‘ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನಕ್ಕೆ ಯಶಸ್ವಿ ಎರಡು ತಿಂಗಳು

ಜನರನ್ನು ಜಲ ಸಾಕ್ಷರಗೊಳಿಸುವ ಪ್ರಯತ್ನಕ್ಕೆ ಗಣ್ಯರು-ಧಾರ್ಮಿಕ ನೇತಾರರ ಮೆಚ್ಚುಗೆ

Team Udayavani, Aug 9, 2019, 5:55 AM IST

e-45

ಮಹಾನಗರ: ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರು ಎಂದೂ ಬತ್ತದ ಅಕ್ಷಯಪಾತ್ರೆಯಂತಿತ್ತು. ಆದರೆ ನಿರಂತರ ಕಾಡು ನಾಶ, ಗಿಡ ಮರಗಳ ಮರೆ ಮಾಚಿ ಕಾಂಕ್ರಿಟ್ ಕಾನನದ ಬೆಳವಣಿಗೆಯಿಂದಾಗಿ ಮೂರ್‍ನಾಲ್ಕು ವರ್ಷಗಳಿಂದೀಚೆಗೆ ನೀರಿಗಾಗಿ ಜಿಲ್ಲೆಯ ಜನತೆ ಹಾಹಾಕಾರ ಅನುಭವಿಸುವಂತಾಗಿದೆ.

ಕಳೆದ ಬೇಸಗೆಯಲ್ಲಂತೂ ಜಿಲ್ಲೆಯ ಜನತೆಯನ್ನು ಅದರಲ್ಲಿಯೂ ನಗರದವರಿಗೆ ನೀರಿನ ಅಭಾವ ಬಹಳ ತೀವ್ರವಾಗಿ ಬಿಸಿ ಮುಟ್ಟಿಸಿತ್ತು. ಬೇಸಗೆಯಲ್ಲಿ ಮನೆಗೆ ಕುಡಿಯುವ ನೀರು ಬರದಿದ್ದಾಗ ಅದಕ್ಕೆ ಆಡಳಿತ ವ್ಯವಸ್ಥೆಯನ್ನು ದೂರುವ ಬದಲು ಪರ್ಯಾಯವಾಗಿ ನೀರಿನ ಮೂಲದತ್ತ ಜಾಗೃತರಾಗುವುದು ಪ್ರತಿ ನಾಗರಿಕರ ಕರ್ತವ್ಯ. ಏಕೆಂದರೆ, ವಾರ್ಷಿಕ 3,500 ಲೀಟರ್‌ ಮಳೆ ಬೀಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಗೆಯಲ್ಲಿ ನೀರಿಲ್ಲ ಅಂದರೆ, ನಾವೆಲ್ಲಿ ಎಡವಿದ್ದೇವೆ ಎಂಬ ಗಂಭೀರ ಚಿಂತನೆಯೂ ಅಗತ್ಯ. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವುದಕ್ಕೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ. ಅದಕ್ಕಾಗಿ ಎರಡು ತಿಂಗಳ ಹಿಂದೆ ‘ಉದಯವಾಣಿ’ ಪ್ರಾರಂಭಿಸಿದ್ದ ಅಭಿಯಾನವೇ ‘ಮನೆ ಮನೆಗೆ ಮಳೆಕೊಯ್ಲು’.

ಜನರಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಉದಯವಾಣಿ’ಯು ಜೂನ್‌ 8ರಂದು ಪ್ರಾರಂಭಿಸಿದ್ದ ಈ ಅಭಿಯಾನವು ಇದೀಗ ಯಶಸ್ವಿಯಾಗಿ ಎರಡು ತಿಂಗಳುಗಳನ್ನು ಪೂರ್ಣಗೊಳಿಸಿದೆ. ಈ ಅಭಿಯಾನವು ಸಾವಿರಾರು ಜನರನ್ನು ಜಲ ಸಂರಕ್ಷಣೆಯತ್ತ ಜಾಗೃತಗೊಳಿಸಿದೆ. ಹಲವಾರು ಮನೆ, ಸಂಘ-ಸಂಸ್ಥೆ, ಚರ್ಚ್‌, ದೇವಸ್ಥಾನ, ಸಮುದಾಯ, ಶಾಲೆ-ಕಾಲೇಜುಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಕಳೆದ ಎರಡು ತಿಂಗಳಿನಿಂದ ಅಳವಡಿಕೆಯಾಗುತ್ತಿರುವುದು ಗಮನಾರ್ಹ.

