ಮಳೆ ಅವಾಂತರ; ಕೃತಕ ನೆರೆಗೆ ಜನರು ಕಂಗಾಲು 


Team Udayavani, May 30, 2018, 10:35 AM IST

30-may-2.jpg

ಮಹಾನಗರ : ಕಡಲ ನಗರಿ ಮಂಗಳೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಗಳವಾರ ಕುಂಭದ್ರೋಣ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು, ಸಂಕಷ್ಟ ಎದುರಿಸುವಂತಾಯಿತು. ಬೆಳಗ್ಗಿನಿಂದ ಸಂಜೆವರೆಗೆ ನಗರಾದ್ಯಂತ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಎಲ್ಲ ಭಾಗದಲ್ಲೂ ಮನೆ, ಅಂಗಡಿ- ಮುಂಗಟ್ಟು, ಹೊಟೇಲ್‌ಗ‌ಳಿಗೆ ನುಗ್ಗಿದ ಮಳೆ ನೀರು ಮಂಗಳೂರಿನ ಸಮಗ್ರ ಚಿತ್ರಣವನ್ನೇ ಬದಲಿಸಿ ನಗರವಾಸಿಗಳು ಆತಂಕಕ್ಕೆ ಒಳಗಾಗುವ ಸನ್ನಿವೇಶ ನಿರ್ಮಾಣವಾಗಿತ್ತು.

ವಾಹನಗಳು ಓಡಾಡಬೇಕಾದ ರಸ್ತೆಗಳೆಲ್ಲ ತೋಡುಗಳಾಗಿ ಎಲ್ಲೆಡೆಯೂ ಮಳೆ ನೀರೇ ಹರಿದು ನಗರದಲ್ಲಿ ಊಹೆಗೂ ನಿಲುಕದಷ್ಟು ಅವಾಂತರ ಸೃಷ್ಟಿಸಿಯಾಗಿದೆ.

ನಗರದಲ್ಲಿ ಎಲ್ಲಿ ಏನು ಆಗಿದೆ ಎಂಬ ಬಗ್ಗೆ ನಗರವಾಸಿಗಳು ಯೋಚನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಕಾಲ ಬುಡಕ್ಕೆ, ಮನೆಯ ಅಂಗಳಕ್ಕೆ ನುಗ್ಗುತ್ತಿದ್ದ ನೀರನ್ನು ಹೇಗೆ ಖಾಲಿ ಮಾಡುವುದು ಎಂದೇ ಯೋಚಿಸಿ ಕಂಗಾಲಾಗಿ ಹೋಗಿದ್ದರು. ಸದಾ ವಾಹನಗಳಿಂದ ಗಿಜಿಗುಡುತ್ತಿದ್ದ ನಗರ ಮಂಗಳವಾರ ವಸ್ತುಶಃ ವರುಣನ ಅವಕೃಪೆಗೆ ತುತ್ತಾಗಿ ಇಡೀ ನಗರ ಜನ ಜೀವನ ಶೋಚನೀಯ ಸ್ಥಿತಿ ತಲುಪಿತ್ತು.

ತೋಡುಗಳು ತೆರೆದಿಟ್ಟ ನೈಜ ದರ್ಶನ
ನಗರದಲ್ಲಿ ಚರಂಡಿಯದ್ದೇ ದೊಡ್ಡ ಸಮಸ್ಯೆ. ಇದರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಚರ್ಚೆ, ಗಲಾಟೆ, ಪ್ರತಿಭಟನೆ ನಡೆದರೂ ಕೂಡ ಚರಂಡಿ ಸಮಸ್ಯೆ ಇತ್ಯರ್ಥವಾಗಲೇ ಇಲ್ಲ. ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣದಿಂದ ತೋಡಿನ ನೀರು ರೋಡ್‌ನ‌ಲ್ಲಿಯೇ ಹರಿಯುವಂತಹ ಪರಿಸ್ಥಿತಿ ಇದೆ. ಇದರ ನೈಜ ದರ್ಶನ ಹಾಗೂ ಅನುಭವವನ್ನು ಮಂಗಳವಾರದ ಮಳೆಯು ನಗರವಾಸಿಗಳಿಗೆ ನೀಡಿದೆ. ಬೆಳಗ್ಗಿನಿಂದ ಸುರಿದ ಮಳೆಗೆ ಮಂಗಳೂರಿನ ತೋಡುಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ, ನಗರದ ಬೀದಿ- ಓಣಿಗಳಲ್ಲಿಯೇ ಮಳೆ ನೀರು ಹರಿದು, ಮನೆ- ಅಂಗಡಿಗಳೆಲ್ಲವೂ ಜಲಾವೃತ ವಾದಂತಾಗಿದೆ. ಬಹುತೇಕ ಎಲ್ಲ ಕಡೆಗಳಿಂದ ನಗರವಾಸಿಗಳು ಮನೆಗೆ ನೀರು ನುಗ್ಗುತ್ತಿದೆ ಹಾಗೂ ಅದಕ್ಕೆ ಮುಖ್ಯ ಕಾರಣ ಮಳೆ ನೀರು ಹರಿಯಬೇಕಾದ ತೋಡುಗಳು ಸ್ವಚ್ಛಗೊಳ್ಳದೆ ಬ್ಲಾಕ್‌ ಆಗಿರುವುದು ಎಂಬ ಕಾರಣ ನೀಡುತ್ತಿದ್ದರು.

