ಕುಡ್ಲದಲ್ಲಿ ‘ರಾಮಕೃಷ್ಣ ಗೋವಿಂದ’!
Team Udayavani, May 17, 2018, 3:53 PM IST
‘ನಮ್ಮ ಕುಡ್ಲ’ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಹೆಗ್ಗಳಿಕೆ ಪಡೆದುಕೊಂಡ ಅಶ್ವಿನಿ ಕೋಟ್ಯಾನ್(ಛಾಯಾ ಹರ್ಷ) ಈಗ 2ನೇ ತುಳು ಸಿನೆಮಾ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ‘ರಾಮಕೃಷ್ಣ ಗೋವಿಂದ’ ಎಂಬ ಟೈಟಲ್ನ ಕಾಮಿಡಿ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. ಪ್ರಕಾಶ್ ಧರ್ಮನಗರ, ಅನೂಪ್ ಸಾಗರ್ ಸಹಿತ ಇನ್ನೂ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.
ತನ್ನ ಮೊದಲ ಚಿತ್ರ ‘ನಮ್ಮ ಕುಡ್ಲ’ ಮಾಸ್ ಫಿಲಂ ಆಗಿತ್ತು. ಕಥೆ, ಚಿತ್ರಕಥೆ ಪ್ರಕಾಶ್ ಶೆಟ್ಟಿ ಧರ್ಮನಗರ ಅವರದ್ದು. ಚಕ್ರವರ್ತಿ ನಿರ್ಮಾಪಕರಾಗಿರುವ ಈ ಸಿನೆಮಾಕ್ಕೆ ನವೀನ್ ಸುನಾಗ್ ಕೆಮರಾ ವರ್ಕ್ ಮಾಡಲಿದ್ದಾರೆ. ಸೆಪ್ಟಂಬರ್ ವೇಳೆಗೆ ಈ ಚಿತ್ರ ಶೂಟಿಂಗ್ ಕಾಣುವ ನಿರೀಕ್ಷೆ ಇದೆ.