ದಶಕಗಳಿಂದ ಹೊಂಡ-ಗುಂಡಿಗಳದೇ ವ್ಯಥೆ!


Team Udayavani, Aug 13, 2018, 12:11 PM IST

13-agust-6.jpg

ಸುಳ್ಯ : ಇಲ್ಲಿ ದಿನವಿಡೀ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಕೆಎಸ್ಸಾರ್ಟಿಸಿ ಬಸ್ಸುಗಳು ಓಡಾಡುತ್ತಿವೆ. ಸಂಪರ್ಕಕ್ಕೆ ಪರ್ಯಾಯ ದಾರಿ ಇಲ್ಲದ ರಸ್ತೆ ಇದಾಗಿದ್ದರೂ ದಶಕಗಳಿಂದ ಇಲ್ಲಿನದ್ದು ಹೊಂಡ, ಕೆಸರು ತುಂಬಿದ ಕಥೆ-ವ್ಯಥೆ!.

ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ಪಂಜಿಗಾರು- ಪೊಟ್ರೆ- ಕಾಣಿಯೂರು ಸಂಪರ್ಕದ ಪಂಜಿಗಾರು- ಬೊಬ್ಬೆಕೇರಿ – ಕಲ್ಪನೆ ತನಕದ ರಸ್ತೆಯ ಗೋಳು ಇದಾಗಿದೆ. ಹೊಂಡ ತಪ್ಪಿಸಿ ವಾಹನ ಚಲಾಯಿಸುವುದು ಸವಾರರ ಪಾಲಿಗೆ ಸವಾಲೆನಿಸಿದೆ. ಕನಿಷ್ಠ ದುರಸ್ತಿ ಬಗೆಗಿನ ಬೇಡಿಕೆ ಬಗ್ಗೆಯೂ ಇಲ್ಲಿ ಸ್ಪಂದನೆ ಸಿಕ್ಕಿಲ್ಲ. ಇದೇ ರಸ್ತೆಯಲ್ಲಿ ರಾಮಕುಮೇರಿ ಬಳಿ ವರ್ಷದ ಹಿಂದೆ ಮಾಡಿದ ಡಾಮರು ಕಾಮಗಾರಿಯೂ ಕಳಪೆ ಎಂದು ದೂರುತ್ತಾರೆ ಸ್ಥಳೀಯರು.

ಪ್ರಮುಖ ರಸ್ತೆ
ಕೊಡಿಯಾಲ, ಬಾಳಿಲ ಗ್ರಾ.ಪಂ. ವ್ಯಾಪ್ತಿಯ ಹಲವು ಮನೆಗಳನ್ನು ಬೆಸೆದುಕೊಳ್ಳುವ ಈ ರಸ್ತೆ ಕೊಡಿಯಾಲ, ಕಲ್ಪನೆ ಆಸುಪಾಸಿನ ನಿವಾಸಿಗಳ ಸಂಚಾರಕ್ಕೆ ಇರುವ ಏಕೈಕ ರಸ್ತೆ. ಕಳೆದ 20 ವರ್ಷಗಳಿಂದ ಬೇಸಗೆಯಲ್ಲಿ ಹೊಂಡ, ಮಳೆಗಾಲದಲ್ಲಿ ಕೆಸರು ತುಂಬಿರುವುದು ಇಲ್ಲಿನ ಗೋಳು. ಜನಪ್ರತಿನಿಧಿಗಳ ಆಶ್ವಾಸನೆ ಮಾತಿಗಷ್ಟೇ ಸೀಮಿತ ಎಂದರಿತ ಊರವರು ತಾವೇ ಅಲ್ಲಲ್ಲಿ ಹೊಂಡ ಮುಚ್ಚುವ ಪ್ರಯತ್ನ ಮಾಡಿದ್ದು ಇದೆ. ಅದು ದೀರ್ಘ‌ ಕಾಲ ಫಲ ಕೊಟ್ಟಿಲ್ಲ. ಹೊಸ ಡಾಮರು ಇದಕ್ಕೆ ಪರಿಹಾರ.

ಬಸ್‌ ಓಡಾಟ
ಪ್ರತಿದಿನ ಕೊಡಿಯಾಲ ಗ್ರಾಮಕ್ಕೆ 6 ಬಾರಿ ಕೆಎಸ್ಸಾರ್ಟಿಸಿ ಬಸ್‌ ಬರುತ್ತದೆ. ಪೆರುವಾಜೆ, ಬೆಳ್ಳಾರೆ, ಬಾಳಿಲ, ಸುಳ್ಯ, ಪುತ್ತೂರು ಭಾಗಕ್ಕೆ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಅವರಿಗೆ ಈ ರಸ್ತೆ, ಬಸ್‌ ಆಧಾರ. ರಸ್ತೆಯ ದುಃಸ್ಥಿತಿ ಹೀಗೆಯೇ ಇದ್ದರೆ ಬಸ್‌ ಓಡಾಟ ಸ್ಥಗಿತಗೊಳ್ಳುವ ಆತಂಕ ಇಲ್ಲಿ ಕಾಡಿದೆ. ಸುಮಾರು 2 ಕಿ.ಮೀ. ದೂರದ ತನಕ ಪೂರ್ಣ ಹದಗೆಟ್ಟು, ಉಳಿದ ಭಾಗದಲ್ಲಿ ಡಾಮರು ಕಿತ್ತು ಹೋಗಿರುವ ರಸ್ತೆಗೆ ಹೊಸ ಡಾಮರು ಕಾಮಗಾರಿಯ ಅಗತ್ಯವಿದೆ. ದೇಗುಲ, ಗ್ರಾ.ಪಂ., ಗ್ರಾಮ ಕರಣಿಕರ ಕಚೇರಿ, ಮೂವಪ್ಪೆ, ಕೊಡಿಯಾಲದಲ್ಲಿ ಶಾಲೆಗಳು ಸಹಿತ ಜನವಸತಿ ಕೇಂದ್ರವಾಗಿರುವ ಕೊಡಿಯಾಲ ಗ್ರಾಮಕ್ಕೆ ಪುತ್ತೂರು ತಾಲೂಕಿನ ಕಾಣಿಯೂರು, ಸುಳ್ಯ ತಾಲೂಕಿನ ಬೆಳ್ಳಾರೆಗೆ ಸಂಪರ್ಕ ರಸ್ತೆ ಇದಾಗಿದೆ.

ದುರಸ್ತಿಯಾದರೂ ಮಾಡಿ
ಕಳೆದ ಹಲವು ವರ್ಷದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ನೂರಾರು ಮಂದಿ ಇದೇ ರಸ್ತೆಯಲ್ಲಿಯೇ ಓಡಾಡುತ್ತಾರೆ. ಹೊಸ ರಸ್ತೆ ನಿರ್ಮಿಸಲು ಅನುದಾನ ಇಲ್ಲದಿದ್ದರೆ ಕನಿಷ್ಠ ದುರಸ್ತಿಯಾದರೂ ಮಾಡಬೇಕು.
ಸಂತೋಷ್‌ ಕುಮಾರ್‌, ಪೆರಿಯಾನ

ವಾಹನ ಚಾಲನೆ ಕಷ್ಟ
ಇಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಅಲ್ಲಲ್ಲಿ ಹೊಂಡ ತುಂಬಿ ಸಂಚಾರವೇ ದುಸ್ತರವಾಗಿದೆ. ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
– ಹರ್ಷಿತ್‌ ಪೊಟ್ರೆ, ಸ್ಥಳೀಯ

ವಿಶೇಷ ವರದಿ

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.