ಎಲ್ಲೆಲ್ಲೂ ಢವ-ಢವ !
ನಿರಂತರ ವರ್ಷಧಾರೆಯ ಪರಿಣಾಮ ಮನೆ- ಅಂಗಡಿಗಳಿಗೆ ನೀರು ನುಗ್ಗಿ ನಗರದ ಬಹುತೇಕ ಭಾಗದಲ್ಲಿ ಆತಂಕದ ಪರಿಸ್ಥಿತಿಯೇ ನಿರ್ಮಾಣವಾಯಿತು. ಎಲ್ಲೆಲ್ಲೂ ನೀರೇ ಕಾಣಿಸಿಕೊಂಡ ಕಾರಣದಿಂದ ಆತಂಕವೇ ಮಡುಗಟ್ಟಿತ್ತು. ಬೆಳಗ್ಗೆ ಸುರಿದ ಮಳೆ ಕಡಿಮೆಯಾಗುವ ಬದಲು ಇನ್ನಷ್ಟು ಅಧಿಕಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಘಳಿಗೆ- ಘಳಿಗೆಗೆ ಆತಂಕ ಹೆಚ್ಚುವಂತಾಯಿತು. ಮಧ್ಯಾಹ್ನದ ಅನಂತರವೂ ಮಳೆ ಬಿರುಸುಗೊಂಡ ಕಾರಣದಿಂದ ನಗರದ ಬಹುತೇಕ ಜನರಲ್ಲಿ ಢವ ಢವ ಹೆಚ್ಚಳವಾಗುವಂತಾಯಿತು.

ತಗ್ಗು ಪ್ರದೇಶ ಮುಳುಗಡೆ 
ನಗರ ವ್ಯಾಪ್ತಿಯ ಬಹುತೇಕ ತಗ್ಗು ಪ್ರದೇಶಗಳು ಮಳೆ ನೀರು ತುಂಬಿ ಸಮಸ್ಯೆ ಎದುರಿಸುವಂತಾಯಿತು. ಕುದ್ರೋಳಿ, ಅಳಕೆ, ಬಿಜೈ, ಕೊಟ್ಟಾರ, ಪಾಂಡೇಶ್ವರ ಸಹಿತ ಎಲ್ಲ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸಮಸ್ಯೆ ಸೃಷ್ಟಿಯಾಯಿತು.

ಸಂಚಾರ-ಸಾರಿಗೆ ಸ್ತಬ್ಧ 
ಸದಾ ವಾಹನಗಳಿಂದ ನಿತ್ಯ ಗಿಜಿಗುಡುತ್ತಿದ್ದ ನಗರದಲ್ಲಿ ಭಾರೀ ಮಳೆಯ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳಲ್ಲಿ ನಿಲ್ಲಿಸಿದ್ದ ಕಾರು, ಬೈಕು ಸಹಿತ ಹಲವು ವಾಹನಗಳು ನೀರನಲ್ಲಿ ತೇಲಾಡುವಂತಾಯಿತು. ಕೆಲವರು ವಾಹನ ಬಿಟ್ಟು ನಡೆದುಕೊಂಡು ಹೋದರು. ಮಳೆಯ ಕಾರಣದಿಂದ ನಗರದ ಬಹುತೇಕ ಭಾಗದಲ್ಲಿ ಸಂಚಾರ ದಟ್ಟಣೆ ಕಾಣಿಸಿತು. ಜ್ಯೋತಿ, ಸ್ಟೇಟ್‌ಬ್ಯಾಂಕ್‌, ಪಿವಿಎಸ್‌, ಹಂಪನಕಟ್ಟ ಸೇರಿದಂತೆ ಮುಖ್ಯಭಾಗದಲ್ಲೂ ಬ್ಲಾಕ್‌ ಎದುರಾಯಿತು. ಉಳಿದಂತೆ ಪಡೀಲು, ಕೊಟ್ಟಾರ ಸಹಿ ತ ಕೆಲವೆಡೆಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. 

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.