ರಸ್ತೆ ದುರವಸ್ಥೆ: ಚತ್ರಪ್ಪಾಡಿಯಲ್ಲಿ ಬೋರ್ಡ್ ಅಳವಡಿಸಿ ಪ್ರತಿಭಟನೆ
Team Udayavani, Jan 27, 2020, 5:02 AM IST
ಗುತ್ತಿಗಾರು: ಇಲ್ಲಿನ ಚತ್ರಪ್ಪಾಡಿ-ಕಮಿಲ ರಸ್ತೆ ತೀರಾ ಹದೆಗೆಟ್ಟಿದ್ದು, ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಚತ್ರಪ್ಪಾಡಿ ಗ್ರಾಮಸ್ಥರು ಬೋರ್ಡ್ ಅಳವಡಿಸಿ ಪ್ರತಿಭಟಿಸಿದ್ದಾರೆ.
ಗುತ್ತಿಗಾರಿನಿಂದ ಚತ್ರಪ್ಪಾಡಿ ಕಮಿಲ ಮಾರ್ಗವಾಗಿ ಹಾದುಹೋಗುವ ಈ ರಸ್ತೆ ಬಳ್ಪ, ಪಂಜ ಸಂಪರ್ಕಕ್ಕೆ ಈ ರಸ್ತೆ ಅಗತ್ಯವಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಪ್ರಯಾಣಿಕರು, ವಾಹನಗಳು ಸಂಚರಿಸುತ್ತವೆ. 7 ಕಿ.ಮೀ. ಉದ್ದವಿರುವ ಈ ಸಂಪರ್ಕ ರಸ್ತೆಯ ಕಮಿಲ ಬಳಿ 3 ಕಿ.ಮೀ.ನಷ್ಟು ಕಾಂಕ್ರೀಟ್ ಆಗಿ ಅಭಿವೃದ್ಧಿಯಾಗಿದೆ. ಆದರೆ ಗುತ್ತಿಗಾರು ಮುಖ್ಯ ರಸ್ತೆಯಿಂದ ದೇವಸ್ಯ ವರೆಗಿನ 2 ಕಿ.ಮೀ. ರಸ್ತೆ ತೀರಾ ಹದೆಗೆಟ್ಟಿದೆ. ಹಲವು ವರ್ಷಗಳಿಂದ ಈ ಭಾಗ ಡಾಮರು ಕಾಣದೆ ನಾದುರಸ್ತಿಯಲ್ಲಿದೆ. ಹಲವು ಬಾರಿ ಗ್ರಾಮಸಭೆಗಳಲ್ಲಿ, ಜನಪ್ರತಿನಿಧಿಗಳಲ್ಲಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದರೂ ಯಾವುದೇ ಅನುದಾನ ಮಂಜೂರಾಗಿಲ್ಲ. ಈ ರಸ್ತೆಯ ದುರವಸ್ಥೆಯಿಂದ ಬೇಸತ್ತ ಜನ ಫಲಕ ಅಳವಡಿಸಿದ್ದಾರೆ.
“ನಾವು ನಿಮಗೆ ಓಟು ನೀಡಿ ಪ್ರಮಾದ ಮಾಡಿದ್ದು, ಇನ್ನು ಈ ರೀತಿಯ ತಪ್ಪಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ದಯವಿಟ್ಟು ರಸ್ತೆ ದುರಸ್ತಿ ಮಾಡಿ, ದಮ್ಮಯ್ಯ’ ಎನ್ನುವ ಮನವಿ ಮಾಡಿರುವ ಫಲಕ ಅಳವಡಿಸಿ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು