ಮಡಂತ್ಯಾರು – ಪಾಂಡವರಕಲ್ಲು:  ಬದಲಿ ರಸ್ತೆಗೆ ಸೂಚನೆ


Team Udayavani, Jun 26, 2018, 2:35 AM IST

parenki-road-25-6.jpg

ಮಡಂತ್ಯಾರು : ಮಡಂತ್ಯಾರು- ಪಾಂಡವರಕಲ್ಲು ಸಂಪರ್ಕ ರಸ್ತೆಯ ಪೆದ್ಯಾರು ಎಂಬಲ್ಲಿ ಸೇತುವೆ ಬದಿ ಮಣ್ಣು ಕುಸಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ. ಘನ ವಾಹನ ಸಂಚಾರ ಸ್ಥಗಿತವಾಗಿದ್ದು, ಲಘು ವಾಹನಗಳು ಮಾತ್ರ ಹೋಗುತ್ತಿದೆ. ಸಂಪೂರ್ಣ ಸಂಪರ್ಕ ಕಡಿತಗೊಳ್ಳಲು ಕ್ಷಣಗಣನೆ ನಡೆಯುತ್ತಿದೆ. ಸೋಮವಾರ ಮಧ್ಯಾಹ್ನ ಮಣ್ಣು ಕುಸಿದಿದ್ದು, ತತ್‌ ಕ್ಷಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದಲಿ ರಸ್ತೆ ಬಳಸುವಂತೆ ಸೂಚನೆ ನೀಡಿದ್ದಾರೆ.

4.3 ಕೋಟಿ ರೂ. ಮಂಜೂರು
ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಸೇತುವೆಯಂತಿರುವ ಮಡಂತ್ಯಾರು – ಪಾಂಡವರಕಲ್ಲು ರಸ್ತೆಯ ಅಭಿವೃದ್ಧಿಗಾಗಿ ಜನ ಹೋರಾಟ ನಡೆಸುತ್ತಿದ್ದರು. ಜಿ.ಪಂ. ರಸ್ತೆಯಾಗಿದ್ದ ಇದನ್ನು ಮೇಲ್ದರ್ಜೆಗೇರಿಸಿ ಕಾಮಗಾರಿ ನಡೆಸುವುದಾಗಿ ಬೆಳ್ತಂಗಡಿಯ ಆಗಿನ ಶಾಸಕ ವಸಂತ ಬಂಗೇರ ಭರವಸೆ ನೀಡಿದ್ದರು. ಈ ರಸ್ತೆಗೆ 4.3 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಕಾಮಗಾರಿಯಿಂದ ತೊಂದರೆ
ಪೆದ್ಯಾರು ಸೇತುವೆ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕುಸಿತಕ್ಕೆ ಕಾರಣವಾಗಿದೆ. ಸೇತುವೆ ಕಿರಿದಾಗಿದ್ದರೂ ಸಂಚಾರಕ್ಕೆ ತೊಂದರೆಯಾಗಿರಲಿಲ್ಲ. ಆದರೆ ಕಾಮಗಾರಿ ನಡೆಸುವಾಗ ಸೇತುವೆ ಬದಿಯಿಂದಲೇ ಮಣ್ಣು ಅಗೆದಿದ್ದು ಕುಸಿತಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.

ಸಂಪರ್ಕ ಕಡಿತದಿಂದ ತೊಂದರೆ
ಘನ ವಾಹನ ಸಂಚಾರ ಸ್ಥಗಿತವಾಗಿದ್ದು ಜನರು ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ಬದಲಿ ರಸ್ತೆ ಇದ್ದರೂ 2-3 ಕಿ.ಮೀ. ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಮಡಂತ್ಯಾರು ಕಕ್ಯಪದವು ಬಸ್‌ ಸಂಚಾರವೂ ಇದೆ. ಕಕ್ಯಪದವು ಜನತೆ ಮಡಂತ್ಯಾರು ಮೂಲಕವೇ ಬೆಳ್ತಂಗಡಿ, ಮಂಗಳೂರಿಗೆ ತೆರಳುತ್ತಾರೆ. ಸಂಪರ್ಕ ಕಡಿತವಾದರೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇದೆ.

