ಪುತ್ತೂರಿನ ಆರಕ್ಷಕರಿಗೆ ವಸತಿಗೃಹದ್ದೇ ಚಿಂತೆ!


Team Udayavani, May 19, 2018, 2:15 AM IST

quartress-18-2.jpg

ಪುತ್ತೂರು: ನಗರ ಠಾಣೆಯ ಒಟ್ಟು ಸಿಬಂದಿ ಸಂಖ್ಯೆ 101. ಆದರೆ ಇಲ್ಲಿರುವ ವಸತಿಗೃಹಗಳ ಸಂಖ್ಯೆ ಕೇವಲ 25. ಇರುವ 25 ವಸತಿಗೃಹಗಳಲ್ಲಿ  ಮಂಗಳೂರು, ಬಂಟ್ವಾಳ ಠಾಣೆಯ ಸಿಬಂದಿಗಳೂ ಇದ್ದಾರೆ. ಹಾಗಾದರೆ ಪುತ್ತೂರು ಠಾಣೆಯ ಸಿಬಂದಿ ಏಲ್ಲಿಗೆ ಹೋಗಬೇಕು? ಸಮಾಜದ ರಕ್ಷಕರಿಗೇ ಸರಿಯಾದ ಸೂರು ಇಲ್ಲದ ದೈನಸೀ ಪರಿಸ್ಥಿತಿ ಪುತ್ತೂರು ನಗರ ಠಾಣೆಯಲ್ಲಿದೆ. ಹೊತ್ತಲ್ಲದ ಹೊತ್ತಲ್ಲಿ ಕೆಲಸ, ಮಹಿಳಾ ಸಿಬಂದಿ ರಾತ್ರಿ ಪಾಳಿಯಲ್ಲಿಯೂ ಕೆಲಸ ನಿರ್ವಹಿಸುವ ಉದಾಹರಣೆ, ಇನ್ನು ಚುನಾವಣೆ- ತುರ್ತು ಪರಿಸ್ಥಿತಿಯಲ್ಲಂತೂ ಕೇಳುವುದೇ ಬೇಡ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಷ್ಟೆಲ್ಲ ಪಾಡು ಪಡುವ ಆರಕ್ಷಕರಿಗೆ, ಸೂಕ್ತ ವ್ಯವಸ್ಥೆ ನೀಡದೇ ಇರುವುದು ವಿಪರ್ಯಾಸ.

ಜಿಲ್ಲೆಯ ಎರಡನೇ ದೊಡ್ಡ ವಾಣಿಜ್ಯ ನಗರಿ ಎಂಬ ಬಿರುದು ಪುತ್ತೂರಿಗಿದೆ. ಸಾಲದ್ದಕ್ಕೆ ಜಿಲ್ಲಾ ಕೇಂದ್ರ ಮಾಡಬೇಕೆಂದು ಜನಪ್ರತಿನಿಧಿಗಳು ಭರವಸೆ ಮೇಲೆ ಭರವಸೆ ನೀಡುತ್ತಿದ್ದಾರೆ. ಸದ್ಯ  ಮೂರು ತಾಲೂಕು ಗಳಿಗೆ ಪುತ್ತೂರು ಕೇಂದ್ರಸ್ಥಾನ. ಹಾಗಿರುವಾಗ ಪೊಲೀಸ್‌ ಇಲಾಖೆ ಮೇಲೆ ಸಾಕಷ್ಟು ಒತ್ತಡ ಸಹಜವಾಗಿ ಇರುತ್ತವೆ. ಇದನ್ನು ಸರಿಯಾಗಿ ನಿಭಾಯಿಸಬೇಕು ಎಂದರೆ, ತಲೆಮೇಲೆ ಭದ್ರವಾದ ಸೂರು ಇರಬೇಕಲ್ಲವೇ? ವಸತಿ ಇಲ್ಲ ಎಂದು ಠಾಣೆಯಲ್ಲಿ ಬಂದು ಮಲಗಲು ಸಾಧ್ಯವೇ ಎನ್ನುವುದು ಪೊಲೀಸರ ಪ್ರಶ್ನೆ.

ಪುತ್ತೂರು ನಗರದಲ್ಲಿ ಮೂರು ಠಾಣೆಗಳಿವೆ. ಕಾನೂನು ಸುವ್ಯವಸ್ಥೆ, ಸಂಚಾರಿ ಠಾಣೆ, ಮಹಿಳಾ ಠಾಣೆ. ಇದರಲ್ಲಿ ಸಂಚಾರಿ ಹಾಗೂ ಮಹಿಳಾ ಠಾಣೆ ಇತ್ತೀಚೆಗೆ ಆಗಿದ್ದರೂ, ಇವರಿಗೆ ಇನ್ನೂ ಕೂಡ ವಸತಿಗೃಹಗಳನ್ನು ಅಧಿಕೃತವಾಗಿ ನೀಡಲಾಗಿಲ್ಲ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ನಗರ ಠಾಣೆಯಲ್ಲಿ 55 ಮಂದಿ ಅಧಿಕಾರಿ, ಸಿಬಂದಿಗಳಿದ್ದು ಇವರು ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆಯಲ್ಲಿ ನರಳುತ್ತಿದ್ದಾರೆ. ಸಂಚಾರಿ ಠಾಣೆಯ ಸಿಬಂದಿಗೆ ಇದೇ ವಸತಿಗೃಹವನ್ನು ನೀಡಿದ್ದು, ಒಂದರಲ್ಲಿ 3-4 ಮಂದಿ ವಾಸ್ತವ್ಯ ಹೂಡಿದ್ದಾರೆ.


