹೀಗೆ ನವರೂಪ ದಿನವಿಡೀ ಸಂಭ್ರಮದ ಚಟುವಟಿಕೆಯ ರೂಪವಾಗಿಯು ಬದಲಾಗಿತ್ತು ಎಂದರು.

ಉದಯವಾಣಿ ಅಭಿಮಾನದ ಪತ್ರಿಕೆ
ನಾನು ಇಪ್ಪತ್ತಾರು ವರ್ಷದ ಹಿಂದೆ ಪುತ್ತೂರಿಗೆ ಕಾಲಿಟ್ಟಾಗ ನ್ಯೂಸ್‌ ಪೇಪರ್‌ ಅಂದರೆ ಉದಯವಾಣಿ ಎನ್ನುವ ಮಾತಿತ್ತು. ಅಂದಿನಿಂದ ಈ ತನಕವು ಉದಯವಾಣಿ ಓದುತ್ತಲೇ ಬಂದಿದ್ದೇನೆ. ಎಷ್ಟೇ ಪತ್ರಿಕೆಗಳನ್ನು ಓದಿದರೂ ಉದಯವಾಣಿ ಓದದೆ ಇದ್ದರೆ ಆ ದಿನ ಪತ್ರಿಕೆ ಓದು ಅಪೂರ್ಣ ಎಂದೆನಿಸುತ್ತದೆ. ಅಂತಹ ಗುಣಮಟ್ಟವನ್ನು ಪತ್ರಿಕೆ ಹೊಂದಿದ್ದು ಉದಯವಾಣಿ ನಮ್ಮ ಅಭಿಮಾನದ ಪತ್ರಿಕೆ ಎಂದು ವಂದನಾ ಶಂಕರ್‌ ನುಡಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಮಾತನಾಡಿ, ಈ ಬಾರಿಯ ನವರೂಪಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪೋಟೋಗಳು ಬಂದಿವೆೆ. ಈ ಅಭೂತಪೂರ್ವ ಪ್ರತಿಕ್ರಿಯೆ ನವರೂಪದ ಸಂಭ್ರಮ ಎಷ್ಟರ ಮಟ್ಟಿಗೆ ಇತ್ತು ಅನ್ನುವುದಕ್ಕೆ ಉದಾಹರಣೆ ಎಂದರು.

ಸವಾಲಿನ ಕಾಲಘಟ್ಟ ಇದು. ಮಹಿಳಾ ಸಬಲೀಕರಣದ ಜತೆಗೆ ಮತ್ತಷ್ಟು ಬಣ್ಣಗಳನ್ನು ಅವರ ಬದುಕಿಗೆ ತುಂಬುವುದು, ಮತ್ತಷ್ಟು ಜನರನ್ನು ಸ್ಪಂದಿಸುವ, ಪ್ರೀತಿಸುವ, ಒಪ್ಪಿಕೊಳ್ಳುವ ಮನೋಭಾವ ಸೃಷ್ಟಿಸುವ ಮೂಲಕ ಒಂದು ಸುಂದರ ಸಮಾಜದ ನಿರ್ಮಾಣದ ಆಶಯ ಉದಯವಾಣಿ ನವರೂಪದ್ದು ಎಂದರು.

ಬಹುಮಾನ ವಿತರಣೆ
ಪುಂಜಾಲಕಟ್ಟೆ ಕುಕ್ಕುಳ ಪ್ರಂಡ್ಸ್‌ ಸಮೂಹ, ಪುತ್ತೂರು ವೈಷ್ಣವಿ ತಂಡ, ಅಜ್ಜಿಬೆಟ್ಟು ವಠಾರ ಪ್ರಂಡ್ಸ್‌, ಬೆಳ್ಳಾರೆ ಪಡ್ಪು ಗೆಳತಿಯರ ಬಳಗ, ಧೀಶಕ್ತಿ ಮಹಿಳಾ ಯಕ್ಷ ಬಳಗ, ಗುರುವಾಯನಕೆರೆ ಶಾರಾದ ಮತ್ತು ಬಳಗ, ಐವರ್ನಾಡು ಸಂಗಮ ತಂಡಕ್ಕೆ ಮುಖ್ಯ ಅತಿಥಿ ವಂದನಾ ಶಂಕರ್‌ ಅವರು ಬಹುಮಾನ ವಿತರಿಸಿದರು. ಬಹುಮಾನ ಪಡೆದ ಸದಸ್ಯೆಯರು ಉದಯವಾಣಿಯ ನವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಸೀನಿಯರ್‌ ಎಕ್ಸಿಕ್ಯೂಟಿವ್‌ ಹರ್ಷ ಎ ಪುತ್ತೂರು ಬಹುಮಾನಿತ ಪಟ್ಟಿ ವಾಚಿಸಿದರು. ಬಂಟ್ವಾಳ ಮಾರುಕಟ್ಟೆ ವಿಭಾಗದ ಎಕ್ಸಿಕ್ಯೂಟಿವ್‌ ಶ್ರೀವತ್ಸ ಸುದೆಂಬಳ ವಂದಿಸಿದರು. ವರದಿಗಾರ ಕಿರಣ್‌ ಪ್ರಸಾದ್‌ ಕುಂಡಡ್ಕ ನಿರೂಪಿಸಿದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.