ಹತ್ತು ದಿನದಲ್ಲಿ ಗೇರು ಬೀಜದ ಸೀಸನ್‌ ಅಂತ್ಯ


Team Udayavani, May 6, 2018, 5:20 PM IST

6-May-23.jpg

ಮುಂದಿನ ಹತ್ತೇ ದಿನದಲ್ಲಿ ಗೇರು ಬೀಜದ ಸೀಸನ್‌ ಅಂತ್ಯವಾಗಲಿದೆ. ಅಷ್ಟರಲ್ಲಿ ನಿರೀಕ್ಷೆಯಷ್ಟು ಧಾರಣೆ ಏರಿಕೆ ಕಾಣುವ ಯಾವುದೇ ಸೂಚನೆ ಲಭ್ಯವಾಗುತ್ತಿಲ್ಲ. ಶನಿವಾರ ಮಾರುಕಟ್ಟೆಯಲ್ಲಿ ಗೇರುಬೀಜ ಕೆ.ಜಿ.ಗೆ 140 ರೂ. ನಂತೆ ಬಿಕರಿಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಇನ್ನೂ ಕಡಿಮೆಯೇ ಇದೆ. ಹೆಚ್ಚು- ಕಡಿಮೆ 125 ರೂ. ಗೆ ಖರೀದಿಯಾದ ಉದಾಹರಣೆಯೂ ಇದೆ. 142 ರೂ. ನಲ್ಲಿದ್ದ ಧಾರಣೆ ಹಿಂದಿನ ಶನಿವಾರ 145 ರೂ. ಗೂ ತಲುಪಿತ್ತು.

ಆದರೆ ಈ ಶನಿವಾರ ಮತ್ತೆ 140 ರೂ. ಗೆ ಆಗಿದೆ. ಹಿಂದಿನ ಶನಿವಾರ 142 ರೂ.ನಲ್ಲಿದ್ದ ಗೇರು ಬೀಜ ಧಾರಣೆ ಈ ಶನಿವಾರಕ್ಕೆ 145 ರೂ.ಗೆ ಏರಿಕೆಯಾಗಿದೆ. ಅಂದರೆ ಬೆಲೆಯಲ್ಲಿ 3 ರೂ. ಏರಿಕೆ ಕಂಡಿದೆ. ಇದು ಗೇರು ಬೀಜದ ಸೀಸನ್‌ ಆಗಿರುವುದರಿಂದ, ಬೇಡಿಕೆ ಮೂಡುತ್ತಿದೆ. ಬೇಡಿಕೆ ತಕ್ಕಂತೆ ಧಾರಣೆಯೂ ಹೆಜ್ಜೆ ಹಾಕುತ್ತಿದೆ.

ಅಡಿಕೆ
ಮಾರುಕಟ್ಟೆಗೆ ಪ್ರವೇಶಿಸುವ ಅಡಿಕೆಯ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ತಿಂಗಳ ಅಂತ್ಯಕ್ಕೆ ಒಂದಷ್ಟು ಉತ್ತಮ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರಬಹುದು. ಶನಿವಾರ ಹಳೆ ಅಡಿಕೆ ಕೆ.ಜಿ.ಗೆ 270 ರೂ., ಡಬಲ್‌ ಚೋಲು 274 ರೂ., ಹೊಸ ಅಡಿಕೆ 222 ರೂ.ಗೆ ಖರೀದಿ ನಡೆಸಿದೆ. ಹಿಂದಿನ ಶನಿವಾರ ಇದು ಕ್ರಮವಾಗಿ ಹಳೆ ಅಡಿಕೆ 265 ರೂ., ಹೊಸ ಅಡಿಕೆ 222 ರೂ.ನಲ್ಲಿ ಖರೀದಿಯಾಗಿತ್ತು. ಸದ್ಯದ ಮಟ್ಟಿಗೆ ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಿನ ನಿರೀಕ್ಷೆ ಇಟ್ಟುಕೊಂಡಿಲ್ಲ.