ಘನ ವಾಹನ ಸಂಚಾರದಿಂದ ಹದಗೆಟ್ಟ ರಸ್ತೆ
ಮಡಂತ್ಯಾರು – ಪಾಂಡವರ ಕಲ್ಲು ರಸ್ತೆ ಎರಡು ತಾಲೂಕುಗಳನ್ನು ಒಳಗೊಂಡಿದ್ದು, ಕೊಮಿನಡ್ಕವರೆಗೆ ಬೆಳ್ತಂಗಡಿ, ಆನಂತರ ಬಂಟ್ವಾಳ ತಾಲೂಕಿಗೆ ಸೇರುತ್ತದೆ. ಕಕ್ಯಪದವಿನಿಂದ ಕೋಮಿನಡ್ಕವರೆಗೆ ಉತ್ತಮ ಡಾಮರು ರಸ್ತೆಯಿದೆ. ಕೋಮಿನಡ್ಕದಿಂದ ಮಡಂತ್ಯಾರು ಡಾಮರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜಿ.ಪಂ. ರಸ್ತೆಯಾಗಿದ್ದಾಗ ಅನುದಾನದ ಕೊರತೆ ನೆಪದಲ್ಲಿ ಬಾಕಿಯಾಗಿದ್ದರೂ ಜಿಲ್ಲಾ ಪಂಚಾಯತ್‌ ರಸ್ತೆಯ ಸಾಮರ್ಥ್ಯಕ್ಕಿಂತ ಹೆಚ್ಚು  ಭಾರ ಹೊತ್ತ ವಾಹನಗಳು ಸಂಚರಿಸುತ್ತಿದ್ದವು. ಕಲ್ಲಿನ ಕೋರೆಗಳಿಂದ ಬರುವ ಲಾರಿಗಳೂ  ಇದೇ ರಸ್ತೆಯನ್ನು ಬಳಸುತ್ತಿದ್ದು, ರಸ್ತೆ ದುಸ್ಥಿತಿಗೆ ತಲುಪಿದೆ. ಬೆರ್ಕಳ, ಪದವು, ಕಜೆಕಾರು ಕೋರೆಗಳ ಲಾರಿಗಳು ಮಾತ್ರವಲ್ಲದೆ ಸರಪಾಡಿಯಿಂದ ಕಳ್ಳ ಸಾಗಣಿಕೆಯ ಮರಳು ಲಾರಿಗಳು ಈ ರಸ್ತೆಯನ್ನು ಬಳಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಮಕ್ಕಳಿಗೆ ಸಂಕಷ್ಟ
ಕಕ್ಯಪದವಿನಿಂದ ಮಡಂತ್ಯಾರು, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆ, ಮಂಗಳೂರಿಗೆ ತೆರಳುವ ಶಾಲಾ ಕಾಲೇಜು ಮಕ್ಕಳಿಗೆ ಸಂಪರ್ಕ ಕಡಿತ ದಿಂದ ಸಂಕಷ್ಟ ಎದುರಾಗಲಿದೆ. 200ಕ್ಕೂ ಹೆಚ್ಚು ಮಕ್ಕಳು ಇದೇ ರಸ್ತೆ ಮೂಲಕ ಕಕ್ಯಪದವಿನಿಂದ ಬಸ್‌, ಆಟೋ ಮತ್ತು ಜೀಪ್‌ ಮೂಲಕ ತೆರಳುತ್ತಿದ್ದಾರೆ. ಸಂಪರ್ಕ ಕಡಿತವಾದರೆ ಸಕಾಲದಲ್ಲಿ ತಲುಪಲು ಸಮಸ್ಯೆಯಾಗಬಹುದು.

ಬದಲಿ ರಸ್ತೆಯೂ  ಸರಿಯಿಲ್ಲ
ಸುರಕ್ಷತೆ ದೃಷ್ಟಿಯಿಂದ ಬದಲಿ ರಸ್ತೆ ಸೂಚಿಸಲಾಗಿದ್ದು ಮಡಂತ್ಯಾರು – ಬಂಗೇರಕಟ್ಟೆ ರಸ್ತೆ ಉತ್ತಮವಾಗಿದೆ. ಕೋಡ್ಲಕ್ಕೆ ರಸ್ತೆ ಅರ್ಧದಷ್ಟು ಮಾತ್ರ ಡಾಮರು ಹೊಂದಿದ್ದು, ರಕ್ತೇಶ್ವರಿಪದವುವರೆಗೆ ಮಣ್ಣಿನ ರಸ್ತೆಯಾಗಿದೆ. ಅದು ಮೊದಲೇ ಕೆಸರುಮಯವಾಗಿದ್ದು, ಘನವಾಹನ ಸಂಚಾರ ಪ್ರಾರಂಭವಾದರೆ ಇನ್ನಷ್ಟು ದುಸ್ಥಿಗೆ ತಲುಪಬಹುದು ಎನ್ನುತ್ತಾರೆ ಸ್ಥಳಿಯರು.

