ಬಿಗಿ ಭದ್ರತೆ: ಮಂಗಳೂರು ಏರ್ ಪೋರ್ಟ್ ಗೆ ಹೋಗುವವರು ಬೇಗ ಹೊರಡಿ
Team Udayavani, Jan 21, 2020, 8:29 AM IST
ಮಂಗಳೂರು: ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ನಿಲ್ದಾಣಕ್ಕೆ ಹೋಗಬೇಕಾದರೆ ಟರ್ಮಿನಲ್ಗೆ ಪ್ರವೇಶಿಸುವವರೆಗೆ ಎಲ್ಲಿಯೂ ಪೊಲೀಸರಿಂದ ಪ್ರಯಾಣಿಕರು ತಪಾಸಣೆಗೆ ಒಳಗಾಗಬೇಕಾಗಿರಲಿಲ್ಲ. ನೇರವಾಗಿ ವಿಮಾನ ನಿಲ್ದಾಣದೊಳಗೆ ಬಂದು ಅನಂತರದ ಭದ್ರತಾ ಕ್ರಮಗಳನ್ನು ಪಾಲಿಸಿದರೆ ಸಾಕಿತ್ತು.
ಆದರೆ ಈ ಘಟನೆಯ ಬಳಿಕ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರು ಸೇರಿದಂತೆ ಎಲ್ಲರನ್ನೂ ಹಲವು ಕಡೆಗಳಲ್ಲಿ ಪೊಲೀಸರು ಬಿಗಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಹೆಚ್ಚು ಹೊತ್ತು ತಪಾಸಣೆಗೆ ಒಳಪಡಿಸಲಾಗುತ್ತಿರುವುದು ಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ.
ಈ ಕಾರಣಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಹೋಗುವವರು ಇನ್ನು ಸ್ವಲ್ಪ ಮುಂಚಿತವೇ ಮನೆಯಿಂದ ಹೊರಡುವುದು ಉತ್ತಮ. ಇಲ್ಲದಿದ್ದರೆ ತಪಾಸಣೆ ಕಾರಣಕ್ಕೆ ಉದ್ದೇಶಿತ ಸಮಯದೊಳಗೆ ನಿಲ್ದಾಣ ಸೇರುವುದಕ್ಕೆ ಕಷ್ಟವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