ಬಾಡಿಗೆ ಮನೆಯೇ ಗತಿ

ಠಾಣೆಗೆ ಹೊಸದಾಗಿ ನೇಮಕವಾದ ಅನೇಕ ಮಂದಿ ಸಿಬಂದಿಗಳಿದ್ದಾರೆ. ಇದರಲ್ಲಿ ಮಹಿಳಾ ಸಿಬಂದಿಯೂ ಸೇರಿದ್ದಾರೆ. ಇವರಿಗೆ ವಸತಿಗೃಹವಿಲ್ಲದೇ, ದೂರದ ಪ್ರದೇಶದಲ್ಲಿ ಬಾಡಿಗೆ ಕೊಠಡಿ ಹುಡುಕುವಂತಾಗಿದೆ. ಕೆಲಸ ಮುಗಿಸಿ ರಾತ್ರಿ ಹೊತ್ತು ಇಷ್ಟು ದೂರದ ರೂಂಗಳಿಗೆ ಮಹಿಳಾ ಸಿಬಂದಿ ನಡೆದುಹೋಗಬೇಕಾದ ಸ್ಥಿತಿ ಇದೆ. ಸುಳ್ಯ ಹಾಗೂ ಇದರ ಆಸುಪಾಸು ಮನೆ ಇದ್ದವರು ದಿನನಿತ್ಯ ಹೋಗಿ ಬರುವಂತಹ ಪರಿಸ್ಥಿತಿ ಇದೆ. ಇದರ ಬಗ್ಗೆ ಪೊಲೀಸ್‌ ಉಪಾಧೀಕ್ಷಕರಿಗೆ ಈಗಾಗಲೇ ಮನವಿ ನೀಡಲಾಗಿದೆ.

ತುಂಬಿ ಹೋಗಿರುವ ಟಾಯ್ಲೆಟ್‌, ಚರಂಡಿ ಸಮಸ್ಯೆ, ಆವರಣ ಗೋಡೆ ಇಲ್ಲ, ಒಂದು ಮನೆಯಲ್ಲಿ 2-3 ಸಿಬಂದಿ ವಾಸ, ಸೋರುವ ಹಂಚು, ಎದುರು ಭಾಗಕ್ಕೆ ಮಾತ್ರ ಟೈಲ್ಸ್‌, ಗಾಳಿ- ಬೆಳಕು ಇಲ್ಲ, ವಿದ್ಯುತ್‌ ಕೈಕೊಟ್ಟರೆ ವಿಪರೀತ ಸೆಖೆ, ಅಸಮರ್ಪಕ ಕೊಠಡಿ, ಟ್ಯಾಂಕ್‌ ಇಲ್ಲದ ಕಾರಣ ಬೆಳಗ್ಗೆ ಮಾತ್ರ ನೀರು, ನೀರು ಬರುವಾಗ ಡ್ಯೂಟಿಯಲ್ಲಿರುವ ಸಿಬಂದಿಗೆ ದಿನಪೂರ್ತಿ ನೀರಿಲ್ಲ, ಕುಟುಂಬವನ್ನು ಬಿಟ್ಟಿರಬೇಕಾದ ಸ್ಥಿತಿ, ಇಲಿ- ಹುಳ ಕಾಟ ಹೀಗೆ ಅನೇಕ ಸಮಸ್ಯೆಗಳು ಪೊಲೀಸ್‌ ವಸತಿಗೃಹ ವಾಸಿಗಳನ್ನು ಕಾಡುತ್ತಿವೆ.

ಕಾಮಗಾರಿ ನಡೆಯುತ್ತಿದೆ
ಬನ್ನೂರು, ಸಾಮೆತ್ತಡ್ಕದಲ್ಲಿ ಹೊಸ ವಸತಿಗೃಹದ ಕಾಮಗಾರಿ ನಡೆಯುತ್ತಿದೆ. ಕೆಲಸ ವೇಗ ಪಡೆದುಕೊಂಡರೆ, 2-3 ತಿಂಗಳಲ್ಲಿ ವಸತಿಗೃಹ ವಾಸಕ್ಕೆ ಯೋಗ್ಯವಾಗಲಿದೆ. ಮಹಿಳಾ ಸಿಬಂದಿಗಳಿಗೆ ಹೆಚ್ಚಾಗಿ ರಾತ್ರಿ ಪಾಳಿ ಕೊಡುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಮುಂದೆ ಅವರಿಗೆ ಠಾಣೆ ಪಕ್ಕದ ವಸತಿಗೃಹವನ್ನೇ ನೀಡಲಾಗುವುದು.
– ಶ್ರೀ ನಿವಾಸ್‌, ಡಿವೈಎಸ್ಪಿ, ಪುತ್ತೂರು

— ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.