ಶಾಸಕರಲ್ಲಿ ಮನವಿ
ಪಾಂಡವರ ಕಲ್ಲು – ಬೆರ್ಕಳವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಮರುಡಾಮರು ಕಾಮಗಾರಿ ನಡೆಯದೆ ಬಹಳ ವರ್ಷಗಳೇ ಕಳೆದಿವೆ. ಈ ರಸ್ತೆ ಅಭಿವೃದ್ಧಿಗೆ ಅನುದಾನಕ್ಕಾಗಿ ಹಿಂದಿನ ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿತ್ತು. ರಸ್ತೆ ಅಭಿವೃದ್ಧಿಯ ಅನುದಾನಕ್ಕಾಗಿ ಶಾಸಕರಲ್ಲಿ ಮನವಿ ಮಾಡಲಾಗುವುದು. 
– ವಜ್ರ ಪೂಜಾರಿ ಬಾರ್ಬೊಟ್ಟು, ಅಧ್ಯಕ್ಷರು, ಬಡಗಕಜೆಕಾರು ಗ್ರಾ.ಪಂ.

ಮೋರಿ ಕುಸಿತ
ಮಿತಿ ಮೀರಿ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗಿದ್ದು, ಪಾರೆಂಕಿ ದೇವಸ್ಥಾನದ ಬಳಿ ಮೋರಿಯೊಂದು ಕುಸಿಯುವ ಹಂತದಲ್ಲಿದೆ. ಕೆಲವು ತಿಂಗಳ ಹಿಂದೆ ಲಾರಿಯೊಂದು ಮೋರಿಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ತಡೆಗೋಡೆ ಕುಸಿತವಾಗಿತ್ತು.

ಬದಲಿ ರಸ್ತೆಗೆ ಸೂಚನೆ
ಪೆದ್ಯಾರು ಸೇತುವೆ ಬಳಿ ಕುಸಿತದಿಂದಾಗಿ ಮಡಂತ್ಯಾರು – ಪಾಂಡವರಕಲ್ಲು ಹೋಗುವ ವಾಹನ ಸವಾರರಿಗೆ ಸುರಕ್ಷತೆಯ ದೃಷ್ಟಿಯಿಂದ ಬದಲಿ ರಸ್ತೆಯಾದ ಮಡಂತ್ಯಾರು – ಬಂಗೇರಕಟ್ಟೆ-ಕೋಡ್ಲಕ್ಕೆ ಮೂಲಕ ರಕ್ತೇಶ್ವರಿ ಪದವು ರಸ್ತೆಯನ್ನು ಬಳಸಬಹುದು.
– ಗೋಪಾಲಕೃಷ್ಣ ಕೆ., ಗ್ರಾ.ಪಂ. ಅಧ್ಯಕ್ಷರು, ಮಡಂತ್ಯಾರು 

ಇನ್ನೂ ಹಸ್ತಾಂತರವಾಗಿಲ್ಲ
ಜಿಲ್ಲಾ ಪಂಚಾಯತ್‌ ಗೆ ಒಳಪಟ್ಟಿದ್ದ ಮಡಂತ್ಯಾರು ಪಾಂಡವರಕಲ್ಲು ರಸ್ತೆ ಮೇಲ್ದರ್ಜೆಗೇರಿಸಿ ಲೋಕೋಪಯೋಗಿ ರಸ್ತೆಯಾಗಿ ಮಾರ್ಪಾಡಾಗಬೇಕಿತ್ತು. ಆದರೆ ಇಲಾಖೆಗೆ ಇನ್ನೂ ಹಸ್ತಾಂತರವಾಗಿಲ್ಲ. ಟೆಂಡರ್‌ ಕೂಡ ಆಗಿಲ್ಲ. ಗುತ್ತಿಗೆದಾರರು ಎಂಜಿನಿಯರ್‌ ಬಳಿ ಕೇಳದೆಯೇ, ಅಗ್ರಿಮೆಂಟ್‌ ಕೂಡ ಆಗದೆ  ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಪೆದ್ಯಾರು ಬಳಿ ಕಿರಿದಾದ ರಸ್ತೆಯಿರುವ ಕಾರಣ ಸ್ಥಳೀಯ ಜಾಗದ ಮಾಲಕರಲ್ಲಿ ಮಾತುಕತೆ ನಡೆಸಿ ಬಳಿಕ ಸೇತುವೆ ನಿರ್ಮಾಣದ ಬಗ್ಗೆ ತೀರ್ಮಾನಿಸಲು ನಿರ್ಧರಿಸಲಾಗಿತ್ತು. ಇದಾವುದನ್ನೂ ಮಾಡದೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ರಸ್ತೆ ಕುಸಿತಕ್ಕೆ ಗುತ್ತಿಗೆದಾರರೇ ನೇರ ಹೊಣೆ.
– ಗುರುಪ್ರಸಾದ್‌, PWD ಎಂಜಿನಿಯರ್‌, ಬೆಳ್ತಂಗಡಿ

— ಪ್ರಮೋದ್‌ ಬಳ್ಳಮಂಜ

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.