ರಾಮಕೃಷ್ಣ ಮಿಷನ್‌; 12 ಸ್ಥಳಗಳಲ್ಲಿ ಸ್ವಚ್ಛ ಮಂಗಳೂರು ಕಾರ್ಯಕ್ರಮ


Team Udayavani, Jun 5, 2017, 4:11 PM IST

0406mlr18-carstreet.jpg

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ಹಿನ್ನೆಲೆಯಲ್ಲಿ ರವಿವಾರ 12 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪಿವಿಎಸ್‌ ಸರ್ಕಲ್‌: ಟೀಂ ಪ್ರೇರಣಾ ಸದಸ್ಯರು ಪಿವಿಎಸ್‌ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನಗೈದರು. ಪ್ರೇರಣಾ ತಂಡದ ಹತ್ತನೇ ಕಾರ್ಯಕ್ರಮದ ಪ್ರಯುಕ್ತ ಸಮಾರೋಪ ಹಮ್ಮಿಕೊಳ್ಳ ಲಾಗಿತ್ತು. ರಾಮಕೃಷ್ಣ ಮಠದ ಅಧ್ಯಕ್ಷ ರಾದ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯ ವಹಿಸಿ ಮಾತನಾಡಿ ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿ ಪ್ರಮಾಣಪತ್ರಗಳನ್ನು ವಿತರಿಸಿದರು. ಪ್ರೇರಣಾ ತಂಡದ ಸಂಯೋಜಕ ಕೆ. ಸದಾನಂದ ಉಪಾ ಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಹತ್ತು ಅಭಿಯಾನಗಳು ನಡೆದು ಬಂದ ದಾರಿ ಹಾಗೂ ಸಹೃದಯ ಗೆಳೆಯರ ಸಹಕಾರವನ್ನು ಸ್ಮರಿಸಿಕೊಂಡರು. ಜೊತೆಗೆ ರಾಮಕೃಷ್ಣ ಮಠವು ಈ ಸದವಕಾಶವನ್ನು ದೊರಕಿಸಿಕೊಟ್ಟಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಶ್ರಮದಾನ ನಡೆಯಿತು. 

ದೇರಳಕಟ್ಟೆ: ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಮೆಡಿಕಲ್‌ ಅಕಾಡಮಿಯ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳಿಂದ ದೇರಳಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕ್ಷೇಮ ತಂಡದ ಕೊನೆಯ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿಗಳ ಆಶಯದಂತೆ ನಾವೆಲ್ಲರೂ ಸ್ವತ್ಛತಾ ಅಭಿಯಾನದಲ್ಲಿ ಕೈಜೋಡಿಸಿ ನಮ್ಮ ಪರಿಸರ, ನಮ ಊರು, ನಮ್ಮ ದೇಶ ಎಂಬ ಸಮಷ್ಟಿ ಭಾವನೆಯನ್ನು ತಾಳುವ ಅಗತ್ಯತೆಯ ಬಗ್ಗೆ ತಿಳಿಸಿದರು. ಈ ಅಭಿಯಾನಕ್ಕೆ ಸಹಕರಿಸಿದವರಿಗೆ ರಾಮಕೃಷ್ಣ ಮಠದ ಪರವಾಗಿ ಧನ್ಯವಾದ ಸಮರ್ಪಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಡಾ|  ರಮಾನಂದ ಶೆಟ್ಟಿ, ಡೀನ್‌ ಡಾ| ಸತೀಶ್‌ ಭಂಡಾರಿ, ಕುಲಸಚಿವ ಡಾ| ಜಯಪ್ರಕಾಶ ಶೆಟ್ಟಿ ಇನ್ನಿತರ ವೈದ್ಯರು ಸ್ವತ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಡಾ| ಸತೀಶ ರಾವ್‌ ಹಾಗೂ ಡಾ| ಶಶಿಕುಮಾರ ಕಾರ್ಯಕ್ರಮವನ್ನು ಸಂಯೋಜಿ ಸಿದರು. ವೈದ್ಯಕೀಯ ವಿದ್ಯಾರ್ಥಿಗಳು ದೇರಳಕಟ್ಟೆ ಮುಖ್ಯರಸ್ತೆ ಹಾಗೂ ತೋಡುಗಳನ್ನು ಸ್ವತ್ಛಗೊಳಿಸಿದರು. 
 
