ಲೋಪ ನೇರ್ಪುಗೊಳಿಸಲು ಆಯ್ಕೆ ಸಿದ್ಧ

ಅಸಮರ್ಪಕ ಖಾತೆ; 22,687 ಮಂದಿಯ ಸಾಲಮನ್ನಾ ಹಣ ವಾಪಸ್‌

Team Udayavani, Oct 22, 2019, 5:23 AM IST

e-30

ಸುಳ್ಯ: ಸಾಲ ಮನ್ನಾ ಹಣ ಬಿಡುಗಡೆಗೊಂಡು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಮಾಹಿತಿ ಸೇರ್ಪಡೆಗೊಳಿಸಲು ಸಾಲಮನ್ನಾ ಸಂಬಂಧಿತ ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆಯ್ಕೆ ಮಂಗಳವಾರದಿಂದ ತೆರೆದುಕೊಳ್ಳಲಿದೆ. ಉಭಯ ಜಿಲ್ಲೆಯಲ್ಲಿ ಸಾಲಮನ್ನಾ ಹಣ ಬಿಡುಗಡೆಗೊಂಡರೂ ಉಳಿತಾಯ ಖಾತೆಗೆ ಬಾರದೆ 22,687 ಫಲಾನುಭವಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಈಗ ಖಾತೆ ಸರಿಪಡಿಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಒಂದು ವಾರ ನಿಗದಿ
ಆಯಾ ಸಹಕಾರ ಬ್ಯಾಂಕ್‌ ವ್ಯಾಪ್ತಿಯಲ್ಲಿನ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅ.22ರಿಂದ ಒಂದು ವಾರ ಖಾತೆಗೆ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಆನ್‌ಲೈನ್‌ ಆಪ್ಶನ್‌ ತೆರೆದು ಸಾಲಮನ್ನಾ ಹಣ ಜಮೆ ಆಗಬೇಕಿರುವ ಉಳಿತಾಯ ಖಾತೆಗೆ ಸಮರ್ಪಕ ಮಾಹಿತಿ ಸೇರಿಸಲಾಗುತ್ತದೆ. ಫಲಾನುಭವಿಗಳಿಂದ ದಾಖಲೆಗಳನ್ನು ಆಯಾ ಸಹಕಾರ ಸಂಘಗಳು ಈಗಾಗಲೇ ಕ್ರೋಡೀಕರಿಸಿವೆ. ಹೀಗಾಗಿ ಆಯಾ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳೇ ದಾಖಲಾತಿ ನಡೆಸಲಿದ್ದು, ಫಲಾನುಭವಿಗಳು ಬ್ಯಾಂಕ್‌ಗೆ ಬರಬೇಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.

52,472 ಮಂದಿಗೆ ಮನ್ನಾ ಹಣ ಪಾವತಿ
ಉಭಯ ಜಿಲ್ಲೆಗಳಲ್ಲಿ 97,750 ಮಂದಿ ಫಲಾನುಭವಿಗಳ 705.10 ಕೋ.ರೂ. ಮನ್ನಾ ಹಣ ಪಾವತಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ 80,768 ಮಂದಿಯ 597.1 ಕೋ.ರೂ. ಪಾವತಿಗೆ ಮಂಜೂರಾತಿ ಸಿಕ್ಕಿತ್ತು. 75,159 ಮಂದಿಯ 541.83 ಕೋ.ರೂ. ಬಿಡುಗಡೆಗೊಂಡಿತ್ತು. ಮಂಜೂರಾತಿ (ಗ್ರೀನ್‌ ಲಿಸ್ಟ್‌) ಪೈಕಿ 52,472 ಫಲಾನುಭವಿಗಳ ಮನ್ನಾ ಹಣ ಜಮೆ ಆಗಿದೆ ಎನ್ನುತ್ತದೆ ಡಿಸಿಸಿ ಬ್ಯಾಂಕ್‌ ಅಂಕಿಅಂಶ.

3 ಹಂತಗಳಲ್ಲಿ 39,278 ಅರ್ಜಿ ತಿರಸ್ಕಾರ
ಆಯಾ ಸಹಕಾರ ಸಂಘದಿಂದ ಸಾಲಮನ್ನಾಕ್ಕೆ ಅರ್ಹರನ್ನು ಪಟ್ಟಿ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಮಂಜೂರಾತಿ ದೊರೆತು, ಅನಂತರ ಹಣ ಬಿಡುಗಡೆ ಆಗುವುದು ಪ್ರಕ್ರಿಯೆ. ಉಭಯ ಜಿಲ್ಲೆಗಳ 97,750 ಫಲಾನುಭವಿಗಳ ಬೇಡಿಕೆ ಪೈಕಿ ಮಂಜೂರಾತಿ ಹಂತದಲ್ಲಿ 10,982 ಮಂದಿಯನ್ನು ಕೈ ಬಿಡಲಾಯಿತು.