ದ.ಕ. ಜಿಲ್ಲಾ ಪಂಚಾ ಯತ್‌ ಸಹ ಯೋಗದಲ್ಲಿ ನಿರ್ಮಿತಿ ಕೇಂದ್ರ ದವರು ಜಿಲ್ಲೆಯಾ ದ್ಯಂತ ಅಲ್ಲಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯ ಕ್ರಮ-ಪ್ರಾತ್ಯಕ್ಷಿಕೆ, ಮನೆ-ಮನೆಗೆ ಭೇಟಿ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈಗಾಗಲೇ ಸಾವಿರಾರು ಮಂದಿಗೆ ಮಳೆಕೊಯ್ಲಿನ ಅಗತ್ಯ-ಅನುಕೂಲತೆಯನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ 293 ಮಂದಿ ನಿರ್ಮಿತಿ ಕೇಂದ್ರಕ್ಕೆ ಕರೆ ಮಾಡಿ ಮಳೆಕೊಯ್ಲು ಬಗ್ಗೆ ಮಾಹಿತಿ ಕೇಳಿದ್ದು, 105 ಮನೆಗಳಿಗೆ ಈವರೆಗೆ ಭೇಟಿ ನೀಡಲಾಗಿದೆ. ಉಳಿದವರಿಗೆ ಫೋನ್‌ನಲ್ಲೇ ಅಳವಡಿಸಿಕೊಳ್ಳಲು ಮಾರ್ಗದರ್ಶ ಮಾಡಲಾಗಿದೆ.

ಮಳೆಕೊಯ್ಲು ಕಾರ್ಯಾಗಾರದಲ್ಲಿ ಮಾಹಿತಿ ನೀಡುವಂತೆ 47 ಆಹ್ವಾನಗಳು ಬಂದಿದ್ದು, ಈ ಪೈಕಿ 37 ಕಡೆ ಮಾಹಿತಿ ಕಾರ್ಯಕ್ರಮ ನೀಡಲಾಗಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದ್ದಾರೆ.

ಅಭಿಯಾನದಿಂದ ಸ್ಫೂರ್ತಿಗೊಂಡು ಬೆಳ್ತಂಗಡಿಯ ಮುಂಡಾಜೆಯಲ್ಲಿ ‘ನೀರಿಂಗಿಸೋಣ’ ಎಂಬ ತಂಡವೊಂದು ಅಸ್ತಿತ್ವಕ್ಕೆ ಬಂದಿದ್ದು, ಇಡೀ ಗ್ರಾಮದಲ್ಲಿ ಈಗ ಜಲಾಂದೋಲನದ ಕಾರ್ಯಕ್ರಮಗಳು ನಡೆಯುತ್ತಿವೆ. ಪೊಳಲಿ ಸರಕಾರಿ ಶಾಲೆಗೆ ಬಿರುವೆರ್‌ ಕುಡ್ಲ ಸಂಘಟನೆಯು ತಮ್ಮ ಖರ್ಚಿನಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಟ್ಟಿದೆ. ಅಲ್ಲದೆ, ಹಲವಾರು ವಿದ್ಯಾಸಂಸ್ಥೆ, ಸಮುದಾಯ ಸಂಘಟನೆಗಳು, ಪ್ರಾರ್ಥನಾ ಮಂದಿರಗಳು ಸ್ವಯಂಪ್ರೇರಿತವಾಗಿ ಅಲ್ಲಲ್ಲಿ ಮಳೆಕೊಯ್ಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಉದಯವಾಣಿಯ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದಕ್ಕೆ ಪ್ರಯತ್ನಿಸಿರುವುದು ಗಮನಾರ್ಹ.

ಈ ಹಿನ್ನೆಲೆಯಲ್ಲಿ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಇದೇರೀತಿ ಮತ್ತಷ್ಟು ಜಲ ಸಾಕ್ಷರತೆಗೆ ಪೂರಕವಾದ ಜನಾಂದೋಲನದೊಂದಿಗೆ ಮುಂದುವರಿಯಲಿದೆ.

