“ವಿಜ್ಞಾನ ನನ್ನ ವೃತ್ತಿಯಲ್ಲ; ಇಷ್ಟದ ವಿಷಯ: ಸರ್ಜ್ ಹಾರೊಕಿ
Team Udayavani, Jan 9, 2018, 10:25 AM IST
ಮಂಗಳೂರು: “ವಿಜ್ಞಾನ ನನ್ನ ವೃತ್ತಿಯಲ್ಲ. ಅದು ನನ್ನ ಇಷ್ಟದ ವಿಷಯ. 9ನೇ ವಯಸ್ಸಿಗೇ ನನಗೆ ಖಗೋಳದ ಬಗ್ಗೆ ತೀವ್ರ ಆಸಕ್ತಿ ಇತ್ತು’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ಜ್ ಹಾರೊಕಿ ಹೇಳಿದರು.
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರವಿವಾರ ನಡೆದ ವಿಜ್ಞಾನ ಸಮಾವೇಶದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ನನಗೆ ಖಗೋಳ ವಿಜ್ಞಾನಿಗಳೆಂದರೆ ಬಹಳ ಆಸಕ್ತಿ ಇತ್ತು. ಖಗೋಳಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೆ. ಅಣು ಮತ್ತು ಬೆಳಕಿಗೆ ಇರುವ ಸಂಬಂಧವನ್ನು ಕುತೂಹಲದಿಂದ ಅಧ್ಯಯನ ಮಾಡಿದ್ದೇನೆ ಎಂದು ಅವರು ಹೇಳಿದರು. ಬೆಳಕಿನ ವಿಭಜನೆ ಪ್ರಕ್ರಿಯೆಯ ಹಲವು ಆಯಾಮಗಳು ಇಂದಿಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಸ್ಮಯವಾಗಿಯೇ ಉಳಿದಿವೆ. ಈ ಕುತೂಹಲ ಜಗತ್ತಿನಲ್ಲಿ ವಿಜ್ಞಾನವನ್ನು ಅತ್ಯಂತ ಆಸಕ್ತಿದಾಯಕ ವಿಷಯವನ್ನಾಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೊಬೆಲ್ ಪುರಸ್ಕೃತ ವಿಜ್ಞಾನಿ (ರಾಸಾಯನ ಶಾಸ್ತ್ರ) ಎಡಾ ಇ. ಯೊನಾತ್ ಅವರು “ಪರಿಸರ ಸಮಸ್ಯೆ ಯಿಂದ ಪರಿಸರ ಸ್ನೇಹಿ ಆ್ಯಂಟಿ ಬಯೋಕ್ ತನಕ’ ವಿಷಯದ ಕುರಿತು ಮಾತನಾಡಿದರು. ಪರಿಸರದಲ್ಲಿ ಬೆರೆತು ಒಂದಾಗದ ಕೆಲವು ಜೈವಿಕ ಮೋಲೆಕ್ಯೂಲ್ಗಳು ಕೃಷಿ ನೀರಾವರಿ ವ್ಯವಸ್ಥೆಯ ಮೂಲಕ ಮಾನವ ದೇಹಕ್ಕೆ ಸೇರಿ ದೇಹದಲ್ಲಿ ಆ್ಯಂಟಿ ಬಯೋಟಿಕ್ ಪ್ರತಿರೋಧ ಶಕ್ತಿ ಪಸರಿಸುತ್ತವೆ ಎಂದು ವಿವರಿಸಿದರು.
ಸ್ವಾವಲಂಬನೆ ಮುಖ್ಯ
ಅಮೆರಿಕದ ಬಫೆಲೊ ವಿ.ವಿ. ಅಧ್ಯಕ್ಷ ಪ್ರೊ| ಸತೀಶ್ ಕೆ. ತ್ರಿಪಾಠಿ ಮಾತನಾಡಿ, ಜೀವನದಲ್ಲಿ ದೀರ್ಘ ಕಾಲದ ಗುರಿ ಇರಿಸಿಕೊಂಡು ಮಹತ್ತಾ$Ìಕಾಂಕ್ಷಿ ಆಗಿ ಬದಲಾವಣೆಗೆ ಸಿದ್ಧವಾಗುವುದು, ಸ್ವಾವಲಂಬಿ ಆಗಿರುವುದು ಮುಖ್ಯ ಎಂದು ಹೇಳಿದರು. ಬ್ರಹ್ಮೋಸ್ ಏರೋ ಸ್ಪೇಸ್ನ ಕಾರ್ಯನಿರ್ವಾಹಕ ನಿರ್ದೇಶಕ ವೈಸ್ ಅಡ್ಮಿರಲ್ ಎನ್.ಎನ್. ಕುಮಾರ್ ಅವರು, ಬ್ರಹ್ಮೋಸ್ ಸಾಗಿ ಬಂದ ದಾರಿಯನ್ನು ವಿವರಿಸಿದರು. ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಮಾರ್ಗದರ್ಶನದಲ್ಲಿ ಪ್ರಥಮ ಬಾಹ್ಯಾಕಾಶ ಉಡಾವಣಾ ವಾಹನ (ಎಸ್ಎಲ್ವಿ3) ಹೇಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು ಎಂಬ ಅನುಭವ ಹಂಚಿಕೊಂಡರು.
ಎಐಸಿಟಿಇ ವಾಯವ್ಯ ವಲಯ ಪ್ರಾದೇಶಿಕ ಅಧಿ ಕಾರಿ ಪ್ರೊ| ಟಿ.ಜಿ. ಸೀತಾರಾಮ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರೊ| ಎಂ.ಎನ್. ವಿದ್ಯಾಶಂಕರ್, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ| ಕೆ. ಚಿದಾನಂದ ಗೌಡ ಅವರು ನೀರಿನ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಅಮೆರಿಕದ ಲೀಡ್ಸ್ ವಿಶ್ವವಿದ್ಯಾಲಯದ ಪ್ರೊ| ರಾಬರ್ಟ್ ರಿಚಡ್ಸìನ್ ಅವರು ರೋಬೋಟಿಕ್ಸ್ ಅನ್ವೇಷಣೆ ಕುರಿತು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