ಕೋಣಗಳ ಸಾಮರ್ಥ್ಯ ಶ್ರುತಪಡಿಸಿದ ಓಟಗಾರರ ದಾಖಲೆ !


Team Udayavani, Feb 21, 2020, 7:00 AM IST

chitra-41

ಸಾಂದರ್ಭಿಕ ಚಿತ್ರ

 ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಲ್ಲ ಎಂಬುದು ಹುಸಿ
 ಕಂಬಳ ನಿಷೇಧ ಆಗ್ರಹದಲ್ಲಿ ಪ್ರಾಣಿ ದಯಾ ಸಂಘಟನೆಗಳ ವಾದ

ಮಂಗಳೂರು: ಕಂಬಳ ಓಟಗಾರರನ್ನು ಉಸೇನ್‌ ಬೋಲ್ಟ್ ಜತೆಗೆ ಹೋಲಿಸುವುದು ತಪ್ಪೋ ಸರಿಯೋ ಎಂಬುದಕ್ಕಿಂತಲೂ ಈ ವಿದ್ಯಮಾನವು ಕಂಬಳದ ಕೋಣಗಳ ದೇಹ ರಚನೆ ಓಟಕ್ಕೆ ಪೂರಕ ಎಂಬುದನ್ನು ಸಾಬೀತುಪಡಿಸಿದೆ. ಕಂಬಳ ನಿಷೇಧಿಸಿ ಎನ್ನು ತ್ತಿರುವವರು ಕೋರ್ಟಿನಲ್ಲಿ ಮಂಡಿಸಿ ರುವ 2 ಪ್ರಬಲ ಅಂಶಗಳೆಂದರೆ, ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಲ್ಲ ಮತ್ತು ಹಿಂಸೆ ನೀಡಿ ಓಡಿಸಲಾಗುತ್ತಿದೆ ಎಂಬುದು. ಕಂಬಳ ಓಟಗಾರರಾದ ಶ್ರೀನಿವಾಸ ಗೌಡ ಮತ್ತು ನಿಶಾಂತ್‌ ಶೆಟ್ಟಿ ಅವರ ಸಾಧನೆ ಪ್ರಾಣಿ ದಯಾ ಸಂಘಟನೆಗಳ ವಾದವನ್ನು ಸುಳ್ಳಾಗಿಸಿದೆ.

ಕೋಣಗಳೇ ಹೀರೋಗಳು
ಕಂಬಳದಲ್ಲಿ ಕೋಣಗಳು ಹೀರೋಗಳು. ಓಟಗಾರ ಪೂರಕ. ಈ ಕೋಣಗಳು ಅತ್ಯಂತ ಸೂಕ್ಷ್ಮ ಮತಿಗಳಾಗಿದ್ದು, ಮಂಜೊಟ್ಟಿ ತಲುಪಿದಾಕ್ಷಣ ಓಟ ನಿಲ್ಲಿಸುತ್ತವೆ. ಓಡಿಸುತ್ತಿರುವವರ ಸೂಚನೆ ಗಳನ್ನು ಗಮನಿಸಿ ಅವುಗಳಿಗೆ ಹೊಂದಿಕೊಳ್ಳುತ್ತವೆ ಮತ್ತು ಮಂಜೊಟ್ಟಿಯಲ್ಲಿ ತಮ್ಮವರು ಕರೆಯುವ ಸ್ವರ ಮತ್ತು ಕಹಳೆಯ ಧ್ವನಿಯನ್ನು ಗ್ರಹಿಸಿ ವೇಗವನ್ನು ಹೆಚ್ಚಿಸುತ್ತವೆ. ಇದಕ್ಕೆ ಪೂರಕವಾಗಿ ಓಟಗಾರನೂ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಓಟಗಾರ ಕರೆಯಲ್ಲಿ ಬಿದ್ದ ಘಟನೆಗಳಿವೆ.