ಕಾಳುಮೆಣಸು
330 ರೂ. – 340 ರೂ. ನಲ್ಲಿ ಹಿಂದಿನ ವಾರ ಖರೀದಿಯಾಗಿದ್ದ ಕಾಳುಮೆಣಸು ಈ ವಾರ 325- 330 ರೂ.ಗೆ ಇಳಿಕೆಯಾಗಿದೆ. ಹಿಂದಿನ ವಾರ 10 ರೂ. ಏರಿಕೆ ಕಂಡಿದ್ದರೆ, ಈ ವಾರ 10 ರೂ. ಇಳಿಕೆ ಕಂಡಿದೆ. ಈ ಹಾವು- ಏಣಿ ಆಟದಿಂದ ಕೃಷಿಕರ ಆತಂಕ ಎಲ್ಲೆ ಮೀರುತ್ತಿದೆ. ಚುನಾವಣೆ ನಂತರವಾದರೂ ಇದಕ್ಕೊಂದು ಶಾಶ್ವತ ಪರಿಹಾರ ಸಿಗಬಹುದೇ ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. ಈಗಾಗಲೇ ಆಮದು ಸುಂಕದ ಮೇಲೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಹೇರದ ಕಾರಣ, ಧಾರಣೆಯಲ್ಲಿ ಬೆಳವಣಿಗೆಯಲ್ಲಿ ಇಲ್ಲ.

ರಬ್ಬರ್‌
ಅಂತಾರಾಷ್ಟ್ರೀಯ ಮಾರುಕಟ್ಟೆಗಳಾದ ಬ್ಯಾಂಕಾಕ್‌, ವಿಯೆಟ್ನಾಂ, ಥಾçಲ್ಯಾಂಡ್‌ಗಳಲ್ಲಿ ರಬ್ಬರ್‌ ಧಾರಣೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ. ಇತ್ತೀಚಿನ ರಬ್ಬರ್‌ ಧಾರಣೆಯ ಹಾದಿಯನ್ನು ಗಮನಿಸುವಾಗ, ರಬ್ಬರ್‌ ವಿಷಯದಲ್ಲಿ ತುಂಬಾ ಖುಷಿ ಪಡುವಂತೆಯೂ ಇಲ್ಲ.

116 ರೂ.ನಲ್ಲಿದ್ದ ಆರ್‌ಎಸ್‌ಎಸ್‌4 ದರ್ಜೆ 117.5 ರೂ., 113 ರೂ.ನಲ್ಲಿದ್ದ ಆರ್‌ಎಸ್‌ಎಸ್‌5 ದರ್ಜೆ 114 ರೂ., 108 ರೂ.ನಲ್ಲಿದ್ದ ಲಾಟ್‌ 109.5 ರೂ., 75 ರೂ.ನಲ್ಲಿದ್ದಸ್ಕ್ರಾಪ್  ದರ್ಜೆ 75 ರೂ., 68 ರೂ.ನಲ್ಲಿದ್ದ ಸ್ಕ್ರಾಪ್ 2 ದರ್ಜೆ 69.5 ರೂ.ನಲ್ಲಿ ಖರೀದಿಯಾಗಿದೆ. 

ಕೊಕ್ಕೋ
ಕೊಕ್ಕೋ ಬೀಜಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಸೀಸನ್‌ ಅವಧಿಯಲ್ಲಿರುವ ಕೊಕ್ಕೋ ಈ ವಾರ ಧಾರಣೆ ಏರಿಸಿಕೊಂಡಿದೆ. 56 ರೂ.ನಲ್ಲಿದ್ದ ಹಸಿ ಕೊಕ್ಕೋ 60 ರೂ.ಗೆ ಹಾಗೂ 175 ರೂ.ನಲ್ಲಿದ್ದ ಒಣ ಕೊಕ್ಕೋ 185 ರೂ.ಗೆ ಖರೀದಿ ನಡೆಸಿದೆ. ಮಾರುಕಟ್ಟೆ ಯಲ್ಲಿ ಉತ್ತಮ ಆವಕ ಕಂಡುಬರುತ್ತಿರುವ ಕೊಕ್ಕೋ, ಇನ್ನಷ್ಟು ಧಾರಣೆ ಏರಿಸಿಕೊಳ್ಳುವ ನಿರೀಕ್ಷೆ ಇದೆ.

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.