ಸಸಿಹಿತ್ಲುವಿನ ಅಭಿವೃದ್ಧಿಗೆ ಮುಖ್ಯಮಂತ್ರಿಗೆ ನಿಯೋಗ : ಉಮಾನಾಥ ಕೋಟ್ಯಾನ್
Team Udayavani, Aug 8, 2019, 6:45 PM IST
ಹಳೆಯಂಗಡಿ: ಸಸಿಹಿತ್ಲುವಿನ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಹತ್ತಿರ ಕರಾವಳಿಯ ಎಲ್ಲಾ ಶಾಸಕರೊಂದಿಗೆ ವಿಶೇಷ ನಿಯೋಗದ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ವಿಶೇಷ ಮನವಿಯನ್ನು ಸಲ್ಲಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಸಸಿಹಿತ್ಲುವಿನ ಪ್ರದೇಶಕ್ಕೆ ಗುರುವಾರ ವಿಶೇಷ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿ, ಸಮುದ್ರ ಕೊರೆತವು ಅಲ್ಲಲ್ಲಿ ಕಂಡು ಬಂದಿದೆ, ವಿವಿಧ ಇಲಾಖೆಗಳಿಂದ ಏನೆಲ್ಲಾ ಸಾಧ್ಯವಿರುವ ಯೋಜನೆಯನ್ನು ಬಳಸಿಕೊಳ್ಳಲಿದ್ದೇನೆ, ಹಾಕಿರುವ ಶಾಶ್ವತ ತಡೆಗೋಡೆಯನ್ನೇ ಬೇಧಿಸುತ್ತಿರುವ ಸಮುದ್ರ ಪ್ರಕ್ಷಬ್ದಗೊಂಡಿರುವುದು ಕಂಡು ಬಂದಿದೆ. ಎಲ್ಲೆಲ್ಲಿ ಶಾಶ್ವತ ಗೋಡೆಗಳಿಲ್ಲ ಅಲ್ಲೇಲ್ಲ ಬಳಸಲು ಪ್ರಯತ್ನ ನಡೆಸಲಿದ್ದೇನೆ ಜಿಲ್ಲಾಧಿಕಾರಿಯಲ್ಲಿ ಚರ್ಚಿಸಿದ್ದೇನೆ ಎಂದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯಿಂದ ದ್ವಿಚಕ್ರ, ಕಾರು ಮತ್ತಿತರ ವಾಹನಗಳಿಗೆ ಪಡೆಯುತ್ತಿರುವ ಪ್ರವೇಶ ಶುಲ್ಕಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು, ಸಸಿಹಿತ್ಲು ಅಳಿವೆ ಕೊಡಿಯ ನಿವಾಸಿ ಲಲಿತಾ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಹಾನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಮುಂಡ ಬೀಚ್ ಹಾಗೂ ಸಮುದ್ರ ಕೊರೆತ ಪ್ರದೇಶದಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಪಂಚಾಯಿತಿಯ ಪಿಡಿಒ ಪರಮೇಶ್ವರ್, ಕಾರ್ಯದರ್ಶಿ ಶ್ರಿಶೈಲ ಹಾಗೂ ಗ್ರಾಮ ಕರಣಿಕ ಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಬಂಗೇರ, ಚಿತ್ರಾ ಸುಕೇಶ್, ವಿನೋದ್ ಕುಮಾರ್ ಕೊಳುವೈಲು, ಸುಕೇಶ್ ಪಾವಂಜೆ, ಪಿಸಿಎ ಬ್ಯಾಂಕ್ನ ನಿರ್ದೇಶಕ ಹಿಮಕರ್ ಕದಿಕೆ, ಮೀನುಗಾರಿಕಾ ಮುಖಂಡ ಶೋಭೇಂದ್ರ ಸಸಿಹಿತ್ಲು, ವಿನೋದ್ ಮಾಸ್ಟರ್, ನಾರಾಯಣ ಕರ್ಕೇರ ಉದಯ ಸುವರ್ಣ, ಅನಿಲ್ ಸಸಿಹಿತ್ಲು, ಮನೋಜ್ ಕುಮಾರ್ ಕೆಲಸಿಬೆಟ್ಟು, ಸಂತೋಷ್ ಶೆಟ್ಟಿ, ಎಚ್.ರಾಮಚಂದ್ರ ಶೆಣೈ, ನಾಗರಾಜ್, ಮಹಾಬಲ ಅಂಚನ್, ಆನಂದ ಸುವರ್ಣ, ಸೂರ್ಯ ಕಾಂಚನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