ಮಂಜೂರಾತಿ ಸಿಕ್ಕಿ ಹಣ ಬಿಡುಗಡೆ ಹಂತ
ದಲ್ಲಿ 5,609 ಮಂದಿ ಹೊರಗುಳಿದರು. ಫಲಾನುಭವಿ ಖಾತೆಗೆ ಜಮೆ ಆಗುವ ಹಂತದಲ್ಲಿ 22,687 ಮಂದಿಯ ಹಣ ಹಿಂದೆ ಹೋಯಿತು. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ಒಟ್ಟು 39,278 ಮಂದಿ ಫಲಾನುಭವಿಗಳಿಗೆ ವಿವಿಧ ಕಾರಣಕ್ಕೆ ವಿವಿಧ ಹಂತದಲ್ಲಿ ಸಾಲ ಮನ್ನಾ ಸೌಲಭ್ಯ ಸಿಗಲಿಲ್ಲ.

ಮಂಜೂರಾದವರಿಗೆ ಮನ್ನಾ ಸೌಲಭ್ಯ ಸಿಗಲಿದೆ
ಈಗಾಗಲೇ ಹಣ ಬಿಡುಗಡೆಗೊಂಡು ತಾಂತ್ರಿಕ ಕಾರಣದಿಂದ ವಾಪಸಾತಿ ಆಗಿರುವ 22,687 ಮಂದಿಯ ಹಣ ಉಳಿತಾಯ ಖಾತೆ ದಾಖಲೆ ಸಮರ್ಪಕ ನಮೂದು ಆದ ಕೆಲವೇ ದಿನಗಳಲ್ಲಿ ಮರು ಪಾವತಿ ಆಗಲಿದೆ. ಮಂಜೂರಾತಿ ಸಿಕ್ಕಿ ಹಣ ಬಿಡುಗಡೆ ಹಂತದಲ್ಲಿ ತಿರಸ್ಕೃತಗೊಂಡ 5,609 ಮಂದಿಯ ಉಳಿತಾಯ ಖಾತೆ ಸಹಿತ ಇನ್ನಿತರ ದಾಖಲೆ ಸರಿಪಡಿಸಿದ ಬಳಿಕ ಹಂತ ಹಂತವಾಗಿ ದೊರೆಯಬಹುದು. ಆದರೆ ಬೇಡಿಕೆ ಸಲ್ಲಿಕೆಯಾಗಿ ಮಂಜೂರಾತಿ ಹಂತದಲ್ಲಿ ತಿರಸ್ಕೃತವಾದವರಿಗೆ ಸೌಲಭ್ಯ ಸಿಗುವುದು ಅನುಮಾನ. ಸಾಲ ಮನ್ನಾ ಘೋಷಣೆ ಅನಂತರ ಫಲಾನುಭವಿಗಳು ಪಡಿತರ ಚೀಟಿ ತಿದ್ದುಪಡಿ ಮಾಡಿರುವುದು ಕೂಡ ಸೌಲಭ್ಯ ದೊರೆಯಲು ಅಡ್ಡಿಯಾಗಿದೆ.

161.75 ಕೋ.ರೂ. ಹಣ ವಾಪಸ್‌!
ಅಪೂರ್ಣ ಉಳಿತಾಯ ಖಾತೆ ಕಾರಣದಿಂದ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 22,687 ಫಲಾನುಭವಿಗಳ 161.75 ಕೋ.ರೂ. ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್‌ ಬ್ಯಾಂಕ್‌ಗೆ ವಾಪಸಾ ಗಿದೆ. ದ.ಕ. ಜಿಲ್ಲೆಯಲ್ಲಿ 17,744 ಮಂದಿಯ 128.22 ಕೋ.ರೂ., ಉಡುಪಿ ಜಿಲ್ಲೆಯ 4,934 ಮಂದಿಯ 33.53 ಕೋ.ರೂ. ಹಣ ವಾಪಸಾಗಿದೆ.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಳಿ ತಾಯ ಖಾತೆ ಸಮರ್ಪಕ ವಾಗಿಲ್ಲದೆ ಹಣ ವಾಪಸ್‌ ಆಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಇರುವ ಮಾಹಿತಿಯನ್ನು ಸೇರಿಸಲು ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆಪ್ಶನ್‌ ಮಂಗಳವಾರದಿಂದ ಕಾರ್ಯಾರಂಭಿಸಲಿದೆ. ಆಯಾ ಸಹಕಾರ ಸಂಸ್ಥೆ ವ್ಯಾಪ್ತಿಯ ಡಿಸಿಸಿ ಬ್ಯಾಂಕ್‌ ಶಾಖೆಗಳಲ್ಲಿ ಅಪ್‌ಡೇಟ್‌ ಕಾರ್ಯ ನಡೆಯಲಿದೆ.
– ಸಂತೋಷ್‌ ಕುಮಾರ್‌ ಮರಕ್ಕಡ, ಮಾರಾಟಾಧಿಕಾರಿ, ಡಿಸಿಸಿ ಬ್ಯಾಂಕ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.