ನೆರೆ ಸಂತ್ರಸ್ತರಿಗೆ ಹಸ್ತಾಂತರವಾಗದ ಮನೆ

ಆಮೆಗತಿಯಲ್ಲಿದೆ ಕಾಮಗಾರಿ, ಆತಂಕದಲ್ಲಿ ಸಂಪಾಜೆ ಸಂತ್ರಸ್ತರು

Team Udayavani, May 20, 2019, 3:10 PM IST

sampaje

ಅರಂತೋಡು: ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿಯ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ವರ್ಷವೊಂದು ಕಳೆದರೂ ಪೂರ್ಣಗೊಂಡಿಲ್ಲ. ಕೆಲಸ ಆಮೆಗತಿಯಲ್ಲಿದ್ದು, ಈ ಮಳೆಗಾಲಕ್ಕೆ ಮುನ್ನ ಹಸ್ತಾಂತರವಾಗುವ ಭರವಸೆ ಇಲ್ಲ.

ಜೋಡು ಪಾಲ, 2ನೇ ಮೊಣ್ಣಂಗೇರಿ ಯಲ್ಲಿ ನೆರೆ, ಭೂಕುಸಿತ ದಿಂದ ಅನೇಕರು ಸಂತ್ರಸ್ತ ರಾಗಿದ್ದರು. ಇವರಲ್ಲಿ ಅರ್ಹ ರಿಗೆ ಮನೆ ಕಟ್ಟಿಕೊಡುವ ಭರವಸೆ ಯನ್ನು ಕೊಡಗು ಜಿಲ್ಲಾಡಳಿತ ನೀಡಿತ್ತು. ಇವುಗಳ ನಿರ್ಮಾಣ ಕೊಡಗಿನ ಆರು ಕಡೆ ನಡೆಯುತ್ತಿದೆ. ಸಂಪಾಜೆ ಮತ್ತು ಜೋಡುಪಾಲ, ಎರಡನೇ ಮೊಣ್ಣಂಗೇರಿಗಳಿಗೆ ಮದೆನಾಡು ಗ್ರಾಮದ ಗೋಳಿಕಟ್ಟೆ ಯಲ್ಲಿ 11 ಎಕ್ರೆ ಜಾಗದಲ್ಲಿ 80 ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ನಿಧಾನಗತಿ
ಗೋಳಿಕಟ್ಟೆಯಲ್ಲಿ ಮನೆಗಳ ಕಾಮಗಾರಿ ಅತ್ಯಂತ ನಿಧಾನಗತಿ ಯಲ್ಲಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುತ್ತದಾದರೂ ಮೇ ಕೊನೆ ವೇಳೆಗೆ ಮನೆ ಪೂರ್ಣವಾಗದು ಎನ್ನುವ ಆತಂಕ ಸಂತ್ರಸ್ತರದು. ವಾರದ ಹಿಂದೆ ಜೋಡುಪಾಲ, ಮೊಣ್ಣಂಗೇರಿ ಪರಿಸರದಲ್ಲಿ ಒಂದು ಭಾರೀ ಮಳೆ ಸುರಿದು ಕಳೆದ ಆಗಸ್ಟ್‌ನ ಸಂಕಷ್ಟವನ್ನು ಸ್ಮರಣೆಗೆ ತಂದಿತ್ತು.

ಎಲ್ಲರಿಗೂ ಇಲ್ಲ
ಗೋಳಿಕಟ್ಟೆಯ 80 ಮನೆಗಳನ್ನು ಎರಡನೇ ಮೊಣ್ಣಂಗೇರಿ, ಜೋಡು ಪಾಲ, ಸಂಪಾಜೆ, ಕಾಟಿಗೇರಿ ಭಾಗದ ಸಂತ್ರಸ್ತರಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಈ ಭಾಗ ದಲ್ಲಿ ಮನೆ ಕಳೆದುಕೊಂಡವರು ನೂರಕ್ಕೂ ಅಧಿಕ ಮಂದಿ ಇದ್ದು, ಪ್ರಥಮ ಪಟ್ಟಿಯಲ್ಲಿದ್ದವರಿಗೆ ಮನೆ ನೀಡಲಾಗುವುದು. ಉಳಿದವರಿಗೆ ತಿಂಗಳ ಮನೆ ಬಾಡಿಗೆ 10,000 ರೂ.ಗಳನ್ನು ಮುಂದುವರಿಸಲಾಗುತ್ತದೆ.

