ಮುಂಬಯಿ ಹೈಕೋರ್ಟ್ಗೆ ಹಾಜರಾದ ರೇಶ್ಮಾ; ಹೆತ್ತವರ ಜತೆ ತೆರಳಲು ಅನುಮತಿ
Team Udayavani, Jan 23, 2018, 10:49 AM IST
ಮಂಗಳೂರು: ಅಪಹರಣ ಅರ್ಜಿ ಸಂಬಂಧಿಸಿ ಕಾನೂನು ವಿದ್ಯಾರ್ಥಿನಿ, ಕಾಸರಗೋಡಿನ ರೇಶ್ಮಾ ಸೋಮವಾರ ಮುಂಬಯಿ ಹೈಕೋರ್ಟ್ಗೆ ಹಾಜರಾದರು. ತನ್ನ ಪತ್ನಿ ರೇಶ್ಮಾಳನ್ನು ಅಪಹರಿಸಲಾಗಿದೆ ಎಂದು ಮುಂಬಯಿ ಹೈಕೋರ್ಟಿನಲ್ಲಿ ಮಹಮ್ಮದ್ ಇಕ್ಬಾಲ್ ಚೌಧುರಿ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಂಬಂಧ ಪಟ್ಟಂತೆ ರೇಶ್ಮಾ ಸೋಮವಾರ ಮುಂಬಯಿ ಹೈಕೋರ್ಟ್ಗೆ ಹಾಜ ರಾಗಿ, ತನ್ನನ್ನು ಯಾರೂ ಅಪಹರಿಸಿಲ್ಲ. ತಾನು ಸ್ವಇಚ್ಛೆಯಿಂದ ತನ್ನ ಊರಿಗೆ ತೆರಳಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು. ಅದನ್ನು ಪರಿಗಣಿಸಿ ಆಕೆಯ ಊರಿಗೆ ಮರಳಲು ನ್ಯಾಯಾಲಯ ಅನುಮತಿ ನೀಡಿತು.
ರೇಶ್ಮಾ ಸೋಮವಾರ ನ್ಯಾಯ ವಾದಿಗಳ ಮೂಲಕ ಮಧ್ಯಾಹ್ನ 2.45ಕ್ಕೆ ಹೈಕೋರ್ಟ್ಗೆ ಹಾಜರಾದರು. ಮಹಮ್ಮದ್ ಇಕ್ಬಾಲ್ ಕೂಡ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯವು ರೇಶ್ಮಾ ಅವರ ಹೇಳಿಕೆಯನ್ನು ದಾಖಲಿಸಿ ಸಹೋದರಿ ಜತೆ ಹುಟ್ಟೂರಿಗೆ ಹೋಗಲು ಅನು ಮತಿ ನೀಡಿತು. ಮಹಮ್ಮದ್ ಇಕ್ಬಾಲ್ ರೇಶ್ಮಾ ಹೆತ್ತವರ ವಿರುದ್ದ ದಾಖಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ತನಿಖೆಗೆ ತಡೆಯಾಜ್ಞೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