ರಫೇಲ್ ಹಗರಣದಿಂದ ಬಿಜೆಪಿ ಬಣ್ಣ ಬಯಲು: ಶೆರ್ಗಿಲ್
Team Udayavani, Aug 28, 2018, 3:35 AM IST
ಮಂಗಳೂರು: ರಫೇಲ್ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಕೇಂದ್ರದ ಬಿಜೆಪಿ ಸರಕಾರದ ನಿಜ ಬಣ್ಣಬಯಲು ಮಾಡಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಆರೋಪಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಫೇಲ್ ಹಗರಣ ಬಿಜೆಪಿಯ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಧೋರಣೆಗಳಿಗೆ ದೊಡ್ಡ ಉದಾಹರಣೆ. 526.1 ಕೋ.ರೂ. ಬೆಲೆಯ ಪ್ರತಿ ವಿಮಾನವನ್ನು 1,670.70 ಕೋ.ರೂ. ನೀಡಿ ಖರೀದಿಸಲಾಗುತ್ತಿದೆ. ದೇಶದ ಬೊಕ್ಕಸಕ್ಕೆ 41,205 ಕೋ.ರೂ. ನಷ್ಟವುಂಟು ಮಾಡಲಾಗಿದೆ. ಹೆಚ್ಚುವರಿ 41,205 ಕೋ.ರೂ. ಹಣವನ್ನು ರಫೇಲ್ ಖರೀದಿಗೆ ಕೊಡುತ್ತಿರುವುದೇಕೆ ಎಂದು ಮೋದಿ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಬಹಿರಂಗಕ್ಕೆ ಅಡ್ಡಿಯಿಲ್ಲ
ಒಪ್ಪಂದದ ಗೌಪ್ಯತೆಯಿಂದಾಗಿ ಬೆಲೆ ಏರಿಕೆಯ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮತ್ತು ರಕ್ಷಣಾ ಸಚಿವರು ಹೇಳುತ್ತಿದ್ದಾರೆ. ಆದರೆ ಬೆಲೆ ಬಹಿರಂಗಗೊಳಿಸಬಾರದೆಂಬ ಅಂಶ ಒಪ್ಪಂದದಲ್ಲಿ ಇಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ರಕ್ಷಣಾ ವಲಯದ ಒಪ್ಪಂದದ ಬೆಲೆಗಳನ್ನು ಸಂಸತ್ತಿನಲ್ಲೇ ಬಹಿರಂಗಗೊಳಿಸಲಾಗಿತ್ತು. ‘ಚೌಕಿದಾರ್’ ಎಂದು ಕರೆದುಕೊಳ್ಳುತ್ತಿರುವ ಮೋದಿ ಇದರಲ್ಲಿ ‘ಭಾಗೀದಾರ್’ ಆಗಿದ್ದಾರೆ ಎಂದು ಆರೋಪಿಸಿದರು.
ವಾಯುಸೇನೆಗೆ ಅಗತ್ಯವಿದ್ದ 126 ಯುದ್ಧ ವಿಮಾನಗಳ ಖರೀದಿಯನ್ನು 36ಕ್ಕೆ ಇಳಿಸಿದ್ದೇಕೆ? 36 ರಫೇಲ್ ವಿಮಾನಗಳ ಪೈಕಿ ಮೊದಲನೆಯದು 2019ರ ಸೆಪ್ಟಂಬರ್ನಲ್ಲಿ ಹಾಗೂ ಕೊನೆಯದು 2022ರಲ್ಲಿ ಬರಲಿದೆ. ಖರೀದಿ ತೀರ್ಮಾನಿಸಿದ ಎಪ್ರಿಲ್ 2015ರಿಂದ 8 ವರ್ಷಗಳ ಅಂತರ. ಇದು ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡ ಹಾಗಲ್ಲವೇ ಎಂದು ಶೆರ್ಗಿಲ್ ಪ್ರಶ್ನಿಸಿದರು.
ಕೈತಪ್ಪಿದ 130,000 ಕೋ.ರೂ. ಉದ್ದಿಮೆ
ರಫೇಲ್ ಖರೀದಿ ಒಪ್ಪಂದ ಪಾರದರ್ಶಕತೆ, ಮೇಕ್ಇನ್ ಇಂಡಿಯಾ, ತಂತ್ರಜ್ಞಾನ ಹಸ್ತಾಂತರ ಉದ್ದೇಶ ಗಳನ್ನು ನಾಶ ಮಾಡಿದೆ. ಕರ್ನಾಟಕಕ್ಕೆ 1.30 ಲಕ್ಷ ಕೋ.ರೂ. ಉದ್ದಿಮೆ ನಷ್ಟವಾಗಿದೆ. ಯುಪಿಎ ಅವಧಿಯಲ್ಲಿ ಎಚ್ಎಎಲ್ ಮತ್ತು ಡಸಾಲ್ಟ್ ಏವಿಯೇಷನ್ ಸಂಸ್ಥೆಗಳು 36,000 ಕೋ.ರೂ. ಗುತ್ತಿಗೆಯ ಒಪ್ಪಂದಕ್ಕೆ ಬಂದಿದ್ದವು ಎಂದರು.
ಎಐಸಿಸಿ ಮಾಧ್ಯಮ ಸಂಚಾಲಕ ಸಂಜಯ ಸಿಂಗ್, ಡಿಸಿಸಿ ವಕ್ತಾರ ಎ.ಸಿ. ವಿನಯರಾಜ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕಾರ್ಯ ದರ್ಶಿಗಳಾದ ಟಿ.ಕೆ. ಸುಧೀರ್, ನೀರಜ್ಪಾಲ್, ನಜೀರ್ ಬಜಾಲ್ ಉಪಸ್ಥಿತರಿದ್ದರು.
– ದೇಶದ ಬೊಕ್ಕಸಕ್ಕೆ 41,205 ಕೋ.ರೂ. ನಷ್ಟ
– ರಾಜ್ಯಕ್ಕೆ ಕೈತಪ್ಪಿದ 130,000 ಕೋ.ರೂ. ಉದ್ದಿಮೆ
ಪೊಲಿಟಿಕಲ್ ಲಾಲಿಪಪ್
ಪ್ರಧಾನಿ ಮೋದಿಯವರ ಏಕಕಾಲದಲ್ಲಿ ಚುನಾವಣೆ ಪ್ರಸ್ತಾವ ‘ಪೊಲಿಟಿಕಲ್ ಲಾಲಿಪಪ್’ ಎಂದು ಬಣ್ಣಿಸಿದ ಜೈವೀರ್ ಶೆರ್ಗಿಲ್, ಏಕಕಾಲದಲ್ಲಿ ಚುನಾವಣೆ ಸಾಧ್ಯವಾಗದ ಮಾತು ಎಂದು ಚುನಾವಣಾ ಆಯೋಗ ಹೇಳಿದೆ. ಇವಿಎಂ ಹಾಗೂ ಬ್ಯಾಲೆಟ್ ಪೇಪರ್ ಪೈಕಿ ಯಾವುದು ಉತ್ತಮ ಎಂಬ ಬಗ್ಗೆ ಒಂದು ರಾಷ್ಟ್ರೀಯ ಚರ್ಚೆ ನಡೆಯುವುದು ಆಗತ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