ಬಾಡಿಗೆ ಮನೆ ವಾಸ ಕಡಿಮೆ
ಸರಕಾರ ಬಾಡಿಗೆ ನೀಡುತ್ತಿದ್ದರೂ ಕೆಲವರು ತಮ್ಮ ಹರುಕಲು ಮನೆ ಯಲ್ಲೇ ವಾಸ್ತವ್ಯ ಇದ್ದು, ಬಾಡಿಗೆ ಹಣವನ್ನು ಇತರ ಖರ್ಚುವೆಚ್ಚಕ್ಕೆ ಬಳಸು ತ್ತಿದ್ದಾರೆ. ಕೆಲವರು ಮಾತ್ರ ಬಾಡಿಗೆ ಮನೆಯಲ್ಲಿದ್ದಾರೆ. ಇನ್ನು ಕೆಲವರು ಭೂಕುಸಿತವಾದ ಪ್ರದೇಶದಲ್ಲೇ ಇದ್ದಾರೆ. ಬಾಡಿಗೆ ಹಣ ಪಡೆದು ಅಪಾಯಕಾರಿ ಸ್ಥಳದಲ್ಲೇ ವಾಸ್ತವ್ಯ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಥವರಿಗೆ ಸೂಚನೆ ಕೊಟ್ಟಿದೆ.

ಬಾಡಿಗೆ ಮನೆ ಇಲ್ಲ
ಬಾಡಿಗೆ ಮನೆ ದೊರೆಯುತ್ತಿಲ್ಲ. ದೊರೆತರೂ ಜಮೀನು, ಕೆಲಸದ ಸ್ಥಳಕ್ಕೆ ದೂರ. ಗೋಳಿಕಟ್ಟೆ ತುಂಬಾ ಒಳಭಾಗವಾಗಿದ್ದು, ಅಲ್ಲಿ ಸರಕಾರಿ ಬಸ್ಸು ಮತ್ತು ಇತರ ಖಾಸಗಿ ವಾಹನ ಸಂಚಾರ ಇಲ್ಲ ಎಂಬ ಅಸಮಾಧಾನ ಸಂತ್ರಸ್ತರದು.

ಶಾಲೆಯಲ್ಲಿ ವಾಸ
ನೆರೆ ಸಂತ್ರಸ್ತ 5 ಕುಟುಂಬಗಳ 20 ಮಂದಿ ಸದಸ್ಯರು ಈಗಲೂ ಕಲ್ಲುಗುಂಡಿ ಪ್ರಾ. ಶಾಲೆಯಲ್ಲಿ ವಾಸವಿದ್ದಾರೆ. ಈ ಪೈಕಿ ಅರ್ಹ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆ ನೀಡಲಾಗುತ್ತಿದೆ. ಮಳೆಗಾಲದ ಮೊದಲು ಮನೆ ನಿರ್ಮಾಣ ವಾಗದಿದ್ದರೆ ಮತ್ತು ಎಲ್ಲರಿಗೂ ಮನೆ ದೊರೆಯಲು ಅವಕಾಶ ಇಲ್ಲದಿರುವುದರಿಂದ ಈ ಮಳೆಗಾಲವೂ ಪುನರ್ವಸತಿ ಕೇಂದ್ರ ತೆರೆಯುವ ಸಾಧ್ಯತೆ ಇದೆ.

ಶೀಘ್ರ ಹಸ್ತಾಂತರ
ಕೊಡಗಿನ ಕೆಲವು ಭಾಗಗಳಲ್ಲಿ ಈಗಾಗಲೇ ನಿರಾಶ್ರಿತರಿಗೆ ಪುನರ್ವಸತಿ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ಪೂರ್ಣಗೊಂಡಿದೆ. ಮದೆನಾಡು ಪ್ರದೇಶದ ಗೋಳಿಕಟ್ಟೆಯಲ್ಲಿ 80 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತ ತಲುಪಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲಾಡಳಿತ ಅದನ್ನು ಫ‌ಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯವನ್ನು ಜರೂರಾಗಿ ಮಾಡಲಾಗುವುದು.
ಜವರೇಗೌಡ, ಉಪವಿಭಾಗಾಧಿಕಾರಿ, ಕೊಡಗು

ಮನೆ ನಿರ್ಮಾಣ ಕೆಲಸ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ನನ್ನ ಹೆಸರು ಎರಡನೇ ಲಿಸ್ಟ್‌ನಲ್ಲಿದೆ. ನಮಗೂ ಬೇಗನೆ ಮನೆ ದೊರೆಯಬೇಕು.
ರಾಮಕೃಷ್ಣ, ಜೋಡುಪಾಲ ಸಂತ್ರಸ್ತ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.