ಆ ಮೂಲಕ, ಇಡೀ ಜಿಲ್ಲೆಯಲ್ಲಿ ಇನ್ನಷ್ಟು ಮನೆಗಳನ್ನು ಜಲ ಸಾಕ್ಷರತೆಗೊಳಿಸುವ ಪ್ರಯತ್ನಕ್ಕೆ ಈ ಅಭಿಯಾನವು ವೇದಿಕೆಯಾಗಲಿದೆ.

‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ಯಶಸ್ವಿಯಾಗಿ ಎರಡು ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಪ್ರಮುಖರು, ಧಾರ್ಮಿಕ ನೇತಾರರು ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಂದೇಶದ ಮೂಲಕ ಮತ್ತಷ್ಟು ಜನರನ್ನು ಈ ದಿಸೆಯಲ್ಲಿ ಪ್ರೇರಣೆಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ನೀರುಳಿತಾಯದ ಕ್ರಾಂತಿಯಾಗಲಿ

ನೀರನ್ನು ಮಳೆ ನೀರು ಕೊಯ್ಲು ವ್ಯವಸ್ಥೆ ಮೂಲಕ ಹಿಡಿದಿಟ್ಟುಕೊಂಡಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯೇ ಬಾರದು. ಜನರನ್ನು ನೀರಿಂಗಿಸಲು ಮತ್ತು ನೀರುಳಿಸುವಲ್ಲಿ ಜಾಗೃತಿ ಮೂಡಿಸಲು ಎರಡು ತಿಂಗಳಿನಿಂದ ಅಭಿಯಾನದ ಮೂಲಕ ಪ್ರೇರೇಪಿಸುತ್ತಿರುವ ‘ಉದಯವಾಣಿ’ ಪತ್ರಿಕೆಯ ಶ್ರಮ ಅಭಿನಂದನೀಯ. ಯೇನಪೊಯಾ ವಿವಿಯಲ್ಲಿಯೂ ದೊಡ್ಡ ಮಟ್ಟದಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಲಾಗಿದೆ. ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದೊಡ್ಡ ಮಟ್ಟದಲ್ಲಿ ಅಥವಾ ಸರಳವಾಗಿಯಾದರೂ ಮಳೆಕೊಯ್ಲು ಅಳವಡಿಸಿ ನೀರುಳಿತಾಯದ ಕ್ರಾಂತಿ ಉಂಟು ಮಾಡಬೇಕು.
– ಯೇನಪೊಯಾ ಅಬ್ದುಲ್ಲ ಕುಂಞಿ, ಚಾನ್ಸ್‌ಲರ್‌ ಯೇನಪೊಯಾ ವಿಶ್ವ ವಿದ್ಯಾನಿಲಯ
‘ಉದಯವಾಣಿ’ಯ ಮಾದರಿ ನಡೆ
ನೀರಿನ ಉಳಿತಾಯ ನಮ್ಮ ಜವಾಬ್ದಾರಿ. ನೀರಿಂಗಿಸಿದರೆ ನೇರವಾಗಿ ನಮಗೆ ಪ್ರಯೋಜನ ಆಗದೇ ಇದ್ದರೂ, ಭವಿಷ್ಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲದು. ಈ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟ ಅರಿವು ಮೂಡಿಸುವಲ್ಲಿ ಕರಾವಳಿಯ ಜನಪ್ರಿಯ ಪತ್ರಿಕೆ ‘ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನ ನಡೆಸಿರುವುದು ಅಭಿನಂದನೀಯ. ಅಭಿಯಾನ ಎರಡು ತಿಂಗಳು ಪೂರೈಸಿರುವುದಕ್ಕೆ ಅಭಿನಂದನೆ ತಿಳಿಸುತ್ತಾ, ನಿರಂತರ ಮುಂದುವರಿದು ಪ್ರತಿ ಮನೆಮನೆಗಳಲ್ಲಿಯೂ ಮಳೆ ನೀರಿಂಗಿಸುವ ದೊಡ್ಡ ಕ್ರಾಂತಿ ನಡೆಯಲಿ ಎಂದು ಆಶಿಸುವೆ.
– ಡಾ| ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ
ಸರ್ವರ ತಲುಪಿದ ಪರಿಣಾಮಕಾರಿ ಅಭಿಯಾನ