ಓಟಗಾರರ ಚಾಕಚಕ್ಯತೆ
ಕೋಣಗಳ ವೇಗವನ್ನು ಕಾಯ್ದುಕೊಳ್ಳುವ ಮತ್ತು ಕುಂಠಿತಗೊಂಡರೆ ಸ್ವರ ಮತ್ತು ಬೆತ್ತದ ಮೂಲಕ ಎಚ್ಚರಿಸುವ ಕಾರ್ಯವನ್ನು ಓಟಗಾರರು ಮಾಡುತ್ತಾರೆ. ಕೋಣಗಳು ಓಟಗಾರರಿಗಿಂತ ಮುಂಚಿತವಾಗಿ ಮಂಜೊಟ್ಟಿ (ಗುರಿ) ತಲುಪುತ್ತವೆ ಮತ್ತು ಆ ವೇಳೆ ಓಟಗಾರ 4ರಿಂದ 5 ಅಡಿ ಹಿಂದಿರುತ್ತಾರೆ ಎಂಬುದು ಗಮನಿಸಬೇಕಾದ ಅಂಶ. ಕೋಣಗಳ ವೇಗ ಕಂಬಳದಿಂದ ಕಂಬಳಕ್ಕೆ ಬದಲಾಗುತ್ತದೆ; ಓಟಗಾರರ ವೇಗವೂ ಬದಲಾಗುತ್ತದೆ. ಆದುದರಿಂದ ವೇಗವನ್ನು ಸಾರ್ವತ್ರಿಕವಾಗಿ ಲೆಕ್ಕ ಹಾಕಲಾಗದು ಎನ್ನುತ್ತಾರೆ ಕಂಬಳ ಪರಿಣತರು.

ವೇಗದ ಓಟಗಾರರು
ಈ ಸಾಲಿನ ಕಂಬಳದಲ್ಲಿ ವೇಗದ ಓಟಗಾರರ ಪೈಕಿ ಶ್ರೀನಿವಾಸ ಗೌಡ, ನಿಶಾಂತ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಹೊಕ್ಕಾಡಿಗೋಳಿ, ಪ್ರವೀಣ್‌ ಕೋಟ್ಯಾನ್‌ ಮತ್ತು ಆನಂದ ಅವರ ಹೆಸರು ಕೇಳಿಬರುತ್ತಿದೆ. ಶ್ರೀನಿವಾಸ ಗೌಡ ಮತ್ತು ನಿಶಾಂತ್‌ ಶೆಟ್ಟಿ ದಾಖಲೆ ಬರೆದಿದ್ದಾರೆ.

ಕಂಬಳ ಓಟಗಾರರ ಸಾಧನೆಯ ವ್ಯಾಪಕ ಪ್ರಚಾರವು ಕೋಣಗಳ ಓಟದ ಬಗ್ಗೆ ಮಂಡಿಸುತ್ತಾ ಬಂದಿರುವ ವಾದಗಳ ನಿಜಾಂಶವನ್ನು ಸಾಬೀತು ಪಡಿಸಿದೆ. ಕೋಣಗಳ ಓಟವೇ ಇಲ್ಲಿ ನಿರ್ಣಾಯಕ. ಇದು ಕಂಬಳದ ಕೋಣಗಳ ದೇಹ ರಚನೆ ಓಟಕ್ಕೆ ಪೂರಕವಾಗಿಲ್ಲ ಎಂಬ ವಾದಕ್ಕೆ ಸಮರ್ಥ ಉತ್ತರ ನೀಡಿದೆ.
– ಬಾರ್ಕೂರು ಶಾಂತಾರಾಮ ಶೆಟ್ಟಿ, ಕೋಣಗಳ ಯಜಮಾನರು, ಕಂಬಳ ಸಮಿತಿ ನಿಕಟಪೂರ್ವ ಅಧ್ಯಕ್ಷ

ಕಂಬಳದ ಒಟ್ಟು ಬೆಳವಣಿಗೆ ಮತ್ತು ತಪ್ಪು ಅಭಿಪ್ರಾಯಗಳನ್ನು ನಿವಾರಿಸಲು ಪ್ರಸ್ತುತ ಬೆಳವಣಿಗೆ ಸಹಕಾರಿ. ಪ್ರಸ್ತುತ ವೇಗದ ಒಟಗಾರರು ಎಂದು ಪರಿಗಣಿತರಾಗಿರುವ ಐವರ ಜತೆ ಶುಕ್ರವಾರ ಚರ್ಚೆ ನಡೆಸಲಿದ್ದೇನೆ. ಅವರು ರಾಷ್ಟ್ರ ಮಟ್ಟದ ತರಬೇತಿಗೆ ತೆರಳುವ ಮುನ್ನ ಪೂರ್ವ ತಯಾರಿ ಅಗತ್ಯವಿರುತ್ತದೆ. ಮೂಡುಬಿದಿರೆಯಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಇದ್ದು, ಅಲ್ಲಿ ಓಡಿ ಪೂರ್ವಭಾವಿ ತರಬೇತಿ ಪಡೆಯಬೇಕು. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
– ಗುಣಪಾಲ ಕಡಂಬ, ಸಂಚಾಲಕರು, ಕಂಬಳ ಅಕಾಡೆಮಿ

– ಕೇಶವ ಕುಂದರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.