ಬೋಳಾರ: ಶ್ರàಅಂಬಾಮಹೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಬೋಳಾರದಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ರಾಮಚಂದ್ರ ದೇವಾಡಿಗ ಹಾಗೂ ಮನೋಹರ ಅಭಿಯಾನಕ್ಕೆ ಚಾಲನೆ ನೀಡಿದರು. ಮುಳಿಹಿತ್ಲುವಿನಿಂದ ಬೋಳಾರದವರೆಗಿನ ಮಾರ್ಗ ಹಾಗೂ ತೋಡುಗಳನ್ನು ಸ್ವಚ್ಛಗೊಳಿಸಿದರು. ಜೊತೆಗೆ ಕಸ ಬಿಸಾಡುತ್ತಿದ್ದ ನಿರುಪಯುಕ್ತ ಜಾಗೆಯನ್ನು ಸುಂದರವಾಗಿಸಿ, ಹೂವಿನ ಗಿಡಗಳನ್ನು ನೆಡಲಾಯಿತು. 

ಪಡೀಲ್‌: ಸ್ವಚ್ಛ ಪಡೀಲ್‌ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ ಪಡೀಲ್‌ ಜಂಕ್ಷಣನಿಂದ ರೈಲ್ವೆ ಅಂಡರ್‌ ಪಾಸ್‌ವರೆಗೂ ನಡೆಯಿತು. ಶ್ರಮದಾನದ ಬಳಿಕ ಸರಳ ಸಮಾರೋಪವನ್ನು ಆಯೋಜಿಸಲಾಗಿತ್ತು. ಸ್ವಾಮಿ ಜಿತಕಾಮಾನಂದಜಿ ಆಶೀರ್ವಚನ ನೀಡಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರಿಗೆ ಸರ್ಟಿಫಿಕೆಟ್‌ ನೀಡಿ ಅಭಿನಂದಿಸಿದರು. ಸತ್ಯನಾರಾಯಣ ಪ್ರಸ್ತಾವನೆಗೈದರು. ಮೋಹನ ಪಡೀಲ್‌, ರತ್ನಾಕರ ಅಮೀನ್‌ ಮುಖ್ಯ ಅತಿಥಿಗಳಾಗಿದ್ದರು. ಯೂಥ ಸೆಂಟರ್‌ ಪಡೀಲ್‌, ನವಜ್ಯೋತಿ ಮಹಿಳಾ ಮಂಡಳಿ, ಪ್ರಶಾಂತಿ ಮಹಿಳಾ ಮಂಡಳಿ, ಯೂಥ ಅಸೋಸಿಯೇಶನ್‌ ಕರ್ಮಾರ, ಚಾಲಕರು – ಮಾಲಕರು ಆಟೋ ರಿûಾ ಪಡೀಲ್‌ ಹಾಗೂ ಶಾಂತಿನಗರ ನಿವಾಸಿಗಳ ಒಕ್ಕೂಟ ಸೇರಿದಂತೆ ಒಟ್ಟು ಎಂಟು ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದಯ ಕೆ ಪಿ ಅಭಿಯಾನವನ್ನು ಯಶಸ್ವಿಯಾಗಿ ಸಂಘಟಿಸಿದರು. 

ಕೋಟೆಕಾರ್‌: ಸ್ವಚ್ಛ ಕೋಟೆಕಾರ್‌ ತಂಡದ ಸದಸ್ಯರು ಕೋಟೆಕಾರ ಜಂಕ್ಷನನಿಂದ ರೈಲ್ವೆ ಕ್ರಾಸಿಂಗ್‌ ವರೆಗಿನ ಪ್ರದೇಶವನ್ನು ಶುಚಿಗೊಳಿಸಿದರು. ಗುಣಶೀಲ ಅಭಿಯಾನಕ್ಕೆ ಚಾಲನೆ ನೀಡಿದರು. ಜಿತೇಂದ್ರ ಕಾರ್ಯ ಕ್ರಮವನ್ನು ಸಂಯೋಜನೆ ಮಾಡಿದರು. 

ಪಂಪವೆಲ್‌: ಸ್ವಚ್ಛ  ಗರೋಡಿ ತಂಡದಿಂದ ಪಂಪವೆಲ್‌ ಸರ್ಕಲ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಂಪವೆಲ್‌ ವೃತ್ತದಲ್ಲಿ ಅಲ್ಲಲ್ಲಿ ಬಿದ್ದ ಕಲ್ಲು ಹಾಗೂ ತ್ಯಾಜ್ಯ ತೆಗೆಯಲಾಯಿತು ಹಾಗೂ ಮಳೆಯ ನೀರು ತೋಡುಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ನವೀನ್‌, ಪ್ರಕಾಶ ಗರೋಡಿ ಕಾರ್ಯಕ್ರಮ ಸಂಯೋಜಿಸಿದರು.
 