‘ಉದಯವಾಣಿ’ಗೆ ಅಭಿನಂದನೆ. ಮನೆ ಮನೆಗೆ ಉದಯವಾಣಿ ಜತೆಗೆ ಮನೆಮನೆಗೆ ಮಳೆಕೊಯ್ಲು ಎಂಬಂತೆ ಅಭಿಯಾನ ರೂಪುಗೊಂಡಿದೆ. ಬೇಸಗೆಯಲ್ಲಿ ನೀರಿಗೆ ದಾರಿ ಏನೆನ್ನುವ ಭಯ ಜನರಲ್ಲಿ ಸದಾ ಕಾಡುತ್ತಿರುತ್ತದೆ. ಮಳೆಕೊಯ್ಲು ಮಾಡಿದರೆ, ನೀರಿನ ಸಮಸ್ಯೆ ದೂರಾಗುತ್ತದೆ ಎಂಬ ದಾರಿಯನ್ನು ‘ಉದಯವಾಣಿ’ ಎರಡು ತಿಂಗಳುಗಳಿಂದ ತೋರಿಸಿಕೊಡುತ್ತಿದೆ. ಓರ್ವ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿದ್ದನ್ನು ನೋಡಿ ಆ ಮನೆಯ ಸುತ್ತಮುತ್ತಲಿನವರೂ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದನ್ನು ನನ್ನ ಕಣ್ಣಾರೆ ನೋಡಿದ್ದೇನೆ. ಎಲ್ಲರಿಗೂ ತಲುಪಿದ ಪರಿಣಾಮಕಾರಿ ಅಭಿಯಾನ.
-ದೇವದಾಸ್‌ ಕಾಪಿಕಾಡ್‌, ತುಳು ಚಲನಚಿತ್ರ ನಟ

ಮಳೆಕೊಯ್ಲು ಅತ್ಯುತ್ತಮ ವ್ಯವಸ್ಥೆ

ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ಮಳೆ ಕೊಯ್ಲು ಅತ್ಯುತ್ತಮ ವ್ಯವಸ್ಥೆ. ಈ ದಿಶೆಯಲ್ಲಿ ‘ಉದಯವಾಣಿ’ ಪತ್ರಿಕೆ ನಡೆಸುತ್ತಿರುವ ಜಾಗೃತಿ ಕಾರ್ಯಕ್ರಮ ಶ್ಲಾಘನೀಯ. ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಕುರಿತಂತೆ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಆಡಿರುವ ಮಾತುಗಳು ಇಂದಿಗೂ ಪ್ರಸ್ತುತ. ನೀರಿನ ಕೊರತೆಯನ್ನು ನೀಗಿಸಲು ಉಪ್ಪು ನೀರು ಸಂಸ್ಕರಿಸಿ ಸಿಹಿ ನೀರು ಉತ್ಪಾದಿಸಬೇಕೆಂದು ಡಾ| ಕಲಾಂ ಪ್ರತಿಪಾದಿಸಿದ್ದು, ಕರಾವಳಿಯಲ್ಲಿ ಆ ಬಗ್ಗೆಯೂ ಚಿಂತನೆ ನಡೆಸುವುದು ಉತ್ತಮ.
-ಅಲ್ಹಾಝ್ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌, ಖಾಝಿ, ಮಂಗಳೂರು

