ಸಸಿಹಿತ್ಲು ಬೀಚ್ನಲ್ಲಿ ಈಜಾಡಲು ಬಂದ ಬೆಂಗಳೂರು ಮೂಲದ ಯುವಕರು: ಒರ್ವ ಮೃತ, ಇಬ್ಬರ ರಕ್ಷಣೆ
Team Udayavani, Dec 30, 2019, 8:02 PM IST
ಸಸಿಹಿತ್ಲು : ಬೆಂಗಳೂರು ಮೂಲದ ಮೂರು ಮಂದಿ ಯುವಕರು ಸಸಿಹಿತ್ಲು ಬೀಚ್ನಲ್ಲಿ ಈಜಾಡಲು ತೆರಳಿ, ಕಡಲ ಸೆಳೆತಕ್ಕೊಳಗಾಗಿದ್ದರಿಂದ ಒರ್ವನು ಮೃತಪಟ್ಟು ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಬೆಂಗಳೂರಿನ ಜೆ.ಪಿ.ನಗರದ ದಿ.ನೀಲಕಂಠ ಅವರ ಪುತ್ರ ಸಾತ್ವಿಕ್ (28) ಎಂದು ಗುರುತಿಸಲಾಗಿದೆ. ರಕ್ಷಣೆಗೊಳಗಾದವರನ್ನು ಬೆಂಗಳೂರಿನ ನಾಗರಬಾವಿ ನಿವಾಸಿ ಮಂಜುನಾಥ ಅವರ ಪುತ್ರ ಶ್ರೀಕಾಂತ್ (27) ಹಾಗೂ ಜೆ.ಪಿ.ನಗರದ ರಾಮಯ್ಯರ ಪುತ್ರ ಭರತ್ (28) ಎಂದು ತಿಳಿದು ಬಂದಿದೆ.
ಮೂವರೂ ಸಹ ಇಂಜಿನಿಯರಿಂಗ್ ಮುಗಿಸಿಕೊಂಡು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಡಿಸೆಂಬರ್ 28ರಂದು ಬೆಂಗಳೂರಿನಿಂದ ತಮ್ಮ ಕಾರಿನಲ್ಲಿ ಹೊರಟ ಇವರು ಕೊಲ್ಲೂರು, ಹೊನ್ನಾವರ, ಉಡುಪಿ ಮಠಕ್ಕೆ ಭೇಟಿ ನೀಡಿ ಸೋಮವಾರ ಸಂಜೆ 5 ಕ್ಕೆ ಸಸಿಹಿತ್ಲುವಿನ ಬೀಚ್ ಬಳಿಗೆ ಬಂದಿದ್ದಾರೆ.
ಹೆಜಮಾಡಿ ಕೋಡಿಯ ಮೀನುಗಾರರಾದ ಯಶ್ಪಾಲ್, ರಾಕೇಶ್ ಅವರ ತಂಡವು ದೋಣಿಯಲ್ಲಿ ಮೀನು ಹಿಡಿಯುತ್ತಿದ್ದಾಗ ಯುವಕರ ಬೊಬ್ಬೆ ಕೇಳಿ ತಕ್ಷಣಕ್ಕೆ ರಕ್ಷಣೆಗೆ ಮುಂದಾದರೂ ಸಹ ಸಾತ್ವಿಕ್ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಕೊನೆಗೂ ಆತನ ಮೃತ ದೇಹವನ್ನು ಮೇಲೆತ್ತಿದ್ದು, ರಕ್ಷಣೆಗೊಳಗಾದ ಶ್ರೀಕಾಂತ್ ಮತ್ತು ಭರತ್ನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