ಸೆನಗಲ್‌ನಿಂದ ಐವರಿ ಕೋಸ್ಟ್‌ಗೆ ಪರಾರಿಯಾಗಲಿದ್ದ ರವಿ ಪೂಜಾರಿ !


Team Udayavani, Feb 8, 2019, 12:30 AM IST

0702mlr32-ravi-poojary.jpg

ಮಂಗಳೂರು: ಆಫ್ರಿಕದ ಸೆನಗಲ್‌ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ನಾಲ್ಕು ತಿಂಗಳ ಹಿಂದೆಯಷ್ಟೇ ಆ ದೇಶಕ್ಕೆ ಬಂದು ತಾತ್ಕಾಲಿಕವಾಗಿ ನೆಲೆ ನಿಂತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಒಂದುವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಹೆಣೆದಿದ್ದ ಬಲೆಗೆ ಜ. 21ರಂದು ಬೀಳದೆ ಹೋಗುತ್ತಿದ್ದರೆ ಆತ 15 ದಿನದೊಳಗೆ ಅಲ್ಲಿಂದ ಸಮೀಪದ ಐವರಿ ಕೋಸ್ಟ್‌ಗೆ ಹೋಗಿ ಶಾಶ್ವತವಾಗಿ ಭೂಗತ ನಾಗುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಸದ್ಯದಲ್ಲೇ ಆತ ಐವರಿ ಕೋಸ್ಟ್‌ಗೆ ಸ್ಥಳಾಂತರ ಆಗಲಿದ್ದಾನೆ ಎಂಬ ಸುಳಿವು ಪಡೆದೇ ಎರಡು ತಿಂಗಳ ಹಿಂದೆ ಮಂಗಳೂರು ಮೂಲದ ಮತ್ತೂಬ್ಬ ಭೂಗತ ಪಾತಕಿ ವಿಕ್ಕಿ ಶೆಟ್ಟಿ, ರವಿ ಪೂಜಾರಿಯನ್ನು ಮುಗಿಸುವುದಕ್ಕೆ ಸ್ಕೆಚ್‌ ಹಾಕಿದ್ದ ಎನ್ನಲಾಗಿದೆ.

ಹೊಟೇಲ್‌ಗ‌ಳಲ್ಲಿ ಹೂಡಿಕೆ
ರವಿ ಪೂಜಾರಿ ಭಾರತದ ಹಲವು ಕಡೆಗಳಲ್ಲಿ ಕೊಲೆ ಬೆದರಿಕೆ ಕರೆಗಳನ್ನು ಮಾಡಿ ವಸೂಲಾದ ಕೋಟಿಗಟ್ಟಲೆ ರೂ. ಹಫ್ತಾ ಹಣವನ್ನು ಬರ್ಕಿನೊ ಫಾಸೊ, ಸೆನಗಲ್‌ನ ಡಕಾರ್‌, ಐವರಿ ಕೋಸ್ಟ್‌, ಗಹನಾ ಮೊದಲಾದ ಸಣ್ಣ ಸಣ್ಣ ದೇಶಗಳಲ್ಲಿ ಹೊಟೇಲ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದ. ಹೆಚ್ಚಿನ ಉದ್ಯಮಗಳಲ್ಲಿ ಭಾರತೀಯ ಮೂಲದ ಅನಿಲ್‌ ಅಗರ್‌ವಾಲ್‌ ಪಾಲುದಾರರು. ರವಿ ಪೂಜಾರಿ ಪತ್ನಿ ಪದ್ಮಾ ಕೂಡ ಆತನ ಉದ್ಯಮದಲ್ಲಿ ಕೈಜೋಡಿಸಿದ್ದಳು. ಆಕೆ ಕೂಡ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದು, ಪಶ್ಚಿಮ ಆಫ್ರಿಕಾದ ದೇಶವೊಂದರಲ್ಲಿ ತಲೆಮರೆಸಿಕೊಂಡಿದ್ದಾಳೆ.

ಮುಳುವಾಯಿತು ಕ್ರಿಕೆಟ್‌  ಪ್ರಾಯೋಜಕತ್ವ
ಸೆನಗಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲವರು ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯದಲ್ಲಿ ಭಾಗವಹಿಸಿದ್ದೇ ರವಿ ಪೂಜಾರಿಗೆ ಮುಳುವಾಗಿದೆ. ಹಲವು ವರ್ಷಗಳಿಂದ ಬರ್ಕಿನೊ ಫಾಸೊ ಹಾಗೂ ಐವರಿ ಕೋಸ್ಟ್‌ಗಳಲ್ಲಿಯೇ ಹೆಚ್ಚಾಗಿ ನೆಲೆಸುತ್ತಿದ್ದ ಈತ ಬರ್ಕಿನೊ ಫಾಸೊದಲ್ಲಿ “ನಮಸ್ತೆ ಇಂಡಿಯಾ’ ಹಾಗೂ ಸೆನಗಲ್‌ನಲ್ಲಿ “ಮಹಾರಾಜ’ ಎಂಬ ಎರಡು ಹೊಟೇಲ್‌ಗ‌ಳನ್ನು ಭಾರತೀಯ ಮೂಲದ ಅನಿಲ್‌ ಅಗರ್‌ವಾಲ್‌ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ. ಆತ ಸೆನಗಲ್‌ನಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ 3 ತಿಂಗಳ ಹಿಂದೆಯಷ್ಟೇ ಗುಪ್ತಚರ ಅಧಿಕಾರಿಗಳಿಗೆ ಲಭಿಸಿತ್ತು. ಸೂಕ್ತ ಸುಳಿವು ಕೊಟ್ಟದ್ದು, ಆತನ ಜತೆಗೆ ಓಡಾಡುತ್ತಿದ್ದವರು ಐದಾರು ತಿಂಗಳ ಹಿಂದೆ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯ.

ಪಂದ್ಯಾಟದ ಪ್ರಾಯೋಜಕತ್ವವನ್ನು ರವಿ ಪೂಜಾರಿ ಮತ್ತು ಬೆಂಬಲಿಗರು ವಹಿಸಿದ್ದರು. ಪ್ರತ್ಯೇಕ ಟೀ-ಶರ್ಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ “ಇಂಡಿಯನ್‌ ಸೆನಗಲ್‌ ಕ್ರಿಕೆಟ್‌ ಕ್ಲಬ್‌’ ಎಂದು ಬರೆಯಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸುವುದಕ್ಕೆ ಖುದ್ದು ರವಿ ಪೂಜಾರಿಯೇ ಬಂದಿದ್ದು, ಆ ಸಂದರ್ಭ ಭಾವಚಿತ್ರಗಳು ಗುಪ್ತಚರ ಅಧಿಕಾರಿಗಳಿಗೆ ಲಭಿಸಿದ್ದವು. ಆತ ಅಲ್ಲೇ ಇರುವುದು ದೃಢವಾದ್ದರಿಂದ ಅಧಿಕಾರಿಗಳು 3 ತಿಂಗಳಿನಿಂದ ಆತನ ಬೆನ್ನು ಬಿದ್ದಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.