ಜಲ-ಜಂಗಲ್- ಜನ ರಕ್ಷಣೆ

ಮಳೆ ನೀರು ಇಂಗಿಸುವಿಕೆಯಿಂದ ಭೂ ಸವೆತ ಕಡಿಮೆಯಾಗುತ್ತದೆ. ಗಿಡಗಳನ್ನು ನೆಟ್ಟು ಕಾಡು ಬೆಳೆಸಿದರೆ ಉತ್ತಮ ಮಳೆಯಾಗುತ್ತದೆ. ಕಾಡುಗಳಿಂದ ಜಾನುವಾರುಗಳಿಗೆ ರಕ್ಷಣೆ ದೊರೆಯುತ್ತದೆ. ಮಂಗಳೂರು ಧರ್ಮ ಪ್ರಾಂತವು ಸಸಿ ನೆಡುವ ಮತ್ತು ಜಲ ಸಂರಕ್ಷಣೆಗೆ ಮಹತ್ವ ನೀಡುತ್ತಿದೆ. ಜಲ- ಜಮೀನು- ಜಂಗಲ್ (ಕಾಡು)- ಜಾನುವಾರು- ಜನ ರಕ್ಷಣೆ ಮಾಡುವ ಮಂತ್ರವನ್ನು ದಿನ ನಿತ್ಯ ಪಠಿಸೋಣ. ಉದಯವಾಣಿ ಮಳೆ ಕೊಯ್ಲು ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಸಂಗತಿ.
– ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ,ಧರ್ಮಾಧ್ಯಕ್ಷರು, ಮಂಗಳೂರು ಧರ್ಮ ಪ್ರಾಂತ

ಸಂದರ್ಭೋಚಿತ ಅಭಿಯಾನ

‘ಉದಯವಾಣಿ’ ಪತ್ರಿಕೆಯಲ್ಲಿ ‘ಮನೆ ಮನೆಗೆ ಮಳೆಕೊಯ್ಲು’ ವಿಚಾರದಲ್ಲಿ ಸಂದರ್ಭೋಚಿತವಾಗಿ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿ ಜನಜಾಗೃತಿ ಮೂಡಿಸಿರುವುದಕ್ಕೆ ಸಂತೋಷವಾಯಿತು.ನಮ್ಮ ನಾಡಿನ ಜನಪ್ರಿಯ ದೈನಿಕ ‘ಉದಯವಾಣಿ’ ಜಲ ಜಾಗೃತಿ ಅಭಿಯಾನ ಆರಂಭಿಸಿರುವುದು ಅತ್ಯಂತ ಸೂಕ್ತ ಹಾಗೂ ಶ್ಲಾಘನೀಯ ಕಾರ್ಯ. ಅಭಿನಂದನೆಗಳು. ಎಲ್ಲರೂ ತಮ್ಮ ಮನೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ‘ಮಳೆಕೊಯ್ಲು’ ಮಾಡಿಕೊಂಡಲ್ಲಿ ಈ ಬೃಹತ್‌ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಶ್ರೀ ಧರ್ಮಸ್ಥಳ ಮಂಜುನಾಥ ಕ್ಷೇತ್ರ

ವಿವಿ ಕೈಜೋಡಿಸಿದೆ

‘ಉದಯವಾಣಿ’ಯ ಮಳೆಕೊಯ್ಲು ಅಭಿಯಾನದ ಜತೆಗೆ ಕೆಲವು ಸಂಘ – ಸಂಸ್ಥೆಗಳು ಕೂಡ ಕೈ ಜೋಡಿಸಿ ಅಲ್ಲಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಇದೊಂದು ಜನಮನ ತಲುಪಿದ ಅಭಿಯಾನ. ವಿವಿಯೂ ಈ ಅಭಿಯಾನದಲ್ಲಿ ಸೇರಿಕೊಳ್ಳಲಿದೆ. ಈಗಾಗಲೇ ವಿವಿ ಸಂಯೋಜಿತ 210 ಕಾಲೇಜುಗಳಿಗೂ ಮಳೆಕೊಯ್ಲು ಅಳವಡಿಸಿ ಕೊಳ್ಳುವಂತೆ ಪತ್ರ ಬರೆದಿದ್ದೇನೆ; ಅದನ್ನು ಫಾಲೋಅಪ್‌ ಕೂಡ ಮಾಡಲಾಗುತ್ತಿದೆ. ಇದಕ್ಕೆಲ್ಲ ಕಾರಣ ‘ಉದಯವಾಣಿ’ ಅಭಿಯಾನ.
– ಡಾ| ಪಿ.ಎಸ್‌. ಯಡಪಡಿತ್ತಾಯ, ಉಪ ಕುಲಪತಿ, ಮಂಗಳೂರು ವಿವಿ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.