ಯಕ್ಷಗಾನದಿಂದ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ
ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ; ಪ್ರಶಸ್ತಿ ಪ್ರದಾನ
Team Udayavani, May 23, 2019, 6:10 AM IST
ಮೂಡುಬಿದಿರೆ: ಯಕ್ಷ ಗಾನ ಜನರಲ್ಲಿ ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕಾರ ಮೂಡಿಸುತ್ತ ಬಂದಿದೆ. ಅದರಲ್ಲೂ ಮಕ್ಕಳಿಗೆ ಯಕ್ಷ ಗಾನದ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ ಅವರು ಸಂಸ್ಕಾ ರವಂತರಾಗಿ ಬೆಳೆಯಲು ಸಾಧ್ಯ ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.
ಯಕ್ಷಗಾನ ಕಲಾವಿದ ಮೂಡುಬಿದಿರೆ ಮಾಧವ ಶೆಟ್ಟಿ ಅವರ ಸಂಸ್ಮರಣೆ,ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಧವ ಶೆಟ್ಟಿ ಅವರಂತಹ ಹಿರಿಯ ಕಲಾವಿದರ ಕಲಾ ಸಾಧನೆ ಇಂದಿನ ಕಲಾವಿದರಿಗೆ ಮಾದರಿ ಎಂದರು.
ಯಕ್ಷ ಸಂಗಮದ ಸಂಚಾಲಕ ಎಂ.ಶಾಂತರಾಮ ಕುಡ್ವ ಅವರು ಮಾಧವ ಶೆಟ್ಟಿ ಅವರ ಸಂಸ್ಮರಣೆಗೈದರು. ಮಾಧವ ಶೆಟ್ಟಿ ಅವರು ಪುಂಡು ವೇಷ, ರಾಜ ವೇಷಗಳಿಂದ ತೊಡಗಿ ಎಲ್ಲ ಬಗೆಯ ವೇಷಧಾರಿಯಾಗಿ, ಸಮರ್ಥ ಅರ್ಥ ಧಾರಿ ಯಾಗಿ ಪ್ರಸಿದ್ಧರಾದವರು. ತುಳು ಪ್ರಸಂಗಗಳ ಪಾತ್ರಚಿತ್ರಣದಲ್ಲೂ ಮಿಂಚಿ ದವರು ಎಂದು ಅವರು ಬಣ್ಣಿಸಿದರು.
ಅನುಭವಿ ಕಲಾವಿದ
ಇರುವೈಲು ಮೇಳದ ಮಾಜಿ ಸಂಚಾಲಕ, ನಿವೃತ್ತ ಬ್ಯಾಂಕ್ ಅಧಿಕಾರಿ ಐ. ಕುಮಾರ ಶೆಟ್ಟಿ ಅವರು ತಮ್ಮ ಅಭಿನಂದನ ಭಾಷಣದಲ್ಲಿ “ರಂಗಸ್ಥಳದ ಗುರಿಕಾರ, ಅಭಿನವ ಕೋಟಿ ಬಿರುದಾಂಕಿತ ದಾಸಪ್ಪ ರೈ ಅವರು ವಹಿಸಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಅಪರೂಪದ ಕಲಾವಿದರಲ್ಲಿ ಓರ್ವರು; ಯಕ್ಷಗಾನ ಕಲಾವಿದ, ಮೇಳಗಳ ಯಜಮಾನರಾಗಿ ಅನುಭವಿ’ ಎಂದು ಕೊಂಡಾಡಿದರು.
ಕಲಾ ಜೀವನದಲ್ಲಿ ಸಂತೃಪ್ತಿ
ಸಮ್ಮಾನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ದಾಸಪ್ಪ ರೈ ಅವರು, ಯಕ್ಷರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ತಮಗೆ ಯಕ್ಷಗಾನ ಬಯಲಾಟ ಅಕಾಡೆಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳೊಂದಿಗೆ ಪ್ರತಿಷ್ಠಿತ ಬೋಳಾರ ನಾರಾಯಣ ಶೆಟ್ಟಿ , ಅಳಿಕೆ ರಾಮಯ್ಯ ರೈ, ಪುಳಿಂಚ ರಾಮಯ್ಯ ರೈ, ಕರ್ನೂರು ಕೊರಗಪ್ಪ ರೈ ಇವರ ಹೆಸರಿನ ಪ್ರಶಸ್ತಿಗಳು ಲಭಿಸಿದ್ದು ಈಗ ತಮ್ಮ ಒಡನಾಡಿ ಹಿರಿಯ ಕಲಾವಿದ ಮಾಧವ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಒಲಿದು ಬಂದಿರುವುದು ತಮ್ಮ ಕಲಾಜೀವನದ ಸಂತೃಪ್ತಿಯ ಸಂಗತಿ ಎಂದು ಉದ್ಗರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ದಿವಾಕರ ಶೆಟ್ಟಿ ಭಾಗವಹಿಸಿದ್ದರು.
ಮಾಧವ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ, ಮಕ್ಕಳಾದ ಜಯರಾಮ ಶೆಟ್ಟಿ,ಶಾರದಾ ಶೆಟ್ಟಿ, ವೇದಾವತಿ ಶೆಟ್ಟಿ, ಅಳಿಯ ನೀಲೇಶ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.
ಮಾಧವ ಶೆಟ್ಟಿ ಅವರ ಮೊಮ್ಮಗ ವೇಣುಗೋಪಾಲ ಶೆಟ್ಟಿ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿ ದರು. ಪ್ರೊ| ಸದಾಶಿವ ಶೆಟ್ಟಿಗಾರ್ ಕಾರ್ಯ ಕ್ರಮ ನಿರೂಪಿಸಿ ದರು. ವಿನೋದ್ಕುಮಾರ್ ಶೆಟ್ಟಿ ವಂದಿಸಿದರು.ಬಳಿಕ, ಬೆಳ್ಮಣ್ಣು ಬಲ್ಲಿರೇನಯ್ಯ ಮಿತ್ರ ಮೇಳದಿಂದ
“ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವಿತ್ತು.
ಪ್ರಶಸ್ತಿ ಪ್ರದಾನ
ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ ವೇದಿಕೆ, ಶಿಮಂತೂರು ಸಂಘಟ ನೆಯು ಯಕ್ಷ ಸಂಗಮದ ಆಶ್ರಯದಲ್ಲಿ, ಕಲಾವಿದ, “ಬಲ್ಲಿರೇನಯ್ಯ’ ಯಕ್ಷ ಮಾಸಿಕ ಸಂಪಾದಕ ತಾರಾನಾಥ ವರ್ಕಾಡಿ ಅವರ ವಿಶೇಷ ಸಹಕಾರದೊಂದಿಗೆ ಉದ್ಯಮಿ ಕೆ. ಶ್ರೀಪತಿ ಭಟ್ ಅವರ ಅಧ್ಯ ಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾದ ಈ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ. ಎಚ್. ದಾಸಪ್ಪ ರೈ ಅವರಿಗೆ “ಮಾಧವ ಶೆಟ್ಟಿ ಪ್ರಶಸ್ತಿ’ ನೀಡಿ ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