ರಸ್ತೆಯಲ್ಲೇ ಹರಿಯುತ್ತಿದೆ ಮಳೆ ನೀರು
Team Udayavani, Jun 3, 2018, 11:11 AM IST
ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆ ಸಹಿತ ಹಲವು ಭಾಗಗಳಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಉಲ್ಲಂಜೆ ರಸ್ತೆ ಸಮಸ್ಯೆಯೂ ಹೀಗೆ ಇದ್ದು, ಚರಂಡಿ ಇರುವಲ್ಲಿ ಹೂಳು ತೆಗೆಯದೇ ಇರುವು ದರಿಂದ ಸಮಸ್ಯೆ ಉದ್ಭವಿಸಿದ್ದು, ಗ್ರಾಮ ಪಂಚಾಯತ್ ಮಾತ್ರ ಮೌನವಹಿಸಿದೆ.
ರಾಜ್ಯ ಹೆದ್ದಾರಿ ಅಗಲಗೊಳಿಸಲು ಕೆಲವೆಡೆ ಚರಂಡಿಯನ್ನೇ ಮುಚ್ಚಿ ಹಾಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇಟೆಯ ಪ್ರದೇಶದಲ್ಲಿ ಮಳೆ ನೀರು ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿಯುವಂತಾಗಿದೆ.
ಉಲ್ಲಂಜೆ ಶಾಲೆ ಬಳಿಯ ರಸ್ತೆಯಲ್ಲೂ ಇದೇ ಸಮಸ್ಯೆಯಿದ್ದು, ಇನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ದೃಷ್ಟಿಯಲ್ಲಿ ಹೊಸ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿವೆ. ಚರಂಡಿ ಮಾಡಲು ಜಾಗದ ಸಮಸ್ಯೆ ಇದೆ. ಅರಸು ಕುಂಜಿರಾಯ ದೈವಸ್ಥಾನ ಹಾಗೂ ಕೊಡೆತ್ತೂರು ದೇವಸ್ಯ ರಸ್ತೆಯು ನಾದುರಸ್ತೆಯಲ್ಲಿದ್ದು, ರಸ್ತೆ ದುರಸ್ತಿ ಹಾಗೂ ಚರಂಡಿ ಕಾಮಗಾರಿ ಆಗಬೇಕಾಗಿದೆ.
ಹೂಳು ತೆಗೆಯದೆ ಸಮಸ್ಯೆ
ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಮ್ಮಡೆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಚರಂಡಿ ಇದ್ದ ಕಡೆಗಳಲ್ಲಿ ಹೂಳು ತೆಗೆಯದೆ ಸಮಸ್ಯೆ ಉದ್ಭವಿಸಿದೆ. ಉಲ್ಲಂಜೆಯ ಬ್ರಹ್ಮ ಸ್ಥಾನ ರಸ್ತೆ ಹಾಗೂ ಭಾಸ್ಕರ ಉಲ್ಲಂಜೆ ರಸ್ತೆಯ ಬದಿಯಲ್ಲೂ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಗೆ ಮನವಿ ನೀಡಿದರೂ ಪ್ರಯೋಜವಾಗಿಲ್ಲ ಎನ್ನುತ್ತಾರೆ ಸ್ಥಳೀಯರಾದ ಗಿರೀಶ್.
ಚರಂಡಿಯೇ ಇಲ್ಲ
ಉಲ್ಲಂಜೆ ಹಾಗೂ ಮುಖ್ಯ ರಸ್ತೆಯಲ್ಲಿ ಕೆಲವು ಪ್ರದೇಶ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದೆ. ಆದರೆ ಒಂದು ರಾಜ್ಯ ಹೆದ್ದಾರಿ, ಇನ್ನೊಂದು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದೆ. ಉಲ್ಲಂಜೆ ರಸ್ತೆಯಲ್ಲಿ ಕೆಲವು ಪ್ರದೇಶದಲ್ಲಿ ಚರಂಡಿ ಇಲ್ಲ. ಇನ್ನು ಕೆಲ ವೆಡೆ ಚರಂಡಿ ಮತ್ತು ರಸ್ತೆ ಒಂದೇ ಆಗಿದೆ.
ಆದ್ಯತೆಯ ಮೇರೆಗೆ ಕ್ರಮ
ಕೆಮ್ಮಡೆ, ನೇಕಾರ ಕಾಲನಿ, ಕೊಡೆತ್ತೂರು ಮುಕ್ಕ ಹಾಗೂ ತೀರ ಅಗತ್ಯವಿದ್ದ ಕಡೆಗಳಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಸಲಾಗಿದೆ. ಇನ್ನು ಉಳಿದಡೆ ಸಭೆಯ ಸದಸ್ಯರ ಆದ್ಯತೆಯ ಮೇರೆಗೆ ಜನರ ಸಮಸ್ಯೆಗೆ ಸ್ಪಂದಿಸಲಾಗುವುದು.
- ರಮ್ಯಾ ಕೆ.
ಪಿಡಿಒ, ಮೆನ್ನಬೆಟ್ಟು ಗ್ರಾಮ
ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