ಉಜಿರೆ – ಚಾರ್ಮಾಡಿ: ಹೆದ್ದಾರಿ ಬದಿಯ ಮರಗಳ ತೆರವು
Team Udayavani, Jul 27, 2018, 1:05 AM IST
ಬೆಳ್ತಂಗಡಿ: ಉಜಿರೆ-ಚಾರ್ಮಾಡಿ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿ ಮರಗಳ ತೆರವು ಪ್ರಕ್ರಿಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ. ಗುರುವಾರ ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಪ್ರದೇಶದಲ್ಲಿ ಮರಗಳನ್ನು ತೆರವು ಮಾಡಲಾಗಿದೆ. ಅಪಾಯಕಾರಿ ಮರಗಳು ಹೆದ್ದಾರಿಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ಹೆದ್ದಾರಿಗೆ ಬಾಗಿವೆ ಅಪಾಯಕಾರಿ ಮರಗಳು’ ಎಂಬ ಸಚಿತ್ರ ವರದಿ ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದನೆ ಎಂಬಂತೆ ಇದೀಗ ಮರಗಳನ್ನು ತೆರವುಗೊಳಿಸಲಾಗಿದೆ.
ಸೊಮಂತ್ತಡ್ಕ ಜಂಕ್ಷನ್ ಕಾಜೂರುಕ್ರಾಸ್ ಬಳಿ ಹೆಬ್ಬಲಸು ಮರವನ್ನು ತೆರವುಗೊಳಿಸುವ ಸಂದರ್ಭ ಗುರುವಾರ ಸಂಜೆ ಹೆದ್ದಾರಿಯಲ್ಲಿ ಕೊಂಚ ಟ್ರಾಫಿಕ್ ಜಾಮ್ ಸಮಸ್ಯೆಯೂ ಎದುರಾಯಿತು. ಮರ ತೆರವುಗೊಂಡ ಬಳಿಕ ಸಂಚಾರ ಸುಗಮ ಸ್ಥಿತಿಗೆ ಮರಳಿತ್ತು. ಪ್ರಸ್ತುತ ಸುಮಾರು 10 ಮರಗಳನ್ನು ತೆರವುಗೊಳಸಲಾಗಿದೆಯಾದರೂ ಇನ್ನಷ್ಟು ಮರಗಳು ಹೆದ್ದಾರಿಗೆ ಬಾಗಿಕೊಂಡಿವೆ. ಮರಗಳನ್ನು ತೆರವುಗೊಳಿಸುವುದಕ್ಕೆ ಪರ ವಾನಿಗೆ ಸಿಕ್ಕಿದೆಯಾದರೂ ತಂತಿ ತೆರವು ಗೊಳಿಸದೆ ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