ಅತ್ತಾವರ: ಸ್ವಚ್ಛ ಅತ್ತಾವರ ತಂಡ ಹಾಗೂ ಕೆಎಂಸಿ ಅಸ್ಪತ್ರೆ ಜಂಟಿ ಯಾಗಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿ ದ್ದವು. ಡಾ| ಲಕ್ಷ್ಮಣ ಪ್ರಭು ಹಾಗೂ ಡಾ| ಆನಂದ ವೇಣುಗೋಪಾಲ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೆಎಂಸಿ ಅಸ್ಪತ್ರೆ ಮುಂಭಾಗದಿಂದ ಮೊಸರು ಕುಡಿಕೆ ಕಟ್ಟೆಯ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಡಾ| ಸಂತೋಷ ರೈ, ಡಾ| ಪ್ರೇಮಲತಾ ಬಿ ಸೇರಿದಂತೆ ಹಲವು ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಸ್‌ ಎಂ ಕುಶೆ ಶಾಲಾ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದರು. ಅಕ್ಷಿತ ಅತ್ತಾವರ ಹಾಗೂ ಪೂರ್ಣಿಮಾ ಬಿ.ಕೆ. ಅಭಿಯಾನವನ್ನು ಸಂಯೋಜಿಸಿದರು. ಸ್ವಚ್ಛ  ಮಂಗಳೂರು ಅಭಿಯಾನಕ್ಕೆ ಎಂಆರ್‌ಪಿಎಲ್‌ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿವೆ.

ರಥಬೀದಿ: ಶ್ರೀಪರ್ತಗಾಳಿ ಗೋಕರ್ಣ ಮಠದ ಕಾರ್ಯಕರ್ತ ರಿಂದ ಕಾರಸ್ಟ್ರೀಟ್‌ನಲ್ಲಿ ಸ್ವತ್ಛತೆ ಜರುಗಿತು. ಅನಿಲ್‌ ನಾಯಕ್‌ ಹಾಗೂ ವಿಶ್ವನಾಥ ಪಡಿಯಾರ್‌ ಕಾರ್ಯ ಕ್ರಮಕ್ಕೆ$ಚಾಲನೆ ನೀಡಿದರು. ಈ ಬಾರಿ ಮುಖ್ಯವಾಗಿ ಮಳೆ ನೀರು ಹೋಗುವ ತೋಡುಗಳಲ್ಲಿದ್ದ ತ್ಯಾಜ್ಯವನ್ನು ಹೊರತೆಗೆದು ಮಳೆ ನೀರು ಸರಾಗವಾಗಿ ತೋಡಿನಲ್ಲಿ ಹೋಗುವಂತೆ ಮಾಡಲಾಯಿತು. ಕೆನರಾ ಸಿಬಿಎಸ್ಸಿ ವಿದ್ಯಾರ್ಥಿಗಳು ಸ್ವಚ್ಛತಾ ಕಕೈಂಕರ್ಯದಲ್ಲಿ ಸಹಕರಿಸಿದರು. ಕಮಲಾಕ್ಷ ಪೈ ಕಾರ್ಯಕ್ರಮ ಸಂಯೋಜಿಸಿದರು. 

ಕರಂಗಲ್ಪಾಡಿ: ಸುಬ್ರಮಣ್ಯ ಸಭಾದ ಕಾರ್ಯಕರ್ತರಿಂದ ಬಿಜೈ ಕರಂಗಲ್ಪಾಡಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಜಯಪ್ರಕಾಶ್‌ ಹಾಗೂ ಕೆ ಪ್ರಭಾಕರ್‌ ರಾವ್‌ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಕರಂಗಲ್ಪಾಡಿಯಲ್ಲಿ ನವೀಕರಿಸಲಾಗುತ್ತಿರುವ ಪಾರ್ಕಿನ ಹೊರಭಾಗದಲ್ಲಿ ಹಾಗೂ ಎದುರಿನ ಮಾರ್ಗಗಳನ್ನು ಸ್ವಚ್ಛ ಗೊಳಿಸಲಾಯಿತು. ಶ್ರಮದಾನದ ಬಳಿಕ ಸರಳ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀಕಾಂತ ರಾವ್‌ ಅಭಿಯಾನದಲ್ಲಿ ಭಾಗವಹಿಸಿದ ಸ್ವಯಂಸೇವಕರಿಗೆ ಧನ್ಯವಾದ ಅರ್ಪಿಸಿದರು. ಎಂ ಆರ್‌ ವಾಸುದೇವ ಉಪಸ್ಥಿತರಿದ್ದರು. 

ಎಕ್ಕೂರು: ಸ್ವಚ್ಛ ಎಕ್ಕೂರು ತಂಡದ ಸದಸ್ಯರು 10 ನೇ ಸ್ವತ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಿಶೋರ ಪೂಜಾರಿ ಹಾಗೂ ಅರುಣ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಯ್ಯಪ್ಪ ಸ್ವಾಮಿ ಮಂದಿರದ ಸುತ್ತಮುತ್ತಲಿನ ಪರಿಸರ ಹಾಗೂ ಹೆದ್ದಾರಿಯ ಬದಿಗಳಲ್ಲಿ ಕಸ ಹೆಕ್ಕಿ ಸ್ವಚ್ಛ ಗೊಳಿಸಲಾಯಿತು. ಕೊನೆಗೆ ಸ್ವಚ್ಛ ಎಕ್ಕೂರು ಈ ವರ್ಷದಲ್ಲಿ 10 ಕಾರ್ಯಕ್ರಮಗಳನ್ನು ಪೂರೈಸಿದ್ದರಿಂದ ಸಮಾರೋಪ ಸಮಾರಂಭವನ್ನು ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಆಯೋಜಿಸಲಾಗಿತ್ತು. ಸ್ವಾಮಿ ಏಕಗಮ್ಯಾನಂದಜಿ ಭಾಗವಹಿಸಿದವರಿಗೆ ಸರ್ಟಿಫಿಕೆಟ್‌ ನೀಡಿದರು. ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದಕ್ಕಾಗಿ ಅಭಿನಂದನೆ ತಿಳಿಸಿದರು. ಯಶೋಧರ ಚೌಟ, ಕೇಶವ ಸಾಲಿಯಾನ, ಭರತ್‌ ಶೆಟ್ಟಿ, ಹಾಗೂ ತೇಜಸ್ವಿನಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು. ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರದೊಂದಿಗೆ ಶಾಲಾಬ್ಯಾಗ್‌ ನೀಡಲಾಯಿತು. ಪ್ರಶಾಂತ ಎಕ್ಕೂರು ಹಾಗೂ ಸತೀಶ್‌ ಕೆ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. 

ಹಂಪನಕಟ್ಟೆ: ಹಿಂದೂ ವಾರಿಯರ್ಸ್‌ ತಂಡದ ಸದಸ್ಯರು ಮಿಲಾಗ್ರೀಸ್‌ ವೃತ್ತದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸಿದರು. ಸತೀಶ್‌ ಹಾಗೂ ಸುಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛ ಗೊಳಿಸುವುದರ ಜೊತೆಗೆ ಬೀದಿ ದೀಪದ ಕಂಬಕ್ಕೆ ಕಟ್ಟಿದ್ದ ಬ್ಯಾನರ್‌ ಹಾಗೂ ಅಲ್ಲಿದ್ದ ಹಗ್ಗಗಳನ್ನು ಏಣಿ ಸಹಾಯದಿಂದ ತೆಗೆಯಲಾಯಿತು. ತುಳು ಸಿನೆಮಾ ನಟ ಮಂಜು ರೈ ಹಾಗೂ ತುಳು ಚಿತ್ರ ನಿರ್ಮಾಪಕ ಹರೀಶ್‌ ರಾವ್‌ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕಾವೂರು: ಸ್ವಚ್ಛ  ಕಾವೂರು ತಂಡದ 10 ನೇ ಕಾರ್ಯಕ್ರಮ ಕಾವೂರು ಕಟ್ಟೆಯ ಸುತ್ತಮುತ್ತಲಿನ ಪರಿಸರದಲ್ಲಿ ಜರುಗಿತು. ಸದಾನಂದ ರೈ ಹಾಗೂ ಭವಾನಿ ಶಂಕರ ರೈ ಅಭಿಯಾನಕ್ಕೆ ಚಾಲನೆ ನೀಡಿದರು. ಕಾಂಕ್ರೀಟ್‌ ರಸ್ತೆಗಳನ್ನು ಸ್ವಚ್ಛ  ಮಾಡಿ, ಬ್ಯಾನರ್‌ ಪೋಸ್ಟರ್‌ ತೆಗೆಯಲಾಯಿತು. ಶ್ರಮದಾನದ ಬಳಿಕ ಸರ್ಟಿಫಿಕೆಟ್‌ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಾಮಿ ಏಕಗಮ್ಯಾನಂದಜಿ ಹಾಗೂ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ ಸ್ವಚ್ಛ  ಕಾವೂರು ತಂಡದ ಕಾರ್ಯವನ್ನು ಪ್ರಂಶಸಿಸಿದರು. ಸ್ವಚ್ಚ ಕಾವೂರು ಸಂಯೊಜಕ ಸುಧಾಕರ್‌ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು. ಪುಟ್ಟರಾಜು ಹಾಗೂ ಗೋವಿಂದ ಭೋವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಚಿನ್‌ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.